ಸ್ಯಾಂಡಲ್ ವುಡ್: ಗಾಂಧಿನಗರಕ್ಕೆ ಆಗಾಗ ಹೊಸಬರು ಎಂಟ್ರಿ ಕೊಡೋದು ಹೊಸದೇನಲ್ಲ. ಆದ್ರೆ ಹೊಸ ತಂಡ ಎಂಟ್ರಿ ಕೊಟ್ರೆ ತಿರುಗಿ ನೋಡುವಂತೆ ಮಾಡೋದ್ ಇದೆಯಲ್ಲ ಅದು ಸ್ಪೆಷಾಲಿಟಿ. ಸದ್ಯ ಗಾಂಧಿನಗರದ ಮೂಲೆ ಮೂಲೆಯಲ್ಲೂ ಜುಗಲ್ ಬಂದಿ ಅನ್ನೋ ಟೈಟಲ್ ಸದ್ದು ಜೋರಾಗಿ ಕೇಳಿ ಬರ್ತಿದೆ. ಹೊಸಬರ ಈ ಸಿನಿಮಾ ಗಿಟ್ಟಿಸಿಕೊಂಡಿರುವ ಡಿಮ್ಯಾಂಡ್ ಎಲ್ಲರು ಒಂದು ಕ್ಷಣ ತಿರುಗಿ ನೋಡುವಂತೆ ಮಾಡುತ್ತಿದೆ.
ಸಾಮಾನ್ಯವಾಗಿ ಸ್ಟಾರ್ ಸಿನಿಮಾಗಳು ಸೆಟ್ಟೆರುತ್ತೆ ಅಂದ ತಕ್ಷಣ ಒಂದಷ್ಟು ಮಂದಿ ಕಣ್ಣು ಆ ಸಿನಿಮಾಗಳ ಮೇಲೆ ಬೀಳುತ್ತೆ. ಸಿನಿಮಾ ರೈಟ್ಸ್, ಆಡಿಯೋ ರೈಟ್ಸ್, ಡಿಸ್ಟ್ರಿಬ್ಯೂಷನ್ ಹೀಗೆ ನಾನಾ ರೀತಿಯಲ್ಲಿ ಯೋಚನೆ ಮಾಡ್ತಾರೆ. ಆದ್ರೆ ಹೊಸಬರ ಸಿನಿಮಾಗಳಿಗೆ ಹೀಗೆಲ್ಲಾ ಡಿಮ್ಯಾಂಡ್ ಇರೋದಿಲ್ಲ. ಒಂದ್ವೆಳೆ ಹೊಸ ಸಿನಿಮಾ ಈ ರೀತಿ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಳ್ಳುತ್ತೆ ಅಂದ್ರೆ ಅದು ಹಿಸ್ಟರಿನೇ ಸರಿ. ಆ ಹಿಸ್ಟರಿ ಬರೆದಿರೋದು ಸದ್ಯಕ್ಕೆ ಜುಗಲ್ ಬಂದಿ ಅನ್ನೋ ಕಂಪ್ಲೀಟ್ ಹೊಸಬರ ಸಿನಿಮಾ.
ಹೌದು, ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿ ಜೊತೆಗೆ ನಿರ್ಮಾಣದ ಹೊಣೆ ಹೊತ್ತು ಜುಗಲ್ ಬಂದಿಗೆ ದಿವ್ಯ ಘಳಿಗೆಯಲ್ಲಿ ಮುಹೂರ್ತ ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಶುರುವಾಗಲಿದೆ. ಆದ್ರೆ ಇದೆಲ್ಲದರ ನಡುವೆ ಸಿನಿಮಾ ತಂಡವೇ ಕುಣಿಯುವಂತ ಸುದ್ದಿ ಸಿಕ್ಕಿದೆ. ಸಿನಿಮಾ ಇನ್ನು ಸೆಟ್ಟೇರುವ ಮುನ್ನವೇ ಜುಗಲ್ ಬಂದಿ ಆಡಿಯೋ ರೈಟ್ಸ್ ಉತ್ತಮ ಬೆಲೆಗೆ ಸೇಲ್ ಆಗಿದೆ. ಈ ಸಂತಸದ ಸುದ್ದಿ ಇಡೀ ತಂಡಕ್ಕೆ ಮತ್ತಷ್ಟು ಉತ್ಸಾಹ ತುಂಬಿದೆ.
ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿರುವ ಜುಗಲ್ ಬಂದಿ ಸಿನಿಮಾದಲ್ಲಿ ಯಶ್ ಶೆಟ್ಟಿ, ಸಂತೋಷ್ ಅಶ್ರಯ್, ಅಶ್ವಿನ್ ರಾವ್ ಪಲ್ಲಕ್ಕಿ, ಅರ್ಚನಾ ಕೊಟ್ಟಿಗೆ, ಮಾನಸಿ ಸುಧೀರ್ ಮುಂತಾದವರು ತಾರಾಗಣದಲ್ಲಿದ್ದಾರೆ. ಪ್ರದ್ಯೋತನ್ ಸಂಗೀತ, ಎಸ್. ಕೆ ರಾವ್ ಕ್ಯಾಮೆರಾ ವರ್ಕ್ ಚಿತ್ರಕ್ಕಿರಲಿದೆ.
ನೆನ್ನೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಧಾರಕಾರವಾಗಿ ಮಳೆ ಸುರಿದು ಭೂಮಿಯನ್ನುವರುಣ ತಂಪಾಗಿಸಿದ್ದಾನೆ ಆದರೆ ಕೆಲವಡೆ ಅವಾಂತರಗಳಾಗಿವೆ.ಕೃಷ್ಣನ ನಾಡು ಉಡುಪಿಯಲ್ಲೂ ಮಂಗಳವಾರ…
ಈಗ ಮಾವು ಸೀಜನ್. ಯಾವ ಹಣ್ಣಿನ ಅಂಗಡಿ ನೋಡಿದರಲ್ಲಿ ಮಾವಿನ ರಾಶಿ ಕಂಡುಬರುತ್ತದೆ. ಆದರೆ ಈಗ ಕೆಲವೊಂದು ಮಾವು ಅಪಾಯಕಾರಿ…
ರಾಶಿ ಭವಿಷ್ಯ ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಮೇ 15…
ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಫೋಟೋ ಹಿಡಿದು ನಿಂತಿದ್ದ ಯುವತಿಯನ್ನು ಕಂಡು ತಮ್ಮ ಅಂಗರಕ್ಷಕ ಅಧಿಕಾರಿಗಳಿಂದ ಯುವತಿಯ ಫೋಟೊ…
ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ಕಲ್ಕಿ-2898 AD' ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು, ನಟಿ ದೀಪಿಕಾ ಪಡುಕೋಣೆ ತಮ್ಮ ಪಾತ್ರದ ಡಬ್ಬಿಂಗ್…
ಕಾಲಿವುಡ್ ನಟ ಧನುಷ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ.…