Categories: ಕರ್ನಾಟಕ

ಜ್ಯೂವೆಲ್ಲರಿ ಮಾಲಕರಿಗೆ ಆದಾಯ ತೆರಿಗೆ ಅಧಿಕಾರಿ ಹೆಸರಲ್ಲಿ ವಂಚಿಸಿದ ಯುವಕ

ಕಾಸರಗೋಡು: ಆದಾಯ ತೆರಿಗೆ ಅಧಿಕಾರಿ ಎಂದು ನಂಬಿಸಿ ಯುವಕನೋರ್ವ ಜುವೆಲ್ಲರಿಗೆ ವಂಚಿಸಿದ ಘಟನೆ ಬೆಳಕಿಗೆ ಬಂದಿದ್ದು, ಉಪ್ಪಳ, ಕಾಸರಗೋಡು ಹಾಗೂ ಕಣ್ಣೂರಿನ ಜ್ಯೂವೆಲ್ಲರಿಗಳಲ್ಲಿ ಈತ ವಂಚನೆ ನಡೆಸಿದ್ದಾನೆ.

ಕಣ್ಣೂರಿನ  ದಿನಗಳ ಹಿಂದೆ ಬಂದಿದ್ದ  ಈತ ಸುಮಾರು ಎರಡು ಲಕ್ಷ ರೂ.ಗಳ ಚಿನ್ನಾಭರಣ ವಂಚಿಸಿ ಪರಾರಿಯಾಗುವುದರೊಂದಿಗೆ ಕೃತ್ಯ ಬೆಳಕಿಗೆ ಬಂದಿದೆ.

ಕಣ್ಣೂರು ಬ್ಯಾಂಕ್ ರಸ್ತೆಯ ಜ್ಯೂವೆಲ್ಲರಿಯೊಂದಕ್ಕೆ ಬಂದಿದ್ದ ಯುವಕ ತನ್ನ ಹೆಸರು ಮಂಜುನಾಥ್ ಎಂದು ಹೇಳಿದ್ದು, ಆದಾಯ ತೆರಿಗೆ ಅಧಿಕಾರಿ ಎಂದು  ಮಾಲಕರಲ್ಲಿ ಹೇಳಿದ್ದಾನೆ.

ಸರ ಹಾಗೂ ಉಂಗುರ ಸೇರಿದಂತೆ 42 ಗ್ರಾಂ. ಚಿನ್ನಾಭರಣವನ್ನು ಈತ ಖರೀದಿಸಿದ್ದಾನೆ.

ಹಣವನ್ನು ಆನ್ ಲೈನ್ ಆಗಿ ವರ್ಗಾವಣೆ ಮಾಡುವುದಾಗಿ ತಿಳಿಸಿದ್ದು, ಹಣ ವರ್ಗಾವಣೆ ಮಾಡಿರುವುದಾಗಿ  ಕೂಡಲೇ ಮೊಬೈಲ್ ನಲ್ಲಿ ಮೆಸೇಜ್ ಜುವೆಲ್ಲರಿ ಮಾಲಕನಿಗೆ ತೋರಿಸಿದ್ದಾನೆ. ಇದರಂತೆ ಚಿನ್ನಾಭರಣ ಪಡೆದು ಈತ ಕಾಲ್ಕಿತ್ತಿದ್ದಾನೆ .

ಕೆಲ ಸಮಯ ಕಳೆದು ಅಕೌಂಟ್  ಪರಿಶೀಲಿಸಿದಾಗ  ಹಣ ಬಂದಿಲ್ಲ  ಎಂಬುದು ಗಮನಕ್ಕೆ ಬಂದಿದೆ.  ಇದರಿಂದ ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದೆ. ಬಳಿಕ ಕಣ್ಣೂರು ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.  ಯುವಕ ಹಿಂದಿ ಹಾಗೂ  ಇಂಗ್ಲೀಷ್ ಮಿಶ್ರಿತ ಭಾಷೆ ಮಾತನಾಡುತ್ತಿದ್ದ   ಎನ್ನಲಾಗಿದೆ.

ಈತ ಉಪ್ಪಳದಲ್ಲೂ ಇದೇ ರೀತಿ ವಂಚನೆಗೂ  ಮುಂದಾಗಿದ್ದ ಎನ್ನಲಾಗಿದೆ. ಆದರೆ ಮಾಲಕನಿಗೆ ಈತನ ಚಲನವಲನಗಳ ಬಗ್ಗೆ ಸಂಶಯ ಬಂದುದರಿಂದ ಪ್ರಶ್ನಿಸಿದಾಗ ಅಲ್ಲಿಂದ ಕಾಲ್ಕಿತ್ತ ಎನ್ನಲಾಗಿದೆ.

ಆರೋಪಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Desk

Recent Posts

ಕಾಂಗ್ರೆಸ್ ಸರ್ಕಾರದ ಒಂದು ವರ್ಷ, ಕೊಲೆಗಡುಕರಿಗೆ ಹರ್ಷ: ಲೇವಡಿ ಮಾಡಿದ ಆರ್.‌ ಅಶೋಕ್‌

ಒಂದು ವರ್ಷ ಅಧಿಕಾರ ಪೂರೈಸುವ ಹೊತ್ತಿಗೆ ನೂರೊಂದು ಸಮಸ್ಯೆಗಳನ್ನು ತಂದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ರಾಜ್ಯ ಸರ್ಕಾರದ…

3 mins ago

ಚಿಕ್ಕಮಗಳೂರು: ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್ ವಿತರಣೆ

ಆಕಸ್ಮಿಕವಾಗಿ ಸಂಭವಿಸುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊ ಳ್ಳುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು…

23 mins ago

ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ನಿಲ್ಲಿಸಿ ಪರಿಹಾರ ನೀಡಿ: ರಮೇಶ ಹೂಗಾರ ಮನವಿ

ರಾಜ್ಯದಲ್ಲಿ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರಕಾರ ಅಲ್ಪ ಮಟ್ಟಿಗೆ ಪರಿಹಾರ ನೀಡಿ ನಿಟ್ಟುಸಿರು ಬಿಡುವಂತೆ ಮಾಡಿದೆ.ಆದರೆ ಅಫಜಲಪುರ…

44 mins ago

ಅಂಜಲಿ ಕೊಲೆ ಪ್ರಕರಣ ಸಿಐಡಿಗೆ, ನೇಹಾ ಕೇಸ್​ ಸಿಬಿಐಗೆ ಕೊಡಲ್ಲ: ಗೃಹ ಸಚಿವ

ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ…

51 mins ago

ಡ್ರಾಪ್​ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಕ್ಕೆ ಯತ್ನ

ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಠಾಣಾ ವ್ಯಾಪ್ತಿಯಲ್ಲಿ ಯುವಕನೋರ್ವ ಡ್ರಾಪ್​ ಕೊಡುವ ನೆಪದಲ್ಲಿ  ತಡರಾತ್ರಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ…

1 hour ago

ಇಬ್ರಾಹಿಂ ರೈಸಿ ನಿಧನ: ನಾಳೆ ಭಾರತದಲ್ಲಿ ಒಂದು ದಿನದ ‘ಶೋಕಾಚರಣೆ’

ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನಕ್ಕೆ ನಾಳೆ (ಮೇ 21) ಭಾರತದಲ್ಲಿ ಒಂದು ದಿನದ ರಾಜ್ಯ…

1 hour ago