ರಿಯಲ್ ಲೈಫ್ ನಲ್ಲಿ ಸಪ್ತಪದಿ ತುಳಿದ ನಟ ಯಶಸ್ ಸೂರ್ಯ

ಬೆಂಗಳೂರು : ಸ್ಯಾಂಡಲ್ ವುಡ್  ನಟ ಯಶಸ್ ಸೂರ್ಯ ಇಂದು  ಅಂಬಿಕಾ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಬೆಂಗಳೂರಿನ ಬನಶಂಕರಿಯಲ್ಲಿ ಇರುವ ಪುಣ್ಯಕ್ಷೇತ್ರ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯದಲ್ಲಿ ಗುರುವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ಅಂಬಿಕಾ ಅವರ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಸರಳವಾಗಿ, ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ, ಈ ಮದುವೆಯನ್ನು ಮಾಡಲಾಗಿದೆ. ಮದುವೆಗೆ ಚಿತ್ರರಂಗದ ಗಣ್ಯರು, ಯಶಸ್ ಅವರು ಆಪ್ತರು, ಸ್ನೇಹಿತರು ಆಗಮಿಸಿ, ನೂತನ ವಧು-ವರರಿಗೆ ಶುಭಾಶಯ ತಿಳಿಸಿದ್ದಾರೆ.
2007ರಲ್ಲಿ ತೆರೆಕಂಡ ‘ಯುಗ ಯುಗಗಳೇ ಸಾಗಲಿ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಯಶಸ್, 2009ರಲ್ಲಿ ತೆರೆಕಂಡ ‘ಶಿಶರ’ ಸಿನಿಮಾದಿಂದ ಗಮನಸೆಳೆದರು. ‘ಚಿಂಗಾರಿ’, ‘ಪರಮಶಿವ’, ‘ಜಿಲೇಬಿ’, ‘ಚಕ್ರವರ್ತಿ’, ‘ಸೈಕೋ ಶಂಕರ’, ‘ರಾಮ ಧಾನ್ಯ’, ‘ಚಿಟ್ಟೆ’, ‘ಒಡೆಯ’ ಅವರ ನಟಿಸಿದ್ದ ಇನ್ನಿತರ ಸಿನಿಮಾಗಳು. 2019ರಲ್ಲಿ ತೆರೆಕಂಡ ಬಹುನಿರೀಕ್ಷಿ ‘ಕುರುಕ್ಷೇತ್ರ’ ಸಿನಿಮಾದಲ್ಲಿ ಸಹದೇವನ ಪಾತ್ರವನ್ನು ಯಶಸ್ ನಿಭಾಯಿಸಿದ್ದರು.
Raksha Deshpande

Recent Posts

ಮತದಾನಕ್ಕೂ ಮುನ್ನ ದಿನವೇ ಅಹಮದಾಬಾದ್ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ

ಗುಜರಾತ್‌ನಲ್ಲಿ ನಾಳೆ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಅದಕ್ಕೂ ಮುನ್ನ ಅಹಮದಾಬಾದ್‌ನ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದಿ.

5 mins ago

ಕಚ್ಚಾ ಬಾಂಬ್‌ ಸ್ಫೋಟ : ಮಗು ಮೃತ್ಯು, ಇಬ್ಬರು ಗಂಭೀರ

ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಮಕ್ಕಳು ಆಕಸ್ಮಿಕವಾಗಿ ಕಚ್ಚಾ ಬಾಂಬ್‌ ಅನ್ನು ಚೆಂಡು ಎಂದು ಭಾವಿಸಿ ಎತ್ತಿಕೊಂಡಿದ್ದಾರೆ. ಆಗ ಅದು ಸ್ಫೋಟಗೊಂಡ…

7 mins ago

ಭಾರತದ ಚುನಾವಣಾ ಪ್ರಕ್ರಿಯೆ ನೋಡಲು ಬಂದ 23 ದೇಶಗಳ ಪ್ರತಿನಿಧಿಗಳು

ದೇಶದಲ್ಲಿ ಲೋಕಸಭಾ ಚುನಾವಣೆಯ ರಂಗೇರಿದೆ. ಈ ಹಿನ್ನಲೆ ಭಾರತದ ಚುನಾವಣಾ ಪ್ರಕ್ರಿಯೆ ನೋಡಲು 23 ದೇಶದ ಪ್ರತಿನಿಧಿಗಳು ಈಗಾಗಲೇ ಕರೆಸಲಾಗಿದೆ.

13 mins ago

ಖತರ್ನಾಕ್ ಖದೀಮರು ಹಿಂಗೂ ಯಾಮಾರಿಸ್ತಾರೆ​..!

ಯುವಕ ಯುವತಿಯರೇ ಎಚ್ಚರ. ನಿಮ್ಮ ತಂದೆ ಅಥವಾ ತಾಯಿ ಪರಿಚಯ ಅಂತ ಮಾತಾಡಿಸಿಕೊಂಡು ಬಂದ್ರೆ ಹುಷಾರಾಗಿರಿ. ನೀವೆನಾದ್ರು ಇಲ್ಲಿ ಎಡವಿದ್ರೆ…

22 mins ago

ಧಾರವಾಡ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾಡಳಿತ ಸರ್ವ ಸನ್ನದ್ದ

ಲೋಕಸಭಾ ಮತಕ್ಷೇತ್ರಕ್ಕೆ ಸಾರ್ವತ್ರಿಕ ಚುನಾವಣೆ ಜರುಗಿಸಲು ಏ.12 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಮೇ.7 ರಂದು ಧಾರವಾಡ ಲೋಕಸಭೆ ಮತಕ್ಷೇತ್ರದಲ್ಲಿ ಮುಕ್ತ,…

29 mins ago

2ನೇ ಹಂತದ ಲೋಕಸಭಾ ಚುನಾವಣೆಯ ಮತದಾನಕ್ಕೆ ಸಕಲ ಸಿದ್ಧತೆ

2ನೇ ಹಂತದ ಲೋಕಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿಯಿದೆ. ಮುಕ್ತ ಹಾಗೂ ಪಾರದರ್ಶಕ ಚುನಾವಣೆಗೆ ಬೀದರ್ ಜಿಲ್ಲಾಡಳಿತ ಸಕಲ…

33 mins ago