ಯಶ್​ ಜನ್ಮದಿನಕ್ಕೆ ರಜೆ ಕೋರಿ ಅಭಿಮಾನಿ ಬರೆದ ಪತ್ರ ವೈರಲ್​

ನಟ ಯಶ್​  ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಬಿಡುಗಡೆಗಾಗಿ ಎಲ್ಲರೂ ಕಾದಿದ್ದಾರೆ. ಕೊವಿಡ್​ ಕಾರಣದಿಂದ ಅಭಿಮಾನಿಗಳ ಜೊತೆ ಬೆರೆಯಲು ಯಶ್​ಗೆ ಸಾಧ್ಯವಾಗುತ್ತಿಲ್ಲ. ಕಳೆದೆರಡು ವರ್ಷದಿಂದ ಅವರು ಬರ್ತ್​ಡೇ  ಆಚರಿಸಿಕೊಂಡಿಲ್ಲ.

ಈ ವರ್ಷ ಕೂಡ ಯಶ್​ ಹುಟ್ಟುಹಬ್ಬವನ್ನು (ಜ.8) ಅಭಿಮಾನಿಗಳ ಜತೆ ಸೇರಿ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ ಸಹ ‘ರಾಕಿಂಗ್​ ಸ್ಟಾರ್​’ ಜನ್ಮದಿನದ ಬಗ್ಗೆ ಫ್ಯಾನ್ಸ್​ ತುಂಬ ಎಗ್ಸೈಟ್​ ಆಗಿದ್ದಾರೆ. ಎಷ್ಟರಮಟ್ಟಿಗೆಂದರೆ, ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಲು ರಜೆ ಬೇಕು ಎಂದು ಬಳ್ಳಾರಿಯಲ್ಲಿ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾನೆ. ಆ ಲೆಟರ್​ ಈಗ ವೈರಲ್​ ಆಗಿದೆ.

ಬಿ.ಕಾಂ ಮೂರನೇ ಸೆಮ್​ನಲ್ಲಿ ಓದುತ್ತಿರುವ ಕೆ. ಶಿವಕುಮಾರ್​ ಎಂಬ ವಿದ್ಯಾರ್ಥಿ ಈ ರೀತಿ ಪತ್ರ ಬರೆದಿದ್ದಾನೆ. ‘ಯಶ್​ ಬಾಸ್​ ಹುಟ್ಟುಹಬ್ಬದ ಪ್ರಯುಕ್ತ ಜ.7ರಂದು ಟ್ವಿಟರ್​ನಲ್ಲಿ ಎಲ್ಲ ಅಭಿಮಾನಿಗಳು 24 ಗಂಟೆಗಳ ಟ್ರೆಂಡ್​ನಲ್ಲಿ ಭಾಗವಹಿಸುತ್ತಿದ್ದಾರೆ. ನಾನು ಕೂಡ ಭಾಗವಹಿಸಿ ಯಶ್​ ಅಣ್ಣನ ಜನ್ಮದಿನದ ಶುಭಾಶಯಗಳನ್ನು ತಿಳಿಸಬೇಕೆಂದು ನಿರ್ಧಾರ ಮಾಡಾಗಿದೆ. ಆದ ಕಾರಣ ನನಗೆ ಇದೇ ಜ.7ರಂದು ರಜಾ ಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ’ ಎಂದು ಆತ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾನೆ.

‘ನನ್ನ ಇತರೆ ಸ್ನೇಹಿತರಿಗೂ ರಜೆ ಕೊಡಿ. ಅವರು ಕೂಡ ಯಶ್​ ಬಾಸ್​ಗೆ ವಿಶ್​ ಮಾಡಲಿದ್ದಾರೆ. ಜ.7ರ ಸಂಜೆ 7 ಗಂಟೆಯಿಂದ ಜ.8ರ ಸಂಜೆ 7 ಗಂಟೆವರೆಗೆ ನಿರಂತರ ಹುಟ್ಟುಹಬ್ಬದ ವಿಶ್​ ಮಾಡ್ತಾಯಿರಿ’ ಎಂದು ಯಶ್​ ಅಭಿಮಾನಿ ಬರೆದ ಪತ್ರ ಈಗ ವೈರಲ್​ ಆಗಿದೆ.

‘ನಾನು ಯಶ್​ ಅವರ ಕಟ್ಟಾ ಅಭಿಮಾನಿ. ಹಾಗಾಗಿ ಪ್ರಾಂಶುಪಾಲರಿಗೆ ನಾನು ಲೆಟರ್​ ಬರೆದಿದ್ದೆ. ಅವರು ರಜೆ ಕೊಟ್ಟರೆ ಮನೆಯಲ್ಲೇ ಯಶ್​ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತೇನೆ. ನನ್ನ ಸ್ನೇಹಿತರೆಲ್ಲ ಇದನ್ನು ತಮಾಷೆ ಎಂದುಕೊಂಡಿದ್ರು. ಇದು ಇಷ್ಟು ದೊಡ್ಡ ಮಟ್ಟದಲ್ಲಿ ಸೌಂಡು ಮಾಡುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ಯಶ್​ ಅವರ ಎಲ್ಲ ಸಿನಿಮಾವನ್ನು ನಾನು ನೋಡಿದ್ದೇನೆ. ಗೂಗ್ಲಿ ಸಿನಿಮಾದಿಂದ ಅವರಿಗೆ ಫ್ಯಾನ್​ ಆಗಿದ್ದೇನೆ. ಪ್ರತಿ ದಿನ ನಾನು ವಾಟ್ಸಪ್​ ಸ್ಟೇಟಸ್​ ಹಾಕುತ್ತೇನೆ. ಅವರು ನನ್ನ ಆರಾಧ್ಯ ದೈವ. ನಮ್ಮ ತಾಯಿಯನ್ನು ಬಿಟ್ಟರೆ ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವುದು ಯಶ್​ ಅವರನ್ನು. ನನ್ನ ರಕ್ತದ ಕಣ ಕಣದಲ್ಲೂ ಯಶ್​ ಬಾಸ್​ ಹೆಸರು ಕೂಗಿ ಹೇಳುತ್ತೇನೆ’  ಶಿವಕುಮಾರ್.

Sneha Gowda

Recent Posts

ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರೆಂಟ್

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಶನಿವಾರ ಅರೆಸ್ಟ್ ವಾರಂಟ್…

9 mins ago

ಸರಣಿ ಅಪಘಾತ: ಎರ್ಟಿಗಾ ಕಾರು ಸಂಪೂರ್ಣ ‌ನಜ್ಜುಗುಜ್ಜು

ಭೀಕರ ಸರಣಿ ಅಪಘಾತವು ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಬಳಿ ನಡೆದಿದೆ.

13 mins ago

ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ : ಅದೃಷ್ಟ ತಂದ ಅಶ್ವಿನಿ ಪುನೀತ್ ರಾಜ್​ಕುಮಾರ್ ಎಂಬ ಪೋಸ್ಟ್ ವೈರಲ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲು ಕಂಡಾಗ ಸ್ಯಾಂಡಲ್​ವುಡ್​ ನಟ ದಿವಂಗತ ಪುನೀತ್ ರಾಜ್​ಕುಮಾರ್​ ಅವರ ಪತ್ನಿ ಅಶ್ವಿನಿಯವರನ್ನು…

43 mins ago

ಮೋದಿ ಪಾತ್ರದಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಸತ್ಯರಾಜ್

ಸಿನಿ, ರಾಜಕೀಯ, ಕ್ರೀಡಾ ಕ್ಷೇತ್ರದ ದಿಗ್ಗಜರ ಬದುಕಿನ ಮೇಲೆ ಸಿನಿಮಾ ಮಾಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಇತ್ತೀಚೆಗೆ…

50 mins ago

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಸೈಬರ್ ವಂಚನೆ: ಓರ್ವ ವಶಕ್ಕೆ

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಕೂತು ಸೈಬರ್ ವಂಚನೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರ…

1 hour ago

ಯಾರನ್ನು ಬಂಧಿಸಬೇಕೋ ಅವರನೆಲ್ಲಾ ಬಂಧಿಸಿ ಜೈಲಿಗೆ ತಳ್ಳಿ ಎಂದು ಮೋದಿಗೆ ಚಾಲೆಂಜ್‌ ಹಾಕಿದ ಕೇಜ್ರಿವಾಲ್

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ…

1 hour ago