ದುಬೈ : ತುಳು ಪಾತೆರ್ ಗ ತುಳು ಒರಿಪಾಗ ದುಬೈ ಯು.ಎ.ಇ ತಂಡದ 9ನೇ ವರ್ಷದ ರಕ್ತದಾನ ಶಿಬಿರವು 13 ಮಾರ್ಚ್ 2022ನೇ ಆದಿತ್ಯವಾರ ದುಬೈಯ ಲತಿಫಾ ಆಸ್ಪತ್ರೆಯಲ್ಲಿ ಜರಗಿತು.
ದುಬೈಯ ಸಾಮಾಜಿಕ ರೂವಾರಿ ಬಾಲಕೃಷ್ಣ ಸಾಲ್ಯಾನ್ ಇವರ ಸಹಕಾರದೊಂದಿಗೆ ನಡೆದ ಶಿಬಿರದಲ್ಲಿ ತಂಡದ ಹಿರಿಯ ಸದಸ್ಯರಾದ ಪ್ರಭಾಕರ್ ಶೆಟ್ಟಿ , ನೋವೆಲ್ ಅಲ್ಮೇಡ , ಸತೀಶ್ ಉಲ್ಲಾಳ್ , ಅಜ್ಮಲ್ ದುಬೈ , ಅಶೋಕ್ ಬೈಲೂರು , ಪ್ರೇಮ್ ಜೀತ್, ರೀತು ಅಂಚನ್ ಭಾಗವಹಿಸಿದರು.
ತಂಡದ ಎಲ್ಲಾ ಸದಸ್ಯರು ಸೇರಿ 70 ಕ್ಕಿಂತ ಹೆಚ್ಚಿನ ರಕ್ತದಾನಿಗಳು ರಕ್ತಾದಾನ ಮಾಡಿ ಕರ್ಮಭೂಮಿಯ ಋಣವನ್ನು ತೀರಿಸಿ ಮತ್ತು ರಕ್ತದಾನಿಗಳಿಗಳ ಸೇವೆಯ ಹುರುಪು ಹೆಚ್ಚಿಸಲು ಸ್ಕಾಟ್ ಬ್ಯಾಡರ್ (Scott Bader) ಸಂಸ್ಥೆಯು ಟಿ ಶರ್ಟ್ ನ್ನು ದಾನಿಗಳಿಗೆ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
REPORT CREDIT : JAI