ಚಿಕ್ಕಮಗಳೂರು: ಚಿಕ್ಕಮಗಳೂರಿನ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಯಾವುದೇ ಮೂಲಭೂತ ಸೌಕರ್ಯ ಇಲ್ಲ. ಆ ಭಾಗದಲ್ಲಿ ಅಭಿವೃದ್ದಿ ಕೆಲಸ ಮಾಡಿಕೊಡಿ ಎಂದೂ ಒಂದೂ ಕಾಲದಲ್ಲಿ ನಕ್ಸಲ್ ಬೆಂಬಲಿತ ವ್ಯಕ್ತಿ ಎನಿಸಿಕೊಂಡಿದ್ದ ಹಾಗಲಗಂಜಿ ವೆಂಕಟೇಶ್ ಮತ್ತು ಇತರರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದರು.
ಹೌದು ಚಿಕ್ಕಮಗಳೂರಿನ ನಕ್ಸಲ್ ಪೀಡಿತ ಪ್ರದೇಶಗಳಾದ ಹಾಗಲಗಂಜಿ, ಹುಲ್ಲಾಳ, ಕಾರೇಮನೆ, ಆವಿಗೆ, ಅತ್ತಿಗುಳಿ,ಬಿಟ್ಟಗುಳಿ,ಗಿರಿಜನ ಕಾಲೋನಿಯಲ್ಲಿ ಯಾವುದೇ ಮೂಲಭೂತ ಸೌಕರ್ಯವಿಲ್ಲದೇ ಪ್ರತಿನಿತ್ಯ ಇಲ್ಲಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದು ಈ ಕೂಲಡೇ ಆ ಭಾಗದಲ್ಲಿ ಅಭಿವೃದ್ದಿ ಕೆಲಸ ಮಾಡಿ ಅಲ್ಲಿನ ಜನರು ಎಲ್ಲರಂತೆ ಬದುಕುವಂತೆ ಅವಕಾಶ ಮಾಡಿಕೊಡಬೇಕು ಎಂದು ಒಂದು ಕಾಲದಲ್ಲಿ ನಕ್ಸಲ್ ಬೆಂಬಲಿತ ವ್ಯಕ್ತಿ ಎನ್ನಿಸಿಕೊಂಡಿದ್ದ ಹಾಗಲಗಂಜಿ ವೆಂಕಟೇಶ್ ನೇತೃತ್ವದಲ್ಲಿ ಆ ಭಾಗದಲ್ಲಿ ಹಲವಾರು ಗ್ರಾಮದ ಮುಖಂಡರು ಇಂದೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಈ ಹಿಂದೆ ಚನ್ನಪ್ಪ ಗೌಡ್ರು ಜಿಲ್ಲಾಧಿಕಾರಿಯಾಗಿದ್ದಂತಹ ಸಂದರ್ಭದಲ್ಲಿ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗಿದ್ದವು, ರಸ್ತೆಗಳು ನಿರ್ಮಾಣ ಆಗಿದ್ದವು, ಟರ್ಬೋ ಮೂಲಕ ವಿದ್ಯುತ್ ನೀಡಲಾಗುತ್ತಿತ್ತು, ಚರಂಡಿ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಆ ಎಲ್ಲಾ ಕೆಲಸಗಳು ಅರ್ಧಕ್ಕೆ ನಿಂತೂ ಹೋಗಿದ್ದು, ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಆ ಭಾಗದಲ್ಲಿ ಸರಿಯಾದ ವಿದ್ಯುತ್ ವ್ಯವಸ್ಥೆ ಇಲ್ಲದಾಗಿದ್ದು ಆರೋಗ್ಯ ಕೇಂದ್ರವೂ ಸರಿಯಾಗಿ ಇಲ್ಲ ನಗರ ಪ್ರದೇಶಗಳಿಗೆ ಬರಬೇಕಾದರೇ ತುಂಬಾ ಕಷ್ಟದಾಯಕವಾಗಿದ್ದು, ಅಗತ್ಯ ವಸ್ತುಗಳು ತೆಗೆದುಕೊಳ್ಳಬೇಕಾದರೇ ನಗರ ಪ್ರದೇಶಕ್ಕೆ ಬರಬೇಕಾಗಿದ್ದು ರಸ್ತೆ ಸರಿಯಿಲ್ಲದ ಕಾರಣದಿಂದಾಗಿ ಇಲ್ಲಿ ತುಂಬಾ ಸಮಸ್ಯೆಯಾಗಿದೆ ಎಂದು ಇಲ್ಲಿನ ನಿವಾಸಿಗಳು ಹೇಳಿದರು.
ಒಟ್ಟಾರೆಯಾಗಿ ನಕ್ಸಲ್ ಬೆಂಬಲಿತ ವ್ಯಕ್ತಿ ಎನಿಸಿಕೊಂಡಿದ್ದ ಹಾಗಲಗಂಜಿ ವೆಂಕಟೇಶ್ ನೇತೃತ್ವದಲ್ಲಿ ಇಂದು ಹಲವಾರು ಜನರು ಇಲ್ಲಿನ ಅಭಿವೃದ್ದಿ ಕೆಲಸಗಳಿಗೆ ಚಾಲನೆ ನೀಡಿ ಮತ್ತು ತಕ್ಷಣ ಮೂಲಭೂತ ಸೌಕರ್ಯ ನೀಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು