Bengaluru 21°C

ಕುಂಭಮೇಳದಲ್ಲಿ ಕಾಲ್ತುಳಿತ ಅವಘಡ : ಕನಿಷ್ಠ 7 ಮಂದಿ ಮೃತ್ಯು

ಮಹಾ ಕುಂಭಮೇಳ ನಡೆಯುತ್ತಿರುವ ಪ್ರಯಾಗ್‌ ರಾಜ್‌ ನಲ್ಲಿ ಬುಧವಾರ ಮೌನಿ ಅಮಾವಾಸ್ಯೆ ಪ್ರಯುಕ್ತ ಕೋಟ್ಯಾಂತರ ಮಂದಿ ಸೇರಿದ್ದು, ಕಾಲ್ತುಳಿತ ಅವಘಡ ನಡೆದಿದೆ.

ಪ್ರಯಾಗ್‌ ರಾಜ್‌: ಮಹಾ ಕುಂಭಮೇಳ ನಡೆಯುತ್ತಿರುವ ಪ್ರಯಾಗ್‌ ರಾಜ್‌ ನಲ್ಲಿ ಬುಧವಾರ ಮೌನಿ ಅಮಾವಾಸ್ಯೆ ಪ್ರಯುಕ್ತ ಕೋಟ್ಯಾಂತರ ಮಂದಿ ಸೇರಿದ್ದು, ಕಾಲ್ತುಳಿತ ಅವಘಡ ನಡೆದಿದೆ. ಇದುವರೆಗೂ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು ನೂರಾರು ಮಂದಿ ಗಾಯಗೊಂಡಿದ್ದಾರೆನ್ನಲಾಗಿದೆ.


ಇದೇ ವೇಳೆ ಕುಂಭಮೇಳದಲ್ಲಿ ಭಾಗವಹಿಸುತ್ತಿರುವ ಯಾತ್ರಿಕರಿಗೆ ಸರ್ಕಾರ ಮಹತ್ವದ ಸೂಚನೆ ನೀಡಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಈ ಕುರಿತು ತಮ್ಮ ಎಕ್ಸ್‌ ಖಾತೆಯ ಮೂಲಕ ಸಂದೇಶ ಹಂಚಿಕೊಂಡಿದ್ದಾರೆ.


ಕುಂಭಮೇಳದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಭಕ್ತಾದಿಗಳು ವಿಶೇಷ ಎಚ್ಚರಿಕೆ ವಹಿಸಿ. ಯಾವುದೇ ಗಡಿಬಿಡಿ ನೂಕುನುಗ್ಗಲುಗಳಿಂದ ದೂರವಿರಿ. ಪ್ರತಿಯೊಂದು ಸ್ನಾನಘಟ್ಟದಲ್ಲಿಯೂ ಸಹ ಸ್ನಾನಾದಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ತ್ರಿವೇಣಿ ಸಂಗಮದಲ್ಲಿಯೇ ಮೀಯಬೇಕೆಂಬ ನಿರ್ಧಾರ ಬೇಡ. ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.


https://x.com/myogiadityanath/status/1884430962144190880?


Nk Channel Final 21 09 2023