ಬೆಂಗಳೂರು: ಬುಧವಾರವಷ್ಟೆ 29 ಮಂದಿ ಶಾಸಕರುಗಳು ನೂತನ ಸಚಿವರಾಗಿ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟವನ್ನು ಸೇರ್ಪಡೆಗೊಂಡಿದ್ದರು.ಇಂದು ನಾಳೆಯೊಳಗೆ ಖಾತೆ ಹಂಚಿಕೆ ಆಗಲಿದ್ದು ನೂತನ ಸಚಿವರಿಗೆ ಸಿಗಲಿರುವ ಸಂಭವನೀಯ ಖಾತೆಗಳ ಪಟ್ಟಿ ಈ ಕೆಳಗಿನಂತಿದೆ.
ಆರ್. ಅಶೋಕ್- ಬೆಂಗಳೂರು ನಗರಾಭಿವೃದ್ಧಿ
ಡಾ ಅಶ್ವತ್ಥ ನಾರಾಯಣ- ಐಟಿ ಬಿಟಿ ಉನ್ನತ ಶಿಕ್ಷಣ
ಡಾ.ಸುಧಾಕರ್ – ಆರೋಗ್ಯ ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ
ಎಂಟಿಬಿ ನಾಗರಾಜ್ – ಆಹಾರ ಮತ್ತು ನಾಗರೀಕ ಸರಬರಾಜು ಖಾತೆ
ಗೋವಿಂದ ಕಾರಜೋಳ – ಜಲಸಂಪನ್ಮೂಲ ಖಾತೆ
ಬಿ.ಸಿ.ನಾಗೇಶ್ – ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ
ಅರಗ ಜ್ಞಾನೇಂದ್ರ- ಅರಣ್ಯ ಖಾತೆ
ಶಶಿಕಲಾ ಜೊಲ್ಲೆಗೆ – ಸಾಂಖ್ಯಿಕ ಖಾತೆ
ಎಸ್.ಟಿ.ಸೋಮಶೇಖರ್- ಸಹಕಾರ
ಭೈರತಿ ಬಸವರಾಜ್ – ನಗರಾಭಿವೃದ್ಧ
ಎಸ್.ಅಂಗಾರ – ಬಂದರು ಮತ್ತು ಮೀನುಗಾರಿಕೆ
ಕೋಟಾ ಶ್ರೀನಿವಾಸ ಪೂಜಾರಿ – ಹಿಂದುಳಿದ ವರ್ಗ , ಮುಜರಾಯಿ, ಕನ್ನಡ ಸಂಸ್ಕೃತಿ
ಮುರುಗೇಶ ನಿರಾಣಿ – ಭಾರಿ ಮತ್ತು ಮಧ್ಯಮ ಕೈಗಾರಿಕೆ
ಉಮೇಶ್ ಕತ್ತಿ- ಲೋಕೋಪಯೋಗಿ ಖಾತೆ
ಶಿವರಾಮ್ ಹೆಬ್ಬಾರ್ – ಕಾರ್ಮಿಕ
ಮುನಿರತ್ನ – ಪೌರಾಡಳಿತ ಖಾತೆ
ಸಿ ಸಿ ಪಾಟೀಲ್- ಗಣಿ ಮತ್ತು ಭೂ ವಿಜ್ಞಾನ ಖಾತೆ
ಗೋಪಾಲಯ್ಯ – ಅಬಕಾರಿ
ನಾರಾಯಣಗೌಡ- ರೇಷ್ಮೆ ಖಾತೆ
ಮಾಧುಸ್ವಾಮಿ- ಕಾನೂನು ಸಂಸದೀಯ , ಸಣ್ಣ ನೀರಾವರಿ
ಆನಂದಸಿಂಗ್ ಪರಿಸರ – ಜೀವಶಾಸ್ತ್ರ
ಯಡಿಯೂರಪ್ಪ ಸಂಪುಟದಲ್ಲಿದ್ದ ಬಹುತೇಕ ಸಚಿವರಿಗೆ ಹಿಂದಿನ ಖಾತೆಗಳನ್ನೇ ಮುಂದುವರೆಸಲಾಗುವುದು ಎಂದೂ ಮೂಲಗಳು ತಿಳಿಸಿವೆ.