ಮಂಡ್ಯ: ಇಲ್ಲಿಗೆ ಸಮೀಪದ ಸೂನಗನಹಳ್ಳಿಯ ರೈತ ಶಂಭು ಅವರು ಬಂಡೂರು ತಳಿಯ ಜೋಡಿ ಟಗರುಗಳನ್ನು ಸಾಕಿದ್ದರು. ಇವರ ಟಗರುಗಳು ಬರೋಬ್ಬರಿ 1 ಲಕ್ಷ 25 ಸಾವಿರ ರೂಪಾಯಿಗೆ ಮಾರಾಟವಾಗುವ ಮೂಲಕ ಸುದ್ದಿಯಾಗಿವೆ.
ತಲಾ 80 ಕೆಜಿ ತೂಕದ ಎರಡು ಬಂಡೂರು ತಳಿಯ ಟಗರುಗಳನ್ನು ಶಂಭು ಅವರು ಒಂದು ವರ್ಷದಿಂದ ಸಾಕಿದ್ದರು. ಇದೀಗ ಮಂಡ್ಯದ ಹಾಲಹಳ್ಳಿ ಬಡಾವಣೆಯ ಸಾಬೂದ್ದೀನ್ ಎಂಬುವವರು ಬಕ್ರೀದ್ ಹಬ್ಬಕ್ಕೆ 1ಲಕ್ಷದ 25 ಸಾವಿರ ರೂಪಾಯಿಯನ್ನು ನೀಡಿ ಖರೀದಿ ಮಾಡಿದ್ದಾರೆ. ಒಂದು ವರ್ಷದಿಂದ ಶಂಭು ಅವರು ಈ ಟಗರುಗಳನ್ನು ಪ್ರೀತಿಯಿಂದ ಸಾಕಿದ್ದರು. ಶಂಭು ಅವರು ಟಗರುಗಳನ್ನು ಮಾರಾಟ ಮಾಡಿದ್ದಕ್ಕಾಗಿ ಸಾಬೂದ್ದೀನ್ ಅವರು ಕೇಕ್ ಕಟ್ ಮಾಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.