News Karnataka Kannada
Monday, April 29 2024
ಕರ್ನಾಟಕ

ಮುಖ್ಯ ಮಂತ್ರಿ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಯಾರಿಗೆಲ್ಲ ಸ್ಥಾನ ?

B Bommai
Photo Credit :

ಬೆಂಗಳೂರು : ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಕ್ಷಿಪ್ರವಾಗಿಯೇ ತಮ್ಮ ಕೆಲಸವನ್ನು ಆರಂಭಿಸಿದ್ದಾರೆ. ಗುರುವಾರ ಕರಾವಳಿ ಜಿಲ್ಲೆಗಳ ನೆರೆಪೀಡಿತ ಪ್ರದೇಶಗಳಿಗೆ ಪ್ರವಾಸ ಕೂಡ ಆರಂಭಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಂಪುಟ ರಚನೆ ಒಂದೇ ವಾರದಲ್ಲೇ ರಚನೆಯಾಗಲಿದೆ ಎಂಬುದಾಗಿ ಹೇಳಲಾಗುತ್ತಿದೆ. ಆದರೆ ಈ ಬಾರಿ ಹೊಸಬರಿಗೆ ಹೆಚ್ಚು ಅವಕಾಶ ನೀಡಲಾಗುತ್ತದೆ ಎಂದೇ ಹೇಳಲಾಗುತ್ತಿದೆ. ಈಗಾಗಲೇ 17 ಮಂದಿ ವಲಸೆ ಬಂದಿರುವ ಶಾಸಕರ ಎದೆಯಲ್ಲಿ ಢವ ಢವ ಪ್ರಾರಂಭವಾಗಿದೆ. ಅನೇಕರು ಮುಖ್ಯ ಮಂತ್ರಿ ಮತ್ತು ನಾಯಕ ಬಿ ಎಸ್‌ ಯಡಿಯೂರಪ್ಪ ಅವರ ಮನೆಗಳಿಗೆ ಭೇಟಿ ನೀಡಿ ಮಂತ್ರಿ ಸ್ಥಾನ ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತಿದ್ದಾರೆ. ಈ ವಾರದಲ್ಲೇ ಸಚಿವ ಸಂಪುಟ ರಚನೆ ಆಗಲಿದೆ.
ಈ ಕುರಿತಂತೆ ಬಿಜೆಪಿ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದ್ದು, ಈ ಬಾರಿಯ ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆಲ್ಲಾ ಸಚಿವ ಸ್ಥಾನ ನೀಡಲಾಗುತ್ತಿದೆ. ಯಾರೆಲ್ಲಾ ಹೊಸ ಮುಖಗಳನ್ನು ಪರಿಚಯಿಸಲಾಗುತ್ತದೆ. ಬಾಂಬೆ ಫ್ರೆಂಡ್ಸ್ ಗೆ ಯಾರಿಗೆಲ್ಲಾ ಸಚಿವ ಸ್ಥಾನ ಮಿಸ್ ಆಗಲಿದೆ
ಡಿಸಿಎಂ ಸ್ಥಾನದ ಸಂಭಾವ್ಯ ಅಭ್ಯರ್ಥಿಗಳಾಗಿ ಆರ್ ಅಶೋಕ್, ಶ್ರೀರಾಮುಲು, ಸುನೀಲ್ ಕುಮಾರ್,ಗೋವಿಂದ ಕಾರಜೋಳ,ಅಶ್ವತ್ಥನಾರಾಯಣ ,ಅರವಿಂದ ಲಿಂಬಾವಳಿ ಇದ್ದಾರೆ. ಇನ್ನು ಮಂತ್ರಿ ಮಂಡಲದಲ್ಲಿ ಜಾತಿವಾರು ಪ್ರಾತಿನಿಧ್ಯ ನೀಡಿ ಈ ಕೆಳಗಿನವರನ್ನು ಸಂಭಾವ್ಯರು ಎಂದು ಹೇಳಲಾಗುತ್ತಿದೆ. ಸಂಪುಟ ವಿಸ್ತರಣೆ ಎರಡು ಹಂತಗಳಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ.
ಬ್ರಾಹ್ಮಣ ಸಮುದಾಯ – ಎಸ್ ಸುರೇಶ್ ಕುಮಾರ್, ರಾಮದಾಸ್
ನಾಯಕ ಸಮುದಾಯದ – ಬಿ ಶ್ರೀರಾಮುಲು
ಲಿಂಗಾಯತ – ಮಾಧುಸ್ವಾಮಿ
ಒಕ್ಕಲಿಗ – ಪ್ರೀತಂ ಗೌಡ, ರಾಜೇಶ್ ಗೌಡ ( ಹಾಸನ )
ಯಾದವ ಸಮುದಾಯದ – ಪೂರ್ಣಿಮಾ ಶ್ರೀನಿವಾಸ್ ( ಚಿತ್ರದುರ್ಗ )
ಎಸ್ ಟಿ ಸಮುದಾಯ – ರೂಪಾಲಿ ನಾಯ್ಕ್ ( ಉತ್ತರ ಕನ್ನಡ )
ಬಿಲ್ಲವ ಸಮುದಾಯ – ಕೋಟಾ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ( ಉಡುಪಿ )
ಕುರುಬ ಸಮುದಾಯದ – ಕೆ ಎಸ್ ಈಶ್ವರಪ್ಪ
ಒಕ್ಕಲಿಗ – ಅರಗ ಜ್ಞಾನೇಂದ್ರ ( ಶಿವಮೊಗ್ಗ )
ಎಸ್ಸಿ ಸಮುದಾಯದ – ಅರವಿಂದ ಲಿಂಬಾವಳಿ
ಲಿಂಗಾಯತ – ಉಮೇಶ್ ಕತ್ತಿ
ಒಕ್ಕಲಿಗ – ಸಿಪಿ ಯೋಗೇಶ್ವರ್
ದಲಿತ ಸಮುದಾಯದ – ಎಸ್ ಅಂಗಾರ
ಲಿಂಗಾಯತ – ಮುರುಗೇಶ್ ನಿರಾಣಿ
ವಲಸಿಗರ ಪೈಕಿ ಯಾರಿಗೆ ಸಚಿವ ಸ್ಥಾನ.?
ಎಸ್ ಟಿ ಸೋಮಶೇಖರ್
ಬಿಸಿ ಪಾಟೀಲ್
ಡಾ.ಕೆ.ಸುಧಾಕರ್
ಕೆಸಿ ನಾರಾಯಣಗೌಡ
ಕೆ.ಗೋಪಾಲಯ್ಯ
ಬೈರತಿ ಬಸವರಾಜು
ಎಂಟಿಬಿ ನಾಗರಾಜ
ಶಿವರಾಂ ಹೆಬ್ಬಾರ್
ಆರ್.ಶಂಕರ್
ಯಾರೆಲ್ಲಾ ಹೊಸ ಮುಖಗಳು ಸಂಪುಟಕ್ಕೆ ಸೇರ್ಪಡೆ ಸಾಧ್ಯತೆ.?
ಅಭಯ್ ಪಾಟೀಲ್
ಆರ್ ಮುನಿರತ್ನ
ಅರವಿಂದ ಬೆಲ್ಲದ್
ಎಂಪಿ ಕುಮಾರಸ್ವಾಮಿ
ಕುಡುಚಿ ರಾಜೀವ್
ಎಂಪಿ ರೇಣುಕಾಚಾರ್ಯ, ರವೀಂದ್ರ ನಾಥ್, ಮೂಡಾಳು ವಿರೂಪಾಕ್ಷಪ್ಪ
ಪಿ ದತ್ತಾತ್ರೇಯ ಪಾಟೀಲ ರೇವೂರ
ಕೆಜಿ ಬೋಪಯ್ಯ, ಅಪ್ಪಚ್ಚು ರಂಜನ್
ಬಸನಗೌಡ ಪಾಟೀಲ್ ಯತ್ನಾಳ್
ಜಿ.ತಿಪ್ಪಾರೆಡ್ಡಿ
ಯಾರು ಸಂಪುಟದಿಂದ ಔಟ್.?
ಆನಂದ್ ಸಿಂಗ್
ಜಗದೀಶ್ ಶೆಟ್ಟರ್
ಸಿಸಿ ಪಾಟೀಲ್
ಪ್ರಭು ಚೌವ್ಹಾನ್
ಶ್ರೀಮಂತ ಪಾಟೀಲ್
ಶಶಿಕಲಾ ಜೊಲ್ಲೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು