Categories: ಕರ್ನಾಟಕ

ಟಿಪ್ಪು ಜಯಂತಿ ಹಣವನ್ನು ಅತಿವೃಷ್ಟಿ ಸಂತ್ರಸ್ತರಿಗೆ ವಿನಿಯೋಗಿಸಿ: ಸಿಎನ್‍ಸಿ ಒತ್ತಾಯ

ಮಡಿಕೇರಿ: ಟಿಪ್ಪು ಜಯಂತಿ ಆಚರಣೆ ಬದಲು ಅದಕ್ಕೆ ವಿನಿಯೋಗಿಸುತ್ತಿರುವ ನೂರಾರು ಕೋಟಿ ರೂ. ಹಣವನ್ನು ಪ್ರಕೃತಿ ವಿಕೋಪದ ಸಂತ್ರಸ್ತರ ಕಲ್ಯಾಣಕ್ಕೆ ವಿನಿಯೋಗಿಸುವ ಮೂಲಕ ಸರಕಾರ ಪುಣ್ಯ ಕಟ್ಟಿಕೊಳ್ಳಲಿ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿಯ ಹೆಸರಿನಲ್ಲಿ ಕೊಡವರನ್ನು ಅವಮಾನಿಸುವ ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಕೊಡವರ ಗಾಯದ ಮೇಲೆ ಉಪ್ಪು ಸವರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ, ಈ ಕಾರ್ಯವನ್ನು ಕೈಬಿಟ್ಟು ಟಿಪ್ಪು ಮತ್ತವನ ಪಾತಕಿ ಸೈನಿಕರಿಂದ ನರಮೇಧಕ್ಕೊಳಗಾದ ದೇವಟ್ ಪರಂಬ್‍ನಲ್ಲಿ ರಾಷ್ಟ್ರೀಯ ಸ್ಮಾರಕ ಸ್ಥಾಪಿಸಿ ಕೊಡವರಿಗೆ ಶ್ರದ್ಧಾಂಜಲಿ ಅರ್ಪಿಸುವ ದೊಡ್ಡ ಮನಸ್ಸು ಮಾಡಲಿ ಎಂದು ಒತ್ತಾಯಿಸಿದರು.

ಕೊಡವ ಎನ್ನುವ ಒಂದು ಜನಾಂಗವೇ ಅಳಿದು ಹೋದ ದುರ್ಘಟನೆ ನಡೆದ ಕೊಡಗಿನಲ್ಲಿ ಟಿಪ್ಪುವಿನ ವೈಭವೀಕರಣ ಸಲ್ಲದು. ರಾಜೇಂದ್ರ ಚೋಳರ ಆಳ್ವಿಕೆ ಕಾಲದಲ್ಲಿ ನಿರ್ಮಿಸಲ್ಪಟ್ಟ 300ಕ್ಕೂ ಅಧಿಕ ಶೈವ ಶಿಲ್ಪಕಲೆಯನ್ನು ಹೊಂದಿದ ದೇವನೆಲೆಗಳು ಕೊಡಗಿನಲ್ಲಿದ್ದವು. ಅವೆಲ್ಲವೂ ಟಿಪ್ಪುವಿನಿಂದ ಧ್ವಂಸವಾಗಿದೆ. ಕೊಡಗಿನಲ್ಲಿ ಭಾಗಮಂಡಲ, ಮಲೆತಿರಿಕೆ, ನೂರಕ್ಕನಾಡ್ ಸೇರಿದಂತೆ ನೂರಾರು ದೇಗುಲಗಳನ್ನು ಧ್ವಂಸ ಮಾಡಿದ್ದು ಚರಿತ್ರೆಯಲ್ಲಿದೆ. ಮಲಬಾರ್ ಪ್ರಾಂತದ ಯೋಧ ಜನಾಂಗವಾದ ನಾಯರುಗಳನ್ನು, ಚಿತ್ರದುರ್ಗದ ವಾಲ್ಮಿಕಿ ಬೇಡ ನಾಯಕರನ್ನು ಮತ್ತು ಮಂಗಳೂರಿನ ಕ್ಯಾಥೋಲಿಕರನ್ನು, ಗೌಡ ಸಾರಸ್ವತ ಕೊಂಕಣಿಗರನ್ನು, ಮೇಲುಕೊಟೆ ಅಯ್ಯಂಗಾರ್ ಗಳನ್ನು, ಕುಂಭಕೋಣಂನ ಅಯ್ಯರ್ ಗಳನ್ನು ಕೂಡ ಈತ ಬರ್ಬರವಾಗಿ ಹತ್ಯಾಕಾಂಡ ನಡೆಸಿದ್ದಾನೆ. ಇದೆಲ್ಲವನ್ನು ಟಿಪ್ಪುವಿನ ಆಸ್ಥಾನದ ಇತಿಹಾಸಕಾರ ಮೀರ್ ಉಸ್ಮಾನ್ ಆಲಿ ಕಿರ್ಮಾನಿಯೇ ಸ್ವತಃ ದಾಖಲಿಸಿರುವುದು ಬೆಳಕಿಗೆ ಬಂದಿದೆ.

ದೇಶದ ಮುಸಲ್ಮಾನ ನವಾಬರು ಟಿಪ್ಪುವಿನ ದುಷ್ಟ ಗುಣವನ್ನು ದ್ವೇಷಿಸುತ್ತಿದ್ದರು. ಲಿಂಗಾಯತ ಅರಸರು ಟಿಪ್ಪುವಿನ ಪರಮ ದ್ವೇಷಿಗಳಾಗಿದ್ದರು, ಆ ಕಾರಣಕ್ಕೆ ಇಡೀ ಲಿಂಗಾಯಿತ ಸಮುದಾಯವೇ ದೇಶ ದ್ರೋಹಿಗಳೆ, ಟಿಪ್ಪುವಿನ ವಿರುದ್ದ ಸಮರ್ಥವಾಗಿ ಕಾದಾಡಿ ಕೊಡಗು ನೆಲದ ಸ್ವಾತಂತ್ರ್ಯಕ್ಕಾಗಿ ನೆತ್ತರು ಹರಿಸಿದ ಅಪ್ಪಚ್ಚಿರ ಮಂದಣ್ಣ, ಕುಲ್ಲೇಟಿರ ಪೊನ್ನಣ್ಣ ಮತ್ತು ಕನ್ನಂಡ ದೊಡ್ಡಯ್ಯ ಮುಂತಾದ ಅಮರ ಸೇನಾನಿಗಳು ದೇಶ ದ್ರೋಹಿಗಳೇ ಎಂದು ನಾಚಪ್ಪ ಪ್ರಶ್ನಿಸಿದರು.

ಟಿಪ್ಪುವಿನಿಂದ ಹತ್ಯಾಕಾಂಡಕ್ಕೊಳಗಾದ ಸಂತತಿ ಇಂದು ಅತಿವೃಷ್ಟಿ ಹಾನಿಯಿಂದ ನಲುಗಿ ಹೋಗಿದೆ. ಪರಿಸ್ಥಿತಿ ಹೀಗಿರುವಾಗ ಟಿಪ್ಪು ಜಯಂತಿಯನ್ನು ನಮ್ಮ ಮೇಲೆ ಹೇರುವ ಪ್ರಯತ್ನವನ್ನು ಸರಕಾರ ಮಾಡಬಾರದು. ಬದಲಿಗೆ ಜಯಂತಿಗಾಗಿ ವಿನಿಯೋಗಿಸುವ ಹಣವನ್ನು ಮುಖ್ಯಮಂತ್ರಿಗಳು ಸಂತ್ರಸ್ತ ಕೊಡಗು ಜಿಲ್ಲೆಗೆ ನೀಡಲಿ ಎಂದು ಒತ್ತಾಯಿಸಿದರು.

ದೇಶಪ್ರೇಮಿ ಕೊಡವರನ್ನು ಎಷ್ಟೆಲ್ಲಾ ಸಾಧ್ಯವಿದೆಯೋ ಅಷ್ಟೆಲ್ಲಾ ಅವಮಾನಿಸಿ ಹಿಂಸಿಸಲು ಹಳೆ ಮೈಸೂರು ಪ್ರದೇಶದ ಪ್ರಧಾನ ಗುರು ಪೀಠವೊಂದು ತೆರೆಮರೆಯಲ್ಲಿ ಸಂಚು ನಡೆಸುತ್ತಿದೆ ಎಂದು ನಾಚಪ್ಪ ಇದೇ ಸಂದರ್ಭ ಆರೋಪಿಸಿದರು.

Desk

Recent Posts

ಚುನಾವಣೆ ಹೊತ್ತಲ್ಲೆ ಶಂಕಿತ ಪಾಕ್ ಡ್ರೋನ್ ಹಾರಾಟ : ಸೇನೆಯಿಂದ ಗುಂಡಿನ ದಾಳಿ

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಎಲ್‌ಒಸಿ ಬಳಿ ಶನಿವಾರ ತಡರಾತ್ರಿ ಶಂಕಿತ ಪಾಕಿಸ್ತಾನಿ ಡ್ರೋನ್ ಮೇಲೆ ಭಾರತೀಯ ಸೇನಾ…

9 mins ago

ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಹೆಚ್ಚು ಮಳೆಯಾಗುವ ನಿರೀಕ್ಷೆ: ಯೆಲ್ಲೋ ಅಲರ್ಟ್

ಇಂದು ರಾಜ್ಯದ 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ದಕ್ಷಿಣ ಕನ್ನಡ, ಉಡುಪಿ,…

32 mins ago

ಮ್ಯಾಗ್ನಸ್ ಕಾರ್ಲ್‌ಸನ್‌ ವಿರುದ್ಧ ಆರ್.ಪ್ರಜ್ಞಾನಂದಗೆ ಮತ್ತೊಂದು ಗೆಲುವು

ಸೂಪರ್‌ಬಿಟ್‌ ರ್‍ಯಾಪಿಡ್ ಮತ್ತು ಬ್ಲಿಟ್ಜ್‌ ಚೆಸ್‌ ಟೂರ್ನಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್‌ ವಿರುದ್ಧ ಭಾರತದ ಗ್ರ್ಯಾಂಡ್…

49 mins ago

ನಟ ಚೇತನ್​ ಚಂದ್ರ ಮೇಲೆ 20 ಜನರಿಂದ ಹಲ್ಲೆ : ದೂರು ದಾಖಲು

ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಯುವ ನಟ ಚೇತನ್ ಚಂದ್ರ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆದಿದೆ. ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ…

1 hour ago

ಪೆನ್​ಡ್ರೈವ್ ಹಂಚಿಕೆ ಪ್ರಕರಣ : ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಹರಿಬಿಟ್ಟ ಆರೋಪದಲ್ಲಿ ಬಂಧನವಾಗಿರುವ ಆರೋಪಿಗಳಾದ ಚೇತನ್ ಹಾಗೂ ಲಿಖಿತ್‌ಗೆ 14…

1 hour ago

ಇಂದಿನ ರಾಶಿ ಭವಿಷ್ಯ : ಈ ರಾಶಿಗೆ ಹಣಕಾಸಿನ ಸಮಸ್ಯೆ

ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 13 ಮೇ​​ 2024ರ…

1 hour ago