ಬೆಂಗಳೂರು: ಜಿಲ್ಲೆಗಳ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ವಿವಿಧ ಇಲಾಖೆಗಳ ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯದರ್ಶಿಯಾಗಿರುವ ವಿ. ಪೊನ್ನುರಾಜ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪರಿಶೀಲನೆ, ಅಹವಾಲು ವಿಚಾರಣೆ, ದಿಢೀರ್ ಪರಿಶೀಲನೆ ಮತ್ತು ಯೋಜನೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸುವ ಅಧಿಕಾರವನ್ನು ಉಸ್ತುವಾರಿ ಕಾರ್ಯದರ್ಶಿಗಳಿಗೆ ನೀಡಲಾಗಿದೆ. ಹೊಸದಾಗಿ ರಚನೆಯಾಗಿರುವ ವಿಜಯನಗರ ಜಿಲ್ಲೆಗೆ ಉಸ್ತುವಾರಿ ಕಾರ್ಯದರ್ಶಿಯನ್ನು ನೇಮಿಸಿಲ್ಲ.
ಸಿ. ಶಿಖಾ (ಚಿಕ್ಕಮಗಳೂರು), ಕ್ಯಾಪ್ಟನ್ ಮಣಿವಣ್ಣನ್ ಪಿ. (ಉಡುಪಿ), ಡಾ. ವಿ. ರಾಮ್ ಪ್ರಸಾತ್ ಮನೋಹರ್ (ಮಂಡ್ಯ), ಬಿ.ಬಿ. ಕಾವೇರಿ (ಚಾಮರಾಜನಗರ), ನವೀನ್ ರಾಜ್ ಸಿಂಗ್ (ಹಾಸನ), ವಿ. ಅನ್ಬುಕುಮಾರ್ (ಕೊಡಗು), ರಾಕೇಶ್ ಸಿಂಗ್ (ತುಮಕೂರು), ಡಾ.ರವಿಕುಮಾರ್ ಸುರ್ಪುರ್ (ಧಾರವಾಡ).
ಡಿ. ರಂದೀಪ್ (ವಿಜಯಪುರ), ಮೊಹಮ್ಮದ್ ಮೊಹಿಸಿನ್ (ಗದಗ), ಕೆ.ಪಿ. ಮೋಹನ್ ರಾಜ್ (ಉತ್ತರ ಕನ್ನಡ), ಶಿವಯೋಗಿ ಸಿ. ಕಳಸದ (ಬಾಗಲಕೋಟೆ), ಗುಂಜನ್ ಕೃಷ್ಣ (ಕಲಬುರ್ಗಿ), ಮುನೀಶ್ ಮೌದ್ಗಿಲ್ (ಯಾದಗಿರಿ), ಡಾ. ವಿಶಾಲ್ ಆರ್. (ರಾಯಚೂರು), ಡಾ. ರಶ್ಮಿ ವಿ. ಮಹೇಶ್ (ಕೊಪ್ಪಳ), ಡಾ.ಎಂ.ಎನ್. ಅಜಯ್ ನಾಗಭೂಷಣ್ (ಬಳ್ಳಾರಿ), ರಿಚರ್ಡ್ ವಿನ್ಸೆಂಟ್ ಡಿಸೋಜ (ಬೀದರ್), ಮನೋಜ್ ಜೈನ್ (ಹಾವೇರಿ) ಅವರನ್ನು ನೇಮಕ ಮಾಡಲಾಗಿದೆ.