ನಾಳೆಯಿಂದ ಚಿತ್ರಮಂದಿರದಲ್ಲಿ ‘ಟಾಮ್ ಅಂಡ್ ಜರ‍್ರಿ’ಯ ಪ್ರೀತಿಯ ವಾದ ವಿವಾದ ಆರಂಭ..!

ಸ್ಯಾಂಡಲ್ ವುಡ್:ಟಾಮ್ ಅಂಡ್ ಜರ‍್ರಿ ಯಾರಿಗೆ ಇಷ್ಟ ಇಲ್ಲ ಹೇಳಿ. ಆ ಕಿತ್ತಾಟದ ಕಾರ್ಟೂನ್ ನೋಡೋಕೇನೆ ಸಿಕ್ಕಾಪಟ್ಟೆ ಇಷ್ಟ ಆಗುತ್ತೆ. ಅದೇ ಟೈಟಲ್ ನಲ್ಲಿ ಸಿನಿಮಾವೊಂದು ರೆಡಿಯಾಗಿದೆ. ನಾಳೆ ತೆರೆಗೆ ಬರಲಿದೆ. ಕೆಜಿಎಫ್ ಸಿನಿಮಾದ ಡೈಲಾಗ್ ರೈಟರ್ ನಲ್ಲೊಬ್ಬರಾದ ರಾಘವ್ ವಿನಯ್ ಶಿವಗಂಗೆ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಟಾಮ್ ಅಂಡ್ ಜರ‍್ರಿ. ಈ ಸಿನಿಮಾದಲ್ಲೂ ಟಾಮ್ ಅಂಡ್ ಜರ‍್ರಿಯಂತೆ ತುಂಟಾಟ, ಮುದ್ದಾಟ ಎಲ್ಲವೂ ಇದೆ. ಆದ್ರೆ ಇಬ್ಬರು ಪ್ರೇಮಿಗಳ ನಡುವೆ ನಡೆಯುವ ಗುದ್ದಾಟವಿದು.

ಈಗಾಗಲೇ ಟೈಟಲ್ ನಿಂದ ಗಮನ ಸೆಳೆದಿದ್ದ ಟಾಮ್ ಅಂಡ್ ಜರ‍್ರಿ ಸಿನಿಮಾ, ಸಾಂಗ್ ಬಿಡುಗಡೆ ಮಾಡಿ ಎಲ್ಲರ ಹೃದಯಕ್ಕೆ ಕೈ ಹಾಕಿತ್ತು. ಹಾಯಾಗಿದೆ ಎದೆಯೊಳಗೆ ಝಲ್ ಎಂದಿದೆ ಈ ಘಳಿಗೆ ಅನ್ನೋ ಸಾಲು ಈಗ್ಲೂ ಎಲ್ಲರೂ ಗುನುಗುತ್ತಿದ್ದಾರೆ. ಎಲ್ಲಾ ಕಡೆ ಕೇಳ್ತಾನೆ ಇರುತ್ತೆ. ಇಷ್ಟೆಲ್ಲಾ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದ್ದ ಸಿನಿಮಾ ಇತ್ತೀಚೆಗೆ ಟ್ರೇಲರ್ ಬಿಟ್ಟು ಹುಚ್ಚು ಕುದುರೆಯಂತೆ ಮನಸ್ಸು ಓಡುವ ಹಾಗೇ ಮಾಡಿಟ್ಟಿದೆ.

ಮನುಷ್ಯನಲ್ಲಿರುವ ಆಸೆ ಆಕಾಂಕ್ಷೆಗಳನ್ನ ಡೈಲಾಗ್ ಮೂಲಕ ನಾನು ಹಿಂಗೆ ಬದುಕ್ಬೇಕು ಎಂಬ ಹಠ ಹುಟ್ಟೊ ಹಂಗೆ ಮಾಡ್ತಿದೆ. ನಟಿ ಚೈತ್ರಾ ರಾವ್ ಡ್ರೆಸ್ಸಿಂಗ್, ಹೇರ್ ಸ್ಟೈಲ್, ಮಾತಿಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.ಈ ನವೀರಾದ ಪ್ರೇಮ ಪಕ್ಷಿಗಳ ನಡುವೆ ಕಿತ್ತಾಟವೂ ಇದೆ. ಅದನ್ನ ನೋಡೋಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ.

ಸಿನಿಮಾದಲ್ಲಿ ಆರು ಹಾಡುಗಳಿವೆ. ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ ನಡಿ ರಾಜು ಶೇರಿಗಾರ್ ನಿರ್ಮಾಣ ಮಾಡಿದ್ದಾರೆ. ಸಂಕೇತ್ ಎಂವೈಎಸ್ ಕ್ಯಾಮೆರಾದಲ್ಲಿ ಇಡೀ ಸಿನಿಮಾ ಸೆರೆಯಾಗಿದ್ದು, ಸೂರಜ್ ಅಂಕೊಲೇಕರ್ ಸಂಕಲನವಿದೆ. ಅರ್ಜುನ್ ರಾಜ್ ಸಾಹಸ  ನಿರ್ದೇಶನ ಮಾಡಿದ್ದು, ಸೂರ್ಯ ಶೇಖರ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಉಳಿದಂತೆ, ತಾರ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು, ರಾಕ್ಲೈನ್ ಸುಧಾಕರ್, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಸೇರಿ ಹಲವರು ಚಿತ್ರದಲ್ಲಿದ್ದಾರೆ.

 

Swathi MG

Recent Posts

ಅಧಿಕಾರಿಗಳಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಮತದಾನದ ಆರೋಪ: ಸ್ಥಳಕ್ಕೆ ಉಮೇಶ ಜಾಧವ್ ಭೇಟಿ

ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…

4 hours ago

ಅತನೂರ ಗ್ರಾಮದಲ್ಲಿ ಸರ್ವಧರ್ಮಗಳ ಆರಾಧ್ಯದೈವ ನಂದಿ ಬಸವನ ಜಾತ್ರೆಯ ಸಡಗರ

ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.

5 hours ago

ಪ್ರೀತಿಸಿ ಮದುವೆಯಾದ ಅನ್ಯಕೋಮಿನ ಜೋಡಿ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…

5 hours ago

ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ  ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

5 hours ago

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…

6 hours ago

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

6 hours ago