News Karnataka Kannada
Thursday, May 02 2024
ಸಾಂಡಲ್ ವುಡ್

ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಿಸಿದ ನಟ ವಸಿಷ್ಟ ಸಿಂಹ

Vasishta Simha
Photo Credit : News Kannada

ಮೈಸೂರು: ಚಾಮುಂಡಿಪುರಂ ಭಾಗವಾದ ಅಂದಾನಿ ವೃತ್ತದಲ್ಲಿರುವ ಹಳೆ ಶಾಲೆಯಾದ ವಾಣಿವಿದ್ಯಾಮಂದಿರದ ಶಾಲಾ ಮಕ್ಕಳಿಗೆ ನಟ ವಸಿಷ್ಟ ಸಿಂಹ ನೋಟ್ ಪುಸ್ತಕ, ಪೆನ್ ವಿತರಿಸಿದರು.

ಬಳಿಕ ಮಾತನಾಡಿ ಶಿಕ್ಷಣ ಪಡೆಯುವುದು ಪ್ರತಿಯೊಂದು ಮಗುವಿನ ಜನ್ಮಸಿದ್ಧ ಹಕ್ಕು, ನಾವು ಯಾವುದೇ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದರೂ ಶಿಕ್ಷಣವಂತರಾಗಿದ್ದರೇ ಮಾತ್ರ ಉನ್ನತ ಸ್ಥಾನಕ್ಕೇರಿ ಸಾಧನೆ ಮಾಡಲು ಸಾಧ್ಯ. ಹಾಗಾಗಿ ಎಷ್ಟೇ ತೊಂದರೆಯಿದ್ದರೂ ಶಿಕ್ಷಣವನ್ನ ಮಕ್ಕಳು ಮೊಟಕುಗೊಳಿಸದೇ ಮುಂದುವರೆಸಬೇಕು, ಎರಡು ವರ್ಷಗಳ ಕಾಲ ಕೋವಿಡ್ ಇದ್ದ ಕಾರಣ ಆನ್ಲೈನ್ ತರಗತಿಗಳು ನಡೆದು ಮಕ್ಕಳು ಶಾಲೆಗೆ ಬರಲಾಗಿರಲಿಲ್ಲ ಈ ಬಾರಿ ಶಾಲಾ ಶೈಕ್ಷಣಿಕ ವರ್ಷ 15ದಿನಗಳ ಮುಂಚಿತವಾಗಿ ಪ್ರಾರಂಭಿಸಿರುವ ಶಿಕ್ಷಣ ಇಲಾಖೆ ನಡೆ ಸ್ವಾಗತಾರ್ಹ, ನಾನು ಕೂಡ ಚಾಮುಂಡಿಪುರಂ ವಿದ್ಯಾರಣ್ಯಪುರಂ ಬಡಾವಣೆಯಲ್ಲಿ ಆಡಿ ಬೆಳೆದವನು.

ಕಷ್ಟದ ದಿನಗಳು ಎಷ್ಟೇ ಎದುರಾದರೂ ಸಹ ವ್ಯಾಸಾಂಗ ಮಾಡುವುದನ್ನ ನಿಲ್ಲಿಸಲಿಲ್ಲ, ಬಾಲ್ಯದ ದಿನಗಳಲ್ಲಿ ಇತಿಹಾಸದ ಪುಸ್ತಕಗಳನ್ನ ಓದಿ ಮಾಹಿತಿ ತಿಳಿದುಕೊಳ್ಳುವಲ್ಲಿ ಹೆಚ್ಚು ಆಸಕ್ತಿ ಉತ್ಸಾಹ ನನ್ನಲ್ಲಿತ್ತು, ಪುಸ್ತಕವೇ ನನ್ನ ಅತ್ಯುತ್ತಮ ಸ್ನೇಹಿತ, ಮುಂದಿನ ದಿನದಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಮತ್ತು ಅಶಕ್ತ ಮಕ್ಕಳಿಗೆ ನೋಟ್ ಪುಸ್ತಕ ಕಲಿಕಾ ಪಠ್ಯ ಸಾಮಗ್ರಿಗಳನ್ನು ನೀಡುವ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಪರಶುರಾಮ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ , ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ , ಉದ್ಯಮಿ ಜಯರಾಮ್, ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್, ಯುವ ಮುಖಂಡರಾದ ಅಜಯ್ ಶಾಸ್ತ್ರಿ, ಕಾರ್ತಿಕ್, ಮುರಳಿಧರ್, ಎಸ್ ಎನ್ ರಾಜೇಶ್ , ನವೀನ್ ಕೆಂಪಿ , ಇತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು