News Karnataka Kannada
Thursday, May 02 2024
ಸಾಂಡಲ್ ವುಡ್

ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೋಣ: ಕಿಚ್ಚ ಸುದೀಪ್‌ ಸಾರಾ ಮನವಿ

I support Cm Basavaraj Bommai: Kichcha Sudeep
Photo Credit : News Kannada

ಬೆಂಗಳೂರು: ಸುದೀಪ್ ಹಾಗೂ ನಿರ್ಮಾಪಕ ಎಂಎನ್ ಕುಮಾರ್ ನಡುವಿನ ವಿವಾದವನ್ನು ಬಗೆಹರಿಸಲು ಫಿಲಂ ಚೇಂಬರ್ ಯತ್ನಿಸುತ್ತಿದೆ. ಸ್ವತಃ ನಿರ್ಮಾಪಕ ಕುಮಾರ್, ಫಿಲಂ ಚೇಂಬರ್ ಎದುರು ಧರಣಿ ಕೂತಿದ್ದು, ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಮಾತನಾಡಿದ್ದು, ಸುದೀಪ್ ಅವರು ಫಿಲಂ ಚೇಂಬರ್​ನ ಸಂಧಾನ ಸಮಿತಿ ಮುಂದೆ ಹಾಜರಾಗಿ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸುದೀಪ್ ಅವರಿಂದ ಹಣ ಕೊಡಿಸಿ ಎಂದು ನಿರ್ಮಾಪಕ ಎಂಎನ್ ಕುಮಾರ್ ವಾಣಿಜ್ಯ ಮಂಡಳಿಯಲ್ಲಿ ಮನವಿ ಮಾಡಿದ್ದಾರೆ. ಅವರು ಕೇಳಿದ ಕೂಡಲೇ ಹಣ ಕೊಡಿಸಿಬಿಡಲು ಆಗುವುದಿಲ್ಲ. ಸುದೀಪ್ ಸಹ ಸಣ್ಣವರಲ್ಲ. ಚಿತ್ರರಂಗದಲ್ಲಿ ವರ್ಷಗಳಿಂದಲೂ ಇರುವ ವ್ಯಕ್ತಿ. ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದಿದ್ದರೆ ಕೇವಲ 10-15 ನಿಮಿಷಗಳಲ್ಲಿ ಈ ಸಮಸ್ಯೆ ಬಗೆಹರಿದುಬಿಡುತ್ತಿತ್ತು. ಈ ಹಿಂದೆಯೂ ಈ ರೀತಿಯ ಹಲವಾರು ಸಮಸ್ಯೆಗಳು ವಾಣಿಜ್ಯ ಮಂಡಳಿಯಲ್ಲಿ ಬಗೆಹರಿದಿವೆ” ಎಂದಿದ್ದಾರೆ.

ಕಾಲ ಇನ್ನೂ ಮಿಂಚಿಲ್ಲ. ಸುದೀಪ್, ನಮ್ಮವರು, ಕನ್ನಡದ ಕಲಾವಿದರು, ಸುದೀಪ್ ನಮ್ಮ ಹೆಮ್ಮೆ. ಅವರು ಬಂದು ವಾಣಿಜ್ಯ ಮಂಡಳಿಯಲ್ಲಿ ಕೂತು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಅವರ ಮೇಲೆ ಯಾರೂ ದೂಷಣೆ ಮಾಡುತ್ತಿಲ್ಲ. ಸುದೀಪ್ ಅವರು ಮಂಡಳಿಗೆ ಬರಬೇಕು, ಕುಮಾರ್ ಹೇಳುತ್ತಿರುವುದು ಸತ್ಯವಾ ಅಥವಾ ಸುಳ್ಳಾ ಎಂಬುದನ್ನು ಸುದೀಪ್ ಅವರೇ ಸಾಬೀತು ಪಡಿಸಬಹುದಾಗಿತ್ತು. ಕುಮಾರ್ ಸುಳ್ಳು ಹೇಳುತ್ತಿದ್ದರೆ ನೀವೇ ಅದನ್ನು ಸಾಬೀತು ಮಾಡಿ, ನಿಮಗೆ ಅವಕಾಶ ಇದೆ. ಒಬ್ಬ ನಿರ್ಮಾಪಕನ ಮೇಲೆ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿರುವುದು ಸರಿಯಲ್ಲ. ಸಮಸ್ಯೆಯನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳೋಣ” ಎಂದಿದ್ದಾರೆ ಸಾರಾ ಗೋವಿಂದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು