ಸಾಂಡಲ್ ವುಡ್

ಅಮೇಜಾನ್​ ಪ್ರೈಮ್​ಗೆ ಬಂದ ಲವ್​ ಮಾಕ್​ಟೈಲ್​ 2!

ಸ್ಯಾಂಡಲ್​ವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ಸೀಕ್ವೆಲ್​ ಸಿನಿಮಾಗಳು ಬಂದಿವೆ. ಆದರೆ, ಸೀಕ್ವೆಲ್​​ ಮಾಡಿ ಗೆದ್ದ ಸಿನಿಮಾಗಳು ಮಾತ್ರ ಬೆರಳಣಿಕೆಯಷ್ಟು. ಹೌದು, ಮೊದಲ ಭಾಗಕ್ಕೂ, ಎರಡನೇ ಭಾಗಕ್ಕೂ ಕೊಂಚ ವ್ಯತ್ಯಾಸ ಇದ್ದರೂ ಸಿನಿಮಾ ಸಕ್ಸಸ್​ ಕಾಣುವುದಿಲ್ಲ.
ಸದ್ಯ ಕನ್ನಡದಲ್ಲಿ ರಿಲೀಸ್​ ಆಗಿರುವ ‘ಲವ್​ ಮಾಕ್ಟೇಲ್​ 2’ ಸಿನಿಮಾ ಕೂಡ ಸೀಕ್ವೆಲ್​ ಎಂಬ ಕಾರಣಕ್ಕೆ ಹೆಚ್ಚು ಹೈಪ್​ ಸೃಷ್ಟಿಸಿತ್ತು. ಮೊದಲನೇ ಪಾರ್ಟ್​​​ನಲ್ಲಿ ಇದ್ದ ಬಹುತೇಕ ಎಲ್ಲ ಪಾತ್ರಗಳು ಈಗ ಎರಡನೇ ಪಾರ್ಟ್​ನಲ್ಲಿ ಮುಂದುವರಿದಿತ್ತು. ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಕೂಡ ಪಡೆದುಕೊಂಡಿತ್ತು. ಫೆಬ್ರವರಿ 11 ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಇದೀಗ ಒಂದು ತಿಂಗಳಅಂತರದಲ್ಲೇ ಅಮೇಜಾನ್ ಪ್ರೈಮ್​ನಲ್ಲಿ ಈ ಸಿನಿಮಾ ಸ್ಟ್ರೀಮಿಂಗ್​ ಆಗುತ್ತಿದೆ. ಮಾರ್ಚ 15 ರಿಂದ ಈ ಸಿನಿಮಾ ಅಮೇಜಾನ್​ ಪ್ರೈಮ್​ನಲ್ಲಿ ಲಭ್ಯವಿದೆ.

ಹೌದು, ಯಾರಿಗೂ ಇಷ್ಟು ಬೇಗ ಈ ಸಿನಿಮಾ ಒಟಿಟಿಗೆ ಬರುತ್ತೆ ಅಂತ ತಿಳಿದಿರಲಿಲ್ಲ. ಅದರಲ್ಲೂ ಚಿತ್ರದ ನಾಯಕ ನಟ ಹಾಗೂ ನಿರ್ದೇಶಕ ಡಾರ್ಲಿಂಗ್​ ಕೃಷ್ಣ ಹಾಗೂ ನಾಯಕ ನಟಿ ಮತ್ತು ನಿರ್ಮಾಪಕಿ ಮಿಲನ ನಾಗರಾಜ್​ ಕೂಡ ಯಾವುದೇ ಮಾಹಿತಿ ಬಿಟ್ಟು ಕೊಟ್ಟಿರಲಿಲ್ಲ. ಮಾರ್ಚ್​ 14 ರಂದು ಈ ಘೋಷಣೆ ಮಾಡಲಾಗಿದೆ. ಇನ್ನೂ ಈ ವಿಚಾರ ತಿಳಿದು ಎಲ್ಲರೂ ಬೆಳ್ಳಂಬೆಳಿಗ್ಗೆ ಟಿವಿ ಮುಂದೆ ಕೂತಿದ್ದಾರೆ. ಅಮೇಜಾನ್​ ಪ್ರೈಮ್​ನಲ್ಲಿ ಸಿನಿಮಾ ನೋಡಲು ಕಾತುರರಾಗಿದ್ದಾರೆ. ಲವ್​ ಮಾಕ್​ಟೈಲ್​ 1ರಲ್ಲಿ ಮಾಡಿದ್ದ ಮೋಡಿಯನ್ನೇ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್​ ಲವ್​ ಮಾಕ್​ಟೈಲ್​ 2 ಸಿನಿಮಾದಲ್ಲಿ ಮಾಡಿದ್ದರು. ಕೇವಲ ಒಂದು ತಿಂಗಳ ಅಂತರದಲ್ಲಿ ಓಟಿಟಿಗೆ ಈ ಸಿನಿಮಾ ಬಂದಿದೆ.

ಪ್ರಪಂಚದಲ್ಲಿ ಎಲ್ಲರಿಗೂ ಪ್ರೀತಿಯ ಅನುಭವವಾಗಿರುತ್ತೆ. ಆದರೆ, ನಾವು ಪ್ರೀತಿಸಿದವರು ಒಪ್ಪದಿದ್ದಾಗ, ಅಥವಾ ಬೇರೆ ಕಾರಣಗಳಿಂದ ದೂರಾದಾಗ ಬೇಸರಗೊಳ್ಳುತ್ತಾರೆ. ತಮ್ಮ ಜೀವನವನ್ನೇ ಮುಗಿಸಿಕೊಳ್ಳುವಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಂಥವರಿಗೆ ಈ ಲವ್​ ಮಾಕ್​​ಟೈಲ್​ 2 ಸಿನಿಮಾ ಒಳ್ಳೆ ಪಾಠ ಎಂದರೆ ತಪ್ಪಾಗಲಾರದು. ಲವ್ ಮಾಡೋದು ಅಷ್ಟೇ ಅಲ್ಲ. ಬ್ರೇಕಪ್ ಆದಮೇಲೆ ಬದುಕುವುದನ್ನು ಲವ್ ಮಾಕ್​ಟೈಲ್​ ಚಿತ್ರ ತೋರಿಸಿಕೊಟ್ಟಿದೆ. ಇನ್ನು ಲವ್ ಮಾಕ್​ಟೈಲ್​ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ರೇಚೆಲ್ ಡೇವಿಡ್, ಸುಷ್ಮಿತಾ ಗೌಡ, ಅಭಿಲಾಷ್, ಖುಷಿ, ಅಮೃತಾ ಬಣ್ಣ ಹಚ್ಚಿದ್ದಾರೆ. ಎಲ್ಲರೂ ಕೂಡ ನಟನೆಯಿಂದ ಗಮನ ಸೆಳೆಯುತ್ತಾರೆ.

Gayathri SG

Recent Posts

‘ಜಂಟಿ ಸರ್ವೆ ಆಗುವ ತನಕ ಹಿರೀಕಾಟಿಯಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸದಿದ್ದರೆ ಉಗ್ರ ಹೋರಾಟ’

ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಿರೀಕಾಟಿ ಗ್ರಾಮದ ಸರ್ವೆ ನಂ. 108 ರಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರಿಗೆ ಸೇರಿದ 2 ಎಕರೆ…

2 mins ago

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸಿಬ್ಬಂದಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಥಮ ದರ್ಜೆ ಸಹಾಯಕ ವಿಜಯ್ ಕುಮಾರ್ ಕೆಲಸದ ವಿಚಾರವಾಗಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

8 mins ago

ದುರಸ್ತಿ ಮಾಡಿ ವಾರ ಕಳೆಯುವ ಮೊದಲೇ ಕಿತ್ತು ಬಂದ ರಸ್ತೆ

ಪಟ್ಟಣದ ಬಸವಕಲ್ಯಾಣ-ಭಾಲ್ಕಿ ಮುಖ್ಯ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ. ವಾರದ ಹಿಂದೆ ರಸ್ತೆ ದುರಸ್ತಿ ಕಾಮಗಾರಿ ಮಾಡಲಾಗಿದ್ದು, ವಾರ ಕಳೆಯುವ…

15 mins ago

ಬಿರುಗಾಳಿ ಸಹಿತ ಮಳೆಗೆ ಕಬ್ಬಿಣದ ಬಸವ ಮಹಾದ್ವಾರ ಕುಸಿತ

ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಸವ ಮಹಾದ್ವಾರ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ…

28 mins ago

ನೂರಕ್ಕೆ ನೂರು ‘ಇಂಡಿಯಾ’ ಮೈತ್ರಿಗೆ ಅಧಿಕಾರ: ಈಶ್ವರ ಖಂಡ್ರೆ

'ದೇಶದಲ್ಲಿ ಈ ಸಲ 'ಇಂಡಿಯಾ' ಒಕ್ಕೂಟ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ…

32 mins ago

ನಾನು ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಭೇಟಿ ನೀಡುತ್ತೇನೆ ಎಂದ ವಿರಾಟ್​​ ಕೊಹ್ಲಿ

ವಿರಾಟ್​​ ಕೊಹ್ಲಿ ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ. ಅವರು ಹೇಳಿರುವ ಆಡಿಯೋ ಸಮೇತ ದೃಶ್ಯ ವೈರಲ್​ ಆಗಿದೆ. 

47 mins ago