ಜಸ್ಟ್ ರೋಲ್ ಫಿಲ್ಮ್ಸ್ಸಂಸ್ಥೆ ತನ್ನದೇ ಬ್ಯಾನರ್ ನಲ್ಲಿ ಈಗಾಗಲೇ ಒಂದಷ್ಟು ಕಲಾರಸಿಕರಿಗೆ ಕಲೆಯನ್ನು ಉಣಬಡಿಸುತ್ತಾ ಬಂದಿದೆ ಹಾಗೇಯೇ ಈ ಭಾರಿಯೂ ಕೂಡಾ ಒಂದು ಅದ್ಭುತ ಪ್ತೀತಿಯ ಪಯಣದ ಅಲ್ಬಮ್ ಸಾಂಗ್ ತಯಾರಿಸಿ ಬಿಡುಗಡೆಗೆ ಅಣಿಯಾಗುತ್ತಿದೆ ಅದೇ “ಕೆಂದಾವರೆ”.
ಚಿಕ್ಕಮಂಗಳೂರು ಜಿಲ್ಲೆಯ, ತರಿಕೆರೆ, ಕೆಮ್ಮಣ್ಣುಗುಂಡಿ, ಹಾಗೂ ಆಸುಪಾಸಿನ ಹಲವಾರು ಪ್ರವಾಸಿ ತಾಣಗಳು ಮತ್ತು ಶಿವಮೊಗ್ಗ ಜಿಲ್ಲೆಯ ರಮಣೀಯ ಪ್ರದೇಶಗಳ ಜೊತೆಗೆ ಮಂಗಳೂರಿನ ಹೆಸರಾಂತ ಸ್ಥಳಗಳಲ್ಲಿ ಚಿತ್ರೀಕರಣಗೋಂಡಿದೆ. ಜೊತೆಯಲ್ಲಿ ಜಸ್ಟ್ ರೋಲ್ ಸಂಸ್ಥೆಯ ಈ ಪ್ರಯತ್ನಕ್ಕೆ ಒಂದಷ್ಟು ಕೈಗಳ ಶ್ರಮವಿದೆ.
ಈ ಅಲ್ಬಮ್ ಗೀತೆಯನ್ನು ಸುಂದರವಾಗಿ ಅಚ್ಚುಕಟ್ಟಾಗಿ ಚಿತ್ರಕತೆ ಮತ್ತು ನಿರ್ದೇಶನ ಮಾಡಿದವರು ಕನ್ನಡ ತುಳು, ಕೊಂಕಣಿ ಚಲನಚಿತ್ರ ಕರಾವಳಿಯ ಯುವ ನಿರ್ದೇಶಕರಾದ ಮೆಲ್ವಿನ್ ಎಲ್ಪೆಲ್, ಸಹ ನಿರ್ದೇಶನ ನೋರ್ಬೆಟ್ ಡಿಸೋಜಾ.
ಈ ಹಾಡಿಗೆ ಅದ್ಭುತವಾಗಿ ಸಂಗೀತ ನೀಡಿದವರು ಖ್ಯಾತ ಸಂಗೀತ ನಿರ್ದೇಶಕ ರೋಷನ್ ಡಿಸೋಜಾ ಆಂಜೆಲೋರ್ ಮತ್ತು ಈ ಗೀತೆಯ ಸಾಹಿತ್ಯಕ್ಕೆ ಧ್ವನಿ ನೀಡಿದ ಗಾಯಕ ಪ್ರಜೋತ್ ಡೇಸಾ ಹಾಗೂ ಗೀತೆಯ ಸಾಹಿತ್ಯವನ್ನು ಕೆ.ಕೆ ರಾಗು ರಟ್ಟಾಡಿ ಯವರು ನೀಡಿರುತ್ತಾರೆ.
ಜೋಸ್ಟಿನ್ ಡೇಸಾ ಇವರ ನಿರ್ಮಾಣದ ಈ ಅಲ್ಬಮ್ ಗೀತೆಯ ಸಂಪೂರ್ಣ ಚಿತ್ರೀಕರಣವನ್ನು ತನ್ನ ಕೆಮೆರಾ ಕೈಚಳಕದಲ್ಲಿ ಸೆರೆ ಹಿಡಿದ ಕೆಮೆರಾಮ್ಯಾನ್. ಡೇನಿಯಲ್ ಜೈಸನ್ ಹಾಗೂ ಹೊಸಮಾದರಿಯ ಸಂಕಲನದ ಜವಾಬ್ದಾರಿ ಹೊತ್ತವರು ಸಚಿನ್ ಬಾಡ ಮತ್ತು ಕಲೆ ವೆಂಕಿ ತರಿಕೆರೆ.
ಇನ್ನೇನು ಸದ್ಯದಲ್ಲೆ ಎಲ್ಲರ ಮನೆ ಮಾನಸದಲ್ಲಿ ಹೊರಡಲಿದೆ ನಮ್ಮ ಸಂಸ್ಥೆಯ ವಿಜಿತ್ ಕೋಟ್ಯಾನ್ ಮತ್ತು ಚೈತನ್ಯ ಮೈಸೂರು ಅಭಿನಯದ ಕೆಂದಾವರೆ ಎಲ್ಲಾ ಸೋಷಿಯಲ್ ಮೀಡಿಯಾಗಳಲ್ಲೂ ಬರುತ್ತಿದೆ. ಹರಸಿ ಹಾರೈಸಿ ಎನ್ನುವುದು ನಮ್ಮ ಸಂಸ್ಥೆಯ ಕೋರಿಕೆ.
ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…
ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…
ತಮಿಳುನಾಡಿನ ಖಾಸಗಿ ಟಿವಿ ಚಾನೆಲ್ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್ ಮುನಿಸ್ವಾಮಿ…
ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ. ಹೌದು. .…
ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ಸಿಬಿ vs ಸಿಎಸ್ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…
ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.