ಬಾರೊಂದರಲ್ಲಿ ನಡೆಯುವ ಕೊಲೆ, ಆ ಕೊಲೆಯನ್ನು ಸಪ್ಲೈಯರ್ಗಳು ಮಾಡಿದ್ದಾರಾ? ಗ್ರಾಹಕರಾ? ಎಂಬ ಕುತೂಹಲದ ನಡುವೆ ಪೊಲೀಸರ ದೌರ್ಜನ್ಯ, ಸೇಡು ಇತ್ಯಾದಿ ಅಂಶಗಳನ್ನು ಒಳಗೊಂಡಿರುವ “ಸಪ್ಲೇಯರ್ ಶಂಕರ” ಸಿನಿಮಾದ ಟೀಸರ್ ಆನಂದ್ ಆಡಿಯೋ ನಲ್ಲಿ ಬಿಡುಗಡೆಯಾಗಿದೆ.
ತ್ರಿನೇತ್ರ ಫಿಲಂಸ್ ಲಾಂಛನದಲ್ಲಿ ಎಂ ಚಂದ್ರಶೇಖರ್ ಹಾಗೂ ಎಂ.ನಾಗೇಂದ್ರ ಸಿಂಗ್ ಅವರು ‘ಸಪ್ಲೈಯರ್ ಶಂಕರ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾವನ್ನು ರಂಜಿತ್ ನಿರ್ದೇಶನ ಮಾಡಿದ್ದಾರೆ. ನಿಶ್ಚಿತ್ ಕರೋಡಿ ನಾಯಕನಾಗಿ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಅನ್ನು ನಿರ್ಮಾಪಕರಾದ ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್ ಬಿಡುಗಡೆ ಮಾಡಿದರು.
‘ಸಪ್ಲೇಯರ್ ಶಂಕರ” ಸಿನಿಮಾ ಬಾರ್ ಸಪ್ಲೇಯರ್ ಒಬ್ಬನ ಕತೆ. ಕತೆಯನ್ನು ನಾನೇ ಬರೆದಿದ್ದೇನೆ. ಈ ಪಾತ್ರಕ್ಕಾಗಿ ನಾಯಕ ನಿಶ್ಚಿತ್ ಕರೋಡಿ ಶ್ರಮಪಟ್ಟಿದ್ದಾರೆ. ನನ್ನ ಕಥೆಗೆ ಜೀವ ತುಂಬಿದ್ದು ನಿರ್ಮಾಪಕರಾದ ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್ ಎಂದು ನಿರ್ದೇಶಕ ರಂಜಿತ್ ತಿಳಿಸಿದರು.