ಯಲ್ಲಾಪುರ : ತಾಲೂಕಿನ ಆರತಿಬೈಲ ಘಟ್ಟದಲ್ಲಿ ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಹೊರಟ ರಾಸಾಯನಿಕ ಹೊತ್ತ ಟ್ಯಾಂಕರ್ ಉರುಳಿ ಬಿದ್ದು ಸ್ಪೋಟಗೊಂಡ ದುರ್ಘಟನೆ ಬೆಳಿಗ್ಗೆ 5.30 ಗಂಟೆ ಸುಮಾರಿಗೆ ನಡೆದಿದೆ.
ಈ ದುರಂತದಲ್ಲಿ ಹೊತ್ತಿಕೊಂಡ ಬೆಂಕಿ ಅಪಘಾತ ಸ್ಥಳದಿಂದ ಸುಮಾರು ಅರ್ಧ ಕಿಲೋಮೀಟರ್ ಹರಡಿರುವ ಬಗ್ಗೆ ವರದಿಯಾಗಿದೆ. ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಅಗ್ನಿಶಾಮಕ ದಳ ತುರ್ತು ಧಾವಿಸಿ ಬೆಂಕಿ ಹತೋಟಿಗೆ ತರತೊಡಗಿದ್ದು ಯಾವುದೇ ಜೀವ ಹಾನಿ ಆಗಿಲ್ಲ. ಹೆದ್ದಾರಿಯಲ್ಲಿ ಇತ್ತೀಚೆಗೆ ಟ್ಯಾಂಕರ್ ದುರಂತ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.