ಹಾಯಾಗಿದೆ ಎದೆಯೊಳಗೆ.. ಈ ಹಾಡು ಕೇಳಿದಾಕ್ಷಣ ನೀವೆಲ್ಲಾ ಯಾವ ಸಿನಿಮಾ ಗುರು ಇದು ಅಂತ ಒಮ್ಮೆ ರ್ಚ್ ಮಾಡಿಯೇ ಮಾಡರ್ತಿರಾ.. ನಟಿಮಣಿಯ ಲುಕ್ ನೋಡಿ ಓ ಮೈ ಗಾಡ್ ಅನ್ನೋ ಉದ್ಘಾರವನ್ನು ವ್ಯಕ್ತಪಡಿಸರ್ತಿರಾ.. ಒಂದಷ್ಟು ಕ್ಯೂರಿಯಾಸಿಟಿಯನ್ನು ಬೆಳೆಸಿಕೊಂಡರ್ತಿರಾ.. ಹಾಡು, ವಿಭಿನ್ನ ಎನ್ನಿಸೋ ಡ್ರೆಸ್ಸಿಂಗ್ ಸ್ಟೈಲ್ ಎಲ್ಲಾ ನೋಡಿ ಸಿನಿಮಾ ಬಗ್ಗೆ ಸಹಜವಾಗಿಯೆ ಕುತೂಹಲ ಹುಟ್ಟಿರುತ್ತೆ. ಆ ಕುತೂಹಲಕ್ಕೆ ಬ್ರೇಕ್ ಬೀಳೋಕೆ ಕೆಲವೇ ದಿನಗಳು ಬಾಕಿ ಇದೆ.
ಹೌದು, ಟಾಮ್ ಅಂಡ್ ಜರ್ರಿ ಸಿನಿಮಾ ರಿಲೀಸ್ ಮಾಡೋಕೆ ಚಿತ್ರತಂಡ ರೆಡಿಯಾಗಿದೆ. ನವೆಂಬರ್ 12ಕ್ಕೆ ಬೆಳ್ಳಿಪರದೆ ಮೇಲೆ ರಾರಾಜಿಸೋಕೆ ರೆಡಿಯಾಗಿದೆ. ಸಿನಿಮಾಗೆ ಈಗಾಗ್ಲೇ ಯು/ಎ ರ್ಟಿಫಿಕೇಟ್ ಸಿಕ್ಕಿದೆ. ಎಲ್ಲಾ ರ್ಗದ ಜನರಿಗೂ ಮನರಂಜನೆ ನೀಡುವ ಭರವಸೆಯನ್ನು ಚಿತ್ರತಂಡ ನೀಡಿದೆ. ಕಿತ್ತಾಟ, ಪ್ರೀತಿ, ತರಲೆ, ತುಂಟಾಟ, ಆಕ್ಷನ್ ಕಥೆಯೊಂದಿಗೆ ಟಾಮ್ ಅಂಡ್ ಜರ್ರಿಯನ್ನ ಹೆಣೆಯಲಾಗಿದೆ. ಈಗಾಗ್ಲೇ ಕೆಜಿಎಫ್ ಸಿನಿಮಾಗೆ ಡೈಲಾಗ್ ಬರೆದು ಎಲ್ಲರ ಚಿತ್ತ ಕದ್ದಿದ್ದ ವಿನಯ್ ಶಿವಗಂಗೆ ಟಾಮ್ ಅಂಡ್ ಜರ್ರಿ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.
ಸಾಂಗ್ಸ್ ಮೂಲಕ ಭರವಸೆ ಮೂಡಿಸಿರೋ ಟಾಮ್ ಅಂಡ್ ಜರ್ರಿ ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿವೆ. ಅದರಲ್ಲೂ ಹಾಯಾಗಿದೆ ಎದೆಯೊಳಗೆ ಹಾಡು ನಿರೀಕ್ಷೆಗೂ ಮೀರಿ ಹಿಟ್ ಆಗಿದೆ. ಆ ಹಾಡಿನಿಂದ ಸಿನಿಮಾ ನೋಡೋ ಆಸೆ ದುಪ್ಪಟ್ಟಾಗಿದೆ. ಇಷ್ಟೊಳ್ಳೆ ಹಾಡುಗಳಿಗೆ ಸಂಗೀತ ನೀಡಿರೋದು ಮ್ಯಾಥ್ಯೂಸ್ ಮನು.
ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ ನಡಿ ರಾಜು ಶೇರಿಗಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ರೆ, ವಿನಯ್ ಚಂದ್ರ ಕರ್ಯಕಾರಿ ನರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಸಂಕೇತ್ ಎಂವೈಎಸ್ ಕ್ಯಾಮೆರಾ ರ್ಕ್, ಸೂರಜ್ ಅಂಕೊಲೇಕರ್ ಸಂಕಲನ, ರ್ಜುನ್ ರಾಜ್ ಸಾಹಸ ನರ್ದೇಶನ ಚಿತ್ರಕ್ಕಿದೆ.
ಗಂಟು ಮೂಟೆ ಖ್ಯಾತಿಯ ನಿಶ್ಚಿತ್ ಕೊರೋಡಿ ನಾಯಕನಾಗಿ ನಟಿಸಿದ್ರೆ, ಜೋಡಿಹಕ್ಕಿ ಧಾರಾವಾಹಿ ಖ್ಯಾತಿಯ ಚೈತ್ರಾ ರಾವ್ ಚಿತ್ರದ ನಾಯಕ ನಟಿ. ಸರ್ಯ ಶೇಖರ್ ವಿಲನ್ ಆಗಿ ಅಬ್ಬರಿಸಿದ್ದಾರೆ. ತಾರ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು, ರಾಕ್ಲೈನ್ ಸುಧಾಕರ್, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ನ ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…
ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…
ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ನಡೆದಿದೆ.
ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…
ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…