Categories: ಕರ್ನಾಟಕ

ಕೋವಿಡ್‌ ರೋಗಿಗಳಿಗೆ ಸಿಎಂವಿ ವೈರಸ್‌ ಕಾಟ

ನವದೆಹಲಿ, : ಕೊರೊನಾವೈರಸ್ ಸೋಂಕಿತರದಲ್ಲಿ ಕೆಮ್ಮು, ನೆಗಡಿ, ಶೀತ, ತಲೆನೋವು, ಉದರ ಬಾಧೆ ರೀತಿಯ ಲಕ್ಷಣಗಳು ಗೋಚರಿಸುತ್ತವೆ ಎಂಬುದು ಗೊತ್ತಿರುವ ವಿಷಯ. ಇದರ ಜೊತೆ ಮೊದಲ ಬಾರಿಗೆ ಕೊವಿಡ್-19 ಸೋಂಕಿತರ ಹೊಸ ರೀತಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ನವದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಐದು ಮಂದಿ ಕೊರೊನಾವೈರಸ್ ರೋಗಿಗಳಲ್ಲಿ ಸೈಟೊಮೆಗಾಲೋವೈರಸ್(ಸಿವಿಎಂ) ಸಂಬಂಧಿತ ಸಮಸ್ಯೆ ಕಾಣಿಸಿಕೊಂಡಿದೆ. ಈ ರೋಗಿಗಳ ಗುದನಾಳದಲ್ಲಿ ರಕ್ತಸ್ರಾವ ಆಗುತ್ತಿರುವುದು ಆತಂಕವನ್ನು ಹೆಚ್ಚಿಸಿದೆ.
“ಗುದನಾಳದ ರಕ್ತಸ್ರಾವದ ಬಗ್ಗೆ ಕೆಲವು ರೋಗಿಗಳು ಮೊದಲು ದೂರು ನೀಡಿದ್ದರು. ಪರೀಕ್ಷೆ ನಂತರ ಇದು ಸೈಟೊಮೆಗಾಲೊವೈರಸ್ ಸಂಬಂಧಿತ ರೋಗ ಎಂದು ನಿರ್ಧರಿಸಲಾಗಿದ್ದು, ಕೊವಿಡ್ -19 ಸೋಂಕಿತ ಎಲ್ಲಾ ರೋಗಿಗಳಲ್ಲಿ ಈ ಸಮಸ್ಯೆ ಗೋಚರಿಸುತ್ತಿದೆ,” ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಕೊರೊನಾವೈರಸ್ ಸೋಂಕಿತರಲ್ಲಿ ಈ ಹೊಸ ಸೈಟೊಮೆಗಾಲೊವೈರಸ್ ಸಂಬಂಧಿತ ರೋಗ ಕಾಣಿಸಿಕೊಳ್ಳುತ್ತಿರುವುದು ಏಕೆ, ಈ ಸೈಟೊಮೆಗಾಲೊವೈರಸ್ ರೋಗ ಎಂದರೇನು, ಸೈಟೊಮೆಗಾಲೊವೈರಸ್ ಸಂಬಂಧಿತ ಲಕ್ಷಣಗಳು ಹೇಗಿರುತ್ತವೆ, ಕೊವಿಡ್-19 ಸೋಂಕಿತರಲ್ಲಿ ಏಕೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂಬ ಪ್ರಶ್ನೆಗಳಿಗೆ ಈ ವರದಿಯಲ್ಲಿ ಉತ್ತರ ಇದೆ.
ನವದೆಹಲಿಯ ಶ್ರೀ ಗಂಗಾರಾಮ್ ಆಸ್ಪತ್ರೆಯ ಹಿರಿಯ ವೈದ್ಯರ ತಂಡ ಸಿದ್ಧಪಡಿಸಿರುವ ವರದಿ ಪ್ರಕಾರ, “ಏಪ್ರಿಲ್-ಮೇ ತಿಂಗಳಿನಲ್ಲಿ ಪತ್ತೆಯಾದ ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯಲ್ಲಿ ಸೋಂಕು ತಗುಲಿರುವ ರೋಗಿಗಳಲ್ಲಿ ಈ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಕೊವಿಡ್-19 ಸೋಂಕು ತಗುಲಿದ 20 ರಿಂದ 30 ದಿನಗಳಲ್ಲಿ ಪ್ರತಿಕಾಯ ವ್ಯವಸ್ಥೆಯಲ್ಲಿ ಸಮಸ್ಯೆ, ಹೊಟ್ಟೆ ನೋವು ಹಾಗೂ ಗುದನಾಳದಲ್ಲಿ ರಕ್ತಸ್ರಾವ ಆಗುತ್ತಿರುವುದು ಗೊತ್ತಾಗಿದೆ. ಇಬ್ಬರು ರೋಗಿಗಳಲ್ಲಿ ತೀವ್ರ ರಕ್ತಸ್ರಾವ ಆಗುತ್ತಿದ್ದ ಹಿನ್ನೆಲೆ ಶಸ್ತ್ರಚಿಕಿತ್ಸೆ ನೀಡಲಾಯಿತು. ಅದಾಗ್ಯೂ, ಒಬ್ಬ ರೋಗಿಯು ಎದೆನೋವು ಹಾಗೂ ತೀವ್ರ ರಕ್ತಸ್ರಾವದಿಂದ ಪ್ರಾಣ ಬಿಟ್ಟಿದ್ದಾರೆ,” ಎಂದು ಹೇಳಲಾಗಿದೆ.
ಸೈಟೊಮೆಗಾಲೊವೈರಸ್ ಅಥವಾ CMV ಎಂಬುದು ಒಂದು ಸಾಮಾನ್ಯ ರೋಗಾಣು. ಮಾಯೋ ಕ್ಲಿನಿಕ್ ಪ್ರಕಾರ, ಒಂದು ಬಾರಿ ಈ ವೈರಸ್ ಮನುಷ್ಯನ ದೇಹ ಹೊಕ್ಕರೆ ಅದು ಜೀವಿತಾವಧಿ ವರಿಗೂ ಜೀವಂತವಾಗಿ ಉಳಿದುಕೊಳ್ಳುತ್ತದೆ. ಆರೋಗ್ಯವಂತ ವ್ಯಕ್ತಿಗಳಲ್ಲಿ ಈ ರೋಗಾಣುವಿನಿಂದ ಆರೋಗ್ಯ ಸಮಸ್ಯೆಗಳು ಎದುರಾಗುವುದು ತೀರಾ ಕಡಿಮೆಯಾಗಿರುತ್ತದೆ. ಆದರೆ ಪ್ರತಿಕಾಯ ವ್ಯವಸ್ಥೆಯಲ್ಲಿ ಸಮಸ್ಯೆ ಹೊಂದಿರುವವರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ರೋಗಾಣು ಒಂದು ಬಾರಿ ಅಂಟಿಕೊಂಡರೆ ಸುಲಭವಾಗಿ ರಕ್ತ, ಲಾಲಾರಸ, ಮೂತ್ರ ಸೇರಿದಂತೆ ದ್ರವರೂಪವಿರುವ ಭಾಗಗಳಿಗೆ ಬೇಗನೇ ಹರಡುತ್ತವೆ. ಈ ರೋಗಾಣುವಿನಿಂದ ನೀರುಗುಳ್ಳಿಗಳು ಕಾಣಿಸಿಕೊಳ್ಳುತ್ತವೆ. ಆರೋಗ್ಯವಂತ ವ್ಯಕ್ತಿಗಳಲ್ಲಿ ಸೈಟೊಮೆಗಾಲೊವೈರಸ್ ಯಾವುದೇ ರೀತಿ ಸಮಸ್ಯೆ ಇರುವುದಿಲ್ಲ, ಹೆಚ್ಚಾಗಿ ಎಷ್ಟೋ ಜನರಲ್ಲಿ ಈ ರೋಗಾಣು ಪ್ರವೇಶಿಸಿದ್ದರೂ ಗೊತ್ತಾಗುವುದಿಲ್ಲ. ಈ ಸೋಂಕು ಹೆಚ್ಚಾಗಿ ಪುಟ್ಟ ಮಕ್ಕಳಲ್ಲಿ ಹೆಚ್ಚಾಗಿ ಹರಡುತ್ತವೆ. ಡೇ ಕೇರ್ ಮತ್ತು ನರ್ಸರಿಗಳಿಗೆ ತೆರಳುವ ಮಕ್ಕಳಲ್ಲಿ ಈ ರೋಗಾಣು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸೈಟೊಮೆಗಾಲೊವೈರಸ್ ಪ್ರಾಥಮಿಕ ಲಕ್ಷಣಗಳು ಹೀಗಿವೆ.
* ಗಂಟಲು ನೋವು, * ಸ್ನಾಯು ನೋವು, * ಆಯಾಸ,* ಗ್ರಂಥಿಗಳ ಊದಿಕೊಳ್ಳುವಿಕೆ .* ಜ್ವರ
“ಆರೋಗ್ಯವಂತರಲ್ಲಿ ಸೈಟೊಮೆಗಾಲೊವೈರಸ್ ರೋಗಾಣು ಯಾವುದೇ ರೀತಿ ಗಂಭೀರ ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಇದರ ಹೊರತಾಗಿಯೂ ಪ್ರತಿಕಾಯ ವ್ಯವಸ್ಥೆ ದೋಷ, ರೋಗ ನಿರೋಧಕ ಶಕ್ತಿ ಪ್ರಮಾಣ ಕಡಿಮೆ ಇರುವವರು, ವಿಶೇಷವಾಗಿ ಅಂಗಾಂಶ, ಕಾಂಡಕೋಶ ಮತ್ತು ಮೂಳೆ ಮಜ್ಜೆಗಳ ಸಮಸ್ಯೆ ಹೊಂದಿರುವವರಿಗೆ ಮಾರಕವಾಗಿದೆ,” ಎಂದು ಮಾಯೋ ಕ್ಲಿನಿಕ್ ಎಚ್ಚರಿಸಿದೆ. “ಒಂದು ವೇಳೆ ಗರ್ಭಿಣಿಯರಲ್ಲಿ ರೋಗ ನಿರೋಧಕಶಕ್ತಿ ಕಡಿಮೆಯಾಗಿದ್ದು, ಸೈಟೊಮೆಗಾಲೊವೈರಸ್ ರೋಗಾಣು ತಗುಲಿದರೆ ಹೆಚ್ಚು ಅಪಾಯಕಾರಿ ಆಗಿರುತ್ತದೆ. ಗರ್ಭಾವಸ್ಥೆಯಲ್ಲಿ ಸೈಟೊಮೆಗಾಲೊವೈರಸ್ ರೋಗಾಣುವನ್ನೂ ಬೆಳೆಸುವ ಮಹಿಳೆಯರು ತಮ್ಮ ಶಿಶುವಿಗೆ ಅದನ್ನು ರವಾನಿಸಬಹುದು. ಆಗ ಹುಟ್ಟುವ ಮಗುವಿನಲ್ಲೂ ಈ ರೋಗಾಣುವಿನ ಲಕ್ಷಣಗಳು ಕಾಣಸಿಕೊಳ್ಳುವ ಅಪಾಯವಿರುತ್ತದೆ,” ಎಂದು ಅದು ಹೇಳಿದೆ. ಅಲ್ಲದೇ, ಈ ವೈರಸ್‌ನ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಾದ ಶ್ವಾಸಕೋಶ, ಲಿವರ್, ಅನ್ನನಾಳ, ಹೊಟ್ಟೆ, ಕರುಳು ಮತ್ತು ಮೆದುಳಿನ ಮೇಲೆ ದುಷ್ಪರಿಣಾಮ ಬೀರುವ ಅಪಾಯ ಹೆಚ್ಚಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸೈಟೊಮೆಗಾಲೊವೈರಸ್ ಸೋಂಕು ತಗುಲಿರುವ ವ್ಯಕ್ತಿಯ ಕಣ್ಣುಗಳು, ಮೂಗು ಮತ್ತು ಬಾಯಿ ಮೂಲಕ ಹರಡುತ್ತದೆ. ನಂತರದಲ್ಲಿ ವೈರಸ್ ಸೋಂಕಿತನ ದೇಹದ ಲಾಲಾರಸ, ರಕ್ತ, ಮೂತ್ರ, ವೀರ್ಯ, ಯೋನಿ ದ್ರವಗಳು ಅಥವಾ ಎದೆ ಹಾಲಿನಲ್ಲಿ ಹರಡುತ್ತದೆ. ಈ ಸೈಟೊಮೆಗಾಲೊವೈರಸ್ ಸೋಂಕು ಪತ್ತೆಗೆ ಮೂರು ರೀತಿ ಪರೀಕ್ಷೆಗಳು ಸಾಮಾನ್ಯವಾಗಿದೆ. ರಕ್ತ ಮತ್ತು ಮೂತ್ರ ಪರೀಕ್ಷೆ, ರೆಟಿನಾದಲ್ಲಿ ಉರಿಯೂತವನ್ನು ಪರೀಕ್ಷಿಸಲು ಬಯಾಪ್ಸಿ ಮತ್ತು ಕಣ್ಣುಗಳ ಪರೀಕ್ಷೆ ಸೇರಿದಂತೆ ಒಟ್ಟು ಮೂರು ಸಾಮಾನ್ಯ ವಿಧಾನಗಳಲ್ಲಿ ಸೋಂಕು ತಪಾಸಣೆ ನಡೆಸಲಾಗುತ್ತದೆ.
ರಕ್ತ ಮತ್ತು ಮೂತ್ರ ಪರೀಕ್ಷೆಗಳಲ್ಲಿ ಸಿಎಮ್‌ವಿ ಆಂಟಿಜೆನ್, ವೈರಸ್ ಲಕ್ಷಣ ಅಥವಾ ಆಣ್ವಿಕ ಪರೀಕ್ಷೆ ಸೇರಿವೆ. ಸೆರೊಲಾಜಿಕ್ ಪರೀಕ್ಷೆಗಳು ನಿಮ್ಮ ದೇಹದಲ್ಲಿ ರೋಗನಿರೋಧಕ ವ್ಯವಸ್ಥೆಯು ಸಿಎಮ್‌ವಿ ವಿರುದ್ಧ ಹೋರಾಡುತ್ತಿವೆಯೇ ಎಂಬುದನ್ನು ಪತ್ತೆ ಮಾಡುತ್ತದೆ. ಬಯಾಪ್ಸಿಯಲ್ಲಿ ಶಂಕಿತ ರೋಗಿಯ ಅನ್ನನಾಳ, ಶ್ವಾಸಕೋಶ ಅಥವಾ ಕರುಳಿನಿಂದ ಪಡೆದ ಅಂಗಾಂಶಗಳ ಸಣ್ಣ ಮಾದರಿಯನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ಪರಿಶೀಲಿಸಲಾಗುತ್ತದೆ.

Indresh KC

Recent Posts

ರಾಶಿ ಭವಿಷ್ಯ : ಯಾರಿಗೆ ಲಾಭ? ಯಾರಿಗೆ ನಷ್ಟ?

ರಾಶಿ ಭವಿಷ್ಯ ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಮೇ 15…

5 mins ago

ಕೊಟ್ಟ ಮಾತಿನಂತೆ ಚಿತ್ರ ಬಿಡಿಸಿದ ಯುವತಿಗೆ ಪತ್ರ ಬರೆದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಫೋಟೋ ಹಿಡಿದು ನಿಂತಿದ್ದ ಯುವತಿಯನ್ನು ಕಂಡು ತಮ್ಮ ಅಂಗರಕ್ಷಕ ಅಧಿಕಾರಿಗಳಿಂದ ಯುವತಿಯ ಫೋಟೊ…

8 hours ago

‘ಕಲ್ಕಿ-2898 AD’ ಚಿತ್ರಕ್ಕೆ ಕನ್ನಡದಲ್ಲಿ ಧ್ವನಿ ನೀಡಿದ ದೀಪಿಕಾ ಪಡುಕೋಣೆ

ನಟ ಪ್ರಭಾಸ್‌ ಅಭಿನಯದ ಬಹುನಿರೀಕ್ಷಿತ 'ಕಲ್ಕಿ-2898 AD' ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು, ನಟಿ ದೀಪಿಕಾ ಪಡುಕೋಣೆ ತಮ್ಮ ಪಾತ್ರದ ಡಬ್ಬಿಂಗ್‌…

8 hours ago

ಧನುಷ್- ಐಶ್ವರ್ಯ ಇಬ್ಬರೂ ಬೇರೆಯವರೊಟ್ಟಿಗೆ ಡೇಟಿಂಗ್; ಖ್ಯಾತ ಗಾಯಕಿ ಮಾಹಿತಿ

ಕಾಲಿವುಡ್‌ ನಟ ಧನುಷ್‌ ಮತ್ತು ಸೂಪರ್‌ ಸ್ಟಾರ್‌ ರಜನಿಕಾಂತ್‌ ಪುತ್ರಿ ಐಶ್ವರ್ಯಾ ರಜನಿಕಾಂತ್‌ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ.…

8 hours ago

ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಎಚ್​.ಡಿ ರೇವಣ್ಣ ಏನಂದ್ರು ?

ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಪರಪ್ಪರ ಅಗ್ರಹಾರ ಜೈಲಿನಿಂದ ಬಿಡುಗಡೆ ಹೊಂದಿದ ಶಾಸಕ…

9 hours ago

ಅಂಕಿತಾ ಓದಿದ ಶಾಲೆಗೆ 1 ಕೋಟಿ ರೂ. ಘೋಷಿಸಿದ ಸಿಎಂ ಸಿದ್ದರಾಮಯ್ಯ

ಈ ವರ್ಷದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಬಾಗಲಕೋಟೆಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ರಾಜ್ಯಕ್ಕೆ ಫಸ್ಟ್…

9 hours ago