ಸ್ಯಾಂಡಲ್ ವುಡ್ ನಟ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದಿಂದ ಅವರ ಕುಟುಂಬ ಮಾತ್ರವಲ್ಲ ಇಡೀ ಕರುನಾಡ ಜನತೆಯೇ ಶೋಕ ಸಾಗರದಲ್ಲಿ ಮುಳುಗುತ್ತಿದ್ದಾರೆ. ಅಭಿಮಾನಿಗಳ ಕಣ್ಣಲ್ಲಿ ಆರದ ಹಣತೆಯಂತೆ ಅಪ್ಪು ಅಚ್ಚಾಗಿದ್ದಾರೆ. ಇದೀಗ ಈ ಪರಮಾತ್ಮನ ಬದುಕನ್ನು ತೆರೆಮೇಲೆ ತರುವ ಪ್ರಯತ್ನವೊಂದು ನಡೆಯುತ್ತಿದೆ.
ಯುವರತ್ನ ಸೇರಿದಂತೆ ಪುನೀತ್ ನಟಸಿರುವ ಅನೇಕ ಚಿತ್ರಗಳ ನಿರ್ದೇಶಕ ಸಂತೋಷ್ ಆನಂದ್ ರಾವ್ ಬರೀ ನಿರ್ದೇಶಕ ಮಾತ್ರವಲ್ಲ, ಅವರು ಪುನೀತ್ ಅಪ್ಪಟ ಅಭಿಮಾನಿ. ತುಂಬಾ ಸಲ ತಮ್ಮ ಟ್ವೀಟ್ಟರನಲ್ಲಿ ಅಪ್ಪು ಬಗ್ಗೆ ಬಹಳಷ್ಟು ಬರೆದುಕೊಂಡಿದ್ದಾರೆ ಸಹ.
I’ll try my level best to bring this idea on screen 🙏 #appusirliveson https://t.co/ivcPkm7HyF
— Santhosh Ananddram (@SanthoshAnand15) November 21, 2021
ಸಂತೋಷ್ ಅವರ ಅಪ್ಪು ಮೇಲಿನ ಅಭಿಮಾನವನ್ನು ಕಂಡಂತಹ ಅಭಿಮಾನಿಗಳು ” ಪುನೀತ್ ಗಾಗಿ ಹಾಡು ಮಾಡಿ, ಪ್ರತಿ ವರ್ಷವು ಒಂದೊದು ಹಾಡು ಮಾಡಿ, ಅಪ್ಪು ಬಯೋಪಿಕ್ ನಿರ್ಮಿಸಿ ಅಂತೆಲ್ಲ ” ಟ್ವಿಟ್ ಮಾಡಿ ಮನವಿ ಮಾಡಿದ್ದರು.
1000% pakka 🙏 https://t.co/fyeMqkSAS2
— Santhosh Ananddram (@SanthoshAnand15) November 20, 2021
ಪುನೀತ್ ಬಯೋಪಿಕ್ ನಿರ್ಮಿಸಿ ಎಂದು ಮನವಿ ಮಾಡಿದ ಅಭಿಮಾನಿಯೊಬ್ಬರಿಗೆ ಸಂತೋಷ್ ಪ್ರತಿಕ್ರಿಯಿಸಿದ್ದು, “ಅಪ್ಪು ಬಯೋಪಿಕ್ ನಿರ್ಮಿಸೋ ಬಗ್ಗೆ ಚಿಂತನೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.