‘ಟಾಮ್ ಆಂಡ್ ಜರ‍್ರಿ’ಯಲ್ಲಿ ಕೌಂಟರ್ ಗಳ ಅಬ್ಬರ..!

ಸ್ಯಾಂಡಲ್ ವುಡ್:ಅದೆಷ್ಟೋ ಬಾರಿ ಈ ಯೋಚ್ನೆ ಎಲ್ಲರ ತಲೆಗೂ ಬಂದೇ ಇರುತ್ತೆ. ಒಮ್ಮೆಯಾದ್ರೂ ಆಲೋಚಿಸಿಯೇ ಇರ್ತೀವಿ. ಇರೋದೊಂದ್ ಜೀವ್ನ ಗುರು. ಖುಷ್ ಖುಷಿಯಾಗಿ ಬದುಕ ಬೇಕು. ಕಾಲಲ್ಲಿ ಓಡಾಡೋದಕ್ಕಿಂತ ಕಾರಲ್ಲಿ ಓಡಾಡಿ ದೊಡ್ಡ ಮನುಷ್ಯ ಅನ್ನಿಸ್ಕೊಳ್ಳಬೇಕು ಅಂತ. ನಮ್ಮ ಆಸೆ ಕನಸು, ನಮ್ಮಿ ತ್ಯಾಗ ಬಲಿದಾನಗಳನ್ನೆಲ್ಲಾ ರಪ್ ಅಂತ ನೆನಪು ಮಾಡಿದ್ದೆ ಟಾಮ್ ಅಂಡ್ ಜೆರ್ರಿ ಸಿನಿಮಾ.

ಬದುಕು, ಬದುಕುವ ದಾರಿ, ಪ್ರೀತಿ, ಪ್ರೀತಿಸುವ ರೀತಿ, ಅವನ ವಾದ, ಇವಳ ವಿವಾದ, ಮಸ್ತ್ ಎನಿಸೋ ಕೌಂಟರ್ ಗಳು, ಫ್ರೆಂಡ್ಸ್ ಎಲ್ಲಾ ಹುಡುಗಿ ಬಗ್ಗೆ ಕೇಳಿದ್ರೆ ನೋಡ್ದೋರಿಗೆ ಕನ್ಫ್ಯೂಷನ್ ಆಗೋ ಲೆವೆಲ್ ಗೆ ಕೊಡೋ ಎಕ್ಸ್ ಪ್ರೆಷನ್.. ಇದೆಲ್ಲವೂ ಟ್ರೇಲರ್ ನಲ್ಲಿ ಅತ್ಯದ್ಭುತವಾಗಿ ಆಕರ್ಷಿಸುತ್ತವೆ.

ಟಾಮ್ ಅಂಡ್ ಜೆರ್ರಿ ಸಿನಿಮಾದಲ್ಲಿ ಎಲ್ಲರನ್ನ ಸೆಳೆದಿರೋದು ಚೈತ್ರಾ ರಾವ್ ವೇಷಭೂಷಣ. ಟ್ರೇಲರ್ ನಲ್ಲೂ ಸಖತ್ ಅಟ್ರಾಕ್ಷನ್ ಅನ್ಸುತ್ತೆ. ನಿಶ್ಚಿತ್ ಕೌಂಟರ್ ಗೆ ತಲೆ ಗಿರ್ ಅನ್ನುತ್ತೆ. ಹಾಯಾಗಿದೆ ಹಾಡು ಯಾವ ಭರವಸೆಯನ್ನ ಮೂಡಿಸಿತ್ತೋ ಟ್ರೇಲರ್ ಅದನ್ನ ಫುಲ್ ಫಿಲ್ ಮಾಡಿದೆ. ಸಿನಿಮಾ ನೋಡಬೇಕೆಂಬ ಹಂಬಲ ಉಂಟು ಮಾಡಿದೆ. ಅದಕ್ಕೂ ತುಂಬಾ ದೂರ ಏನಿಲ್ಲ ಇದೇ ತಿಂಗಳ 12 ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ.

ಇದೊಂದು ಯೂಥ್ ಫುಲ್ ಸಿನಿಮಾ. ಮಕ್ಕಳು ಸಿಕ್ಕಾಪಟ್ಟೆ ಹುಚ್ಚೆಂದು ನೋಡುವ ಟಾಮ್ ಅಂಡ್ ಜೆರ್ರಿ ಕಾರ್ಟೂನ್ ನಷ್ಟೇ ಕಿತ್ತಾಟ, ಹಠ‌ ಎಲ್ಲವೂ ಇರುತ್ತೆ. ಅದರ ಜೊತೆ ಜೊತೆಗೆ ಮನಸ್ಸಿಗೆ ಖುಷಿ ಎನ್ನಿಸೋ ನವೀರಾದ ಪ್ರೀತಿಯ ಎಳೆಯೂ ಸಿನಿಮಾದಲ್ಲಿದೆ. ಮನರಂಜನೆಯ ಕಂಪ್ಲೀಟ್ ಪ್ಯಾಕೇಜ್ ಅಂದ್ರೆ ತಪ್ಪಾಗಲ್ಲ. ಟ್ರೇಲರ್ ನೋಡಿದವರಿಗೆ ಅದಾಗಲೇ ಅದರ ಅನುಭವವೂ ಆಗಿರುತ್ತೆ.

ಕೆಜಿಎಫ್-1ಗೆ ಕವಿತೆಗಳು ಮತ್ತು ಡೈಲಾಗ್ಸ್‌ ಬರೆದಿದ್ದ, ಸ್ಯಾಂಡಲ್‌ವುಡ್‌ನ‌ಲ್ಲಿ ಭರವಸೆಯ ಯಂಗ್‌ ರೈಟರ್‌ ರಾಘವ್‌ ವಿನಯ್‌ ಶಿವಗಂಗೆ, ಟಾಮ್‌ ಅಂಡ್‌ ಜೆರ್ರಿ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ರಿದ್ಧಿ ಸಿದ್ಧಿ ಫಿಲ್ಮ್ಸ್ ಬ್ಯಾನರ್ ನಡಿ ರಾಜು ಶೇರಿಗಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಂಕೇತ್ ಎಂವೈಎಸ್ ಕ್ಯಾಮೆರಾದಲ್ಲಿ ಇಡೀ ಸಿನಿಮಾ ಸೆರೆಯಾಗಿದ್ದು, ಸೂರಜ್ ಅಂಕೊಲೇಕರ್ ಸಂಕಲನವಿದೆ. ಅರ್ಜುನ್ ರಾಜ್ ಸಾಹಸ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಅದ್ಭುತವೆನಿಸುವ ಆರು ಹಾಡುಗಳಿವೆ.

ಗಂಟುಮೂಟೆ ಖ್ಯಾತಿಯ ನಿಶ್ಚಿತ್ ಕೊರೋಡಿಗೆ ಮಾಯಾಬಜಾರ್ ಹುಡುಗಿ ಚೈತ್ರಾ ರಾವ್ ಟಾಮ್ ಅಂಡ್ ಜೆರ್ರಿ ಯಲ್ಲಿ ಜೊತೆಯಾಗಿದ್ದಾರೆ. ಉಳಿದಂತೆ, ತಾರಾ ಅನುರಾಧ, ಜೈ ಜಗದೀಶ್‌, ಕೋಟೆ ಪ್ರಭಾಕರ್‌, ಕಡ್ಡಿಪುಡಿ ಚಂದ್ರು, ರಾಕ್‌ಲೈನ್‌ ಸುಧಾಕರ್‌, ಸಂಪತ್‌ ಮೈತ್ರೇಯ, ಪದ್ಮಜಾ ರಾವ್‌, ಪ್ರಕಾಶ್‌ ತುಮ್ಮಿನಾಡು, ಪ್ರಶಾಂತ್‌ ನಟನ, ಮೈತ್ರಿ ಜಗ್ಗಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

Swathi MG

Recent Posts

ಪರೀಕ್ಷೆ ಫಲಿತಾಂಶಕ್ಕೆ ಹೆದರಿ ನಾಪತ್ತೆಯಾದ ವಿದ್ಯಾರ್ಥಿ : ಪೋಷಕರ ಹುಡುಕಾಟ

ಇಂದು ರಾಜ್ಯದೆಲ್ಲಡೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಬಿಡುಗಡೆಯಾದ ಹಿನ್ನಲೆ ವಿದ್ಯಾರ್ಥಿನೋರ್ವ ಪರೀಕ್ಷೆ ಫಲಿತಾಂಶಕ್ಕೆ ಭಯಪಟ್ಟು ನಾಪತ್ತೆಯಾಗಿದ್ದಾನೆ. ಘಟನೆ ಬೆಂ.ಗ್ರಾಮಾಂತರ ಜಿಲ್ಲೆ…

6 mins ago

ಮಧ್ಯರಾತ್ರಿ ಸ್ನೇಹಿತರ ಎಣ್ಣೆ ಪಾರ್ಟಿ : ಬಾಟಲಿಯಿಂದ ಹೊಡೆದು ಓರ್ವನ ಕೊಲೆ

ಬಾಟಲಿಯಿಂದ ಹೊಡೆದು ಯುವಕನೋರ್ವನ ಕೊಲೆ ಮಾಡಿರುವ ಘಟನೆ ಮುಂಡರಗಿ ತಾಲೂಕಿನ ಕೆಎಚ್​ಬಿ ಹೊಸ ಕಾಲೊನಿಯಲ್ಲಿ ನಡೆದಿದೆ.ಕೊಪ್ಪಳದ ಹೈದರ್ ತಾಂಡಾದ ನಿವಾಸಿ…

23 mins ago

ಪಾಕ್ ಬಂದರಿನಲ್ಲಿ ಉಗ್ರರ ದಾಳಿ; 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ

ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ವಾದರ್​ನಲ್ಲಿ ಉಗ್ರ ದಾಳಿ ನಡೆದಿದ್ದು 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

39 mins ago

ಬೋಯಿಂಗ್ ನ್ಯಾಷನಲ್ ಏರೋ ಮಾಡೆಲಿಂಗ್ ಸ್ಪರ್ಧೆ: ಎನ್ಎಂಎಎಂ ಇನ್ಸ್ಟಿಟ್ಯೂಟ್‌ಗೆ ಪ್ರಥಮ

ಭಾರತದ 855 ಸಂಸ್ಥೆಗಳ 2,350 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಿದ ಒಂಬತ್ತನೇ ವಾರ್ಷಿಕ ಬೋಯಿಂಗ್ ರಾಷ್ಟ್ರೀಯ ಏರೋ ಮಾಡೆಲಿಂಗ್ ಸ್ಪರ್ಧೆಯಲ್ಲಿ…

41 mins ago

ಏರ್‌ ಇಂಡಿಯಾ 30 ಸಿಬ್ಬಂದಿಗಳ ವಜಾ : 74 ವಿಮಾನಗಳ ಹಾರಾಟ ರದ್ದು

ಸಾಮೂಹಿಕ ಅನಾರೋಗ್ಯದ ರಜೆ ತೆಗೆದುಕೊಂಡ ಏರ್‌ ಇಂಡಿಯಾದ 30 ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಬುಧವಾರ (ಮೇ 9)ದಿಂದ ಸುಮಾರು 300 ಸಿಬ್ಬಂದಿ…

58 mins ago

ಎಸ್​ಎಸ್​ಎಲ್​​​ಸಿ ಫಲಿತಾಂಶ; ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಬೆಳ್ತಂಗಡಿ ವಿದ್ಯಾರ್ಥಿ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಶೇ 73.4 ಮಂದಿ ತೇರ್ಗಡೆಯಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು…

1 hour ago