ಮುಂಬಯಿ: ಕಲ್ಯಾಣ್ – ಡೊಂಬಿವಾಲಿ ಮುನ್ಸಿಪಲ್ ಕಾರ್ಪೊರೇಷನ್ (ಕೆಡಿಎಂಸಿ) ಅಧ್ಯಕ್ಷ – ಶಿವಸೇನೆ ಕಾರ್ಪೋರೇಟರ್ ದಯಶಂಕರ್ ಪಿ. ಶೆಟ್ಟಿ, ಅವರ ನೇತೃತ್ವದಲ್ಲಿ ಕಲ್ಯಾಣ್ – ಡೊಂಬಿವಲಿ ಪ್ರದೇಶದಲ್ಲಿ ಲಾಕ್ಡೌನ್ ನಿಂದಾಗಿ ಅಸಾಯಕರಾಗಿದ್ದ ಸಾವಿರಾರು ಜನರಿಗೆ ಸಹಕರಿಸುತ್ತಿರುವರು. ಈ ಕಠಿಣ ಸಮಯದಲ್ಲಿ ಸಹಾಯವನ್ನು ನೀಡಿದ ದಾನಿಗಳು ಮತ್ತು ಇತರರಿಗೆ ದಯಾಶಂಕರ್ ಪಿ. ಶೆಟ್ಟಿ ಕೃತಜ್ನತೆ ಅರ್ಪಿಸಿದರು. ರೆಡಿ-ಟು-ಈಟ್ ಸೆಂಟ್ರಲ್ ಕಮ್ಯುನಿಟಿ ಕಿಚನ್ ಅನ್ನು ಸ್ಥಾಪಿಸಿದ್ದು, ಮುಂಬರುವ ದಿನಗಳಲ್ಲಿ ಇದು ಸಹಕಾರಿಯಾಗುತ್ತದೆ.
ದಯಾಶಂಕರ್ ಪಿ.ಶೆಟ್ಟಿ ಮತ್ತು ಅವರ ತಂಡವು ಈ ಕಾರ್ಯವನ್ನು ನಿರ್ವಹಿಸುವಾಗ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುತ್ತಾರೆ.
ಈಗಾಗಲೇ 17000 ಕ್ಕೂ ಹೆಚ್ಚು ಫೇಸ್ ಮಾಸ್ಕ್ಗಳನ್ನು , ಅಕ್ಕಿ, ಅಟ್ಟಾ / ಗೋಧಿ, ದಾಲ್ ಮತ್ತು ತೈಲವನ್ನು ಒಳಗೊಂಡಿರುವ 1800 ಕ್ಕೂ ಹೆಚ್ಚು ಆಹಾರ ಧಾನ್ಯ ಪ್ಯಾಕೆಟ್ಗಳನ್ನು ವಿತರಿಸಲಾಯಿತು. ಏಪ್ರಿಲ್ 27 ರವರೆಗೆ ಅವರು 4000 ಕೆಜಿಗಿಂತ ಹೆಚ್ಚು ಗೋಧಿ / ಗೋಧಿ ಹಿಟ್ಟು, 4000 ಕೆ.ಜಿ. ಅಕ್ಕಿ, 2000 ಕೆಜಿ ದಾಲ್ ಮತ್ತು 2000 ಲೀಟರ್ ಅಡುಗೆ ಎಣ್ಣೆ ಯನ್ನು ಈಗಾಗಲೇ ವಿತರಿಸಿದ್ದು ಇದು ಮುಂದುವರಿಯುತ್ತಿದೆ.
ಇವರ ತಂಡವು ಸುಮಾರು 6000 ಲೀಟರ್ಗಳನ್ನು ಎಫ್ಡಿಎ 3% ಹೈಡ್ರೋಜನ್ ಪೆರಾಕ್ಸೈಡ್ ಸೋಂಕು ನಿವಾರಕವನ್ನು ಸಂಗ್ರಹಿಸಿ ಪರಿಸರದಲ್ಲಿ ಸಿಂಪಡಿಸಿದೆ. ಇದಕ್ಕೆ ಕೆಡಿಎಂಸಿಯ ಯಂತ್ರಗಳನ್ನು ಬಳಸಲಾಗುತ್ತಿತ್ತು ಒಂದೆರಡು ಯಂತ್ರಗಳನ್ನು ಖರೀದಿಸಿ ಈ ಸೋಂಕುನಿವಾರಕವನ್ನು ಸಿಂಪಡಿಸಲು ತರಬೇತಿ ಪಡೆದ ವ್ಯಕ್ತಿಗಳನ್ನು ನೇಮಿಸಲಾಗಿದೆ.
ಈಶ್ವರ ಎಂ. ಐಲ್
ವಿವಾದಾತ್ಮಕ ಹೇಳಿಕೆ ಹಿನ್ನಲೆ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆಗೆ ಚುನಾವಣಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನಿನ್ನೆ(ಏ.30) ಪ್ರಿಯಾಂಕಾ ಜಾರಕಿಹೊಳಿ…
ಸ್ಯಾಂಡಲ್ವುಡ್ನ ಖ್ಯಾತ ನಟ ಕಾರ್ತಿಕ್ ಜಯರಾಮ್ ಅಲಿಯಾಸ್ ಜೆಕೆ ಅವರು ಇಂದು (ಮೇ 1) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಮಹಿಳೆಯನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಮೃತದೇಹ ಗುರುತು ಪತ್ತೆಯಾಗದಂತೆ ಬೆಂಕಿ ಹಚ್ಚಿ ಅರಣ್ಯದಲ್ಲಿ ಹಾಕಿ ಹೋಗಿರುವ ಪ್ರಕರಣ ತಾಲ್ಲೂಕಿನ ತೂಬಗೆರೆ…
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪರವಾಗಿ ಪ್ರಚಾರಕ್ಕೆ ಬಂದ ಕೇಂದ್ರ ಗೃಹ ಮಂತ್ರಿ ಅಮೀತ್ ಶಾ ಅವರು ವಿಜಯ…
ಕೆಂಡ’ ಸಿನಿಮಾ ಬಿಡುಗಡೆಗೂ ಮುನ್ನವೇ ಬಾರಿ ಸದ್ದು ಮಾಡುತ್ತಿದ್ದೆ. ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕ ಸಹದೇವ್ ಕೆಲವಡಿ ಅವರಿಗೆ ಸಿನಿಮಾ…
ಹಾಸನದ ಅಶ್ಲೀಲ ವಿಡಿಯೋ ಪ್ರಕರಣ ಬೆನ್ನಲ್ಲೇ ಇದೀಗ ಮತ್ತೊರ್ವ ಶಾಸಕನ ವಿಡಿಯೋ ವೈರಲ್ ಆಗಿದೆ.ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಶಾಸಕರದ್ದು ಎನ್ನಲಾದ…