ಸ್ಯಾಂಡಲ್ ವುಡ್: ಬಾಲ್ಯದಲ್ಲಿ ನಮ್ಮೆಲ್ಲರಿಗೆ ಹಾರ್ಟ್ ಫೇವರೀಟ್ ಆಗಿದ್ದ ಟಾಮ್ ಅಂಡ್ ಜರ್ರಿ ಈಗ ಸಿನೆಮಾವಾಗಿ ಮತ್ತೆ ಫೇವರೀಟ್ ಆಗೋಕೆ
ಸಜ್ಜಾಗಿದೆ. ಈ ಹೆಸರಿನಲ್ಲೊಂದು ಸಿನೆಮಾ ಈಗಾಗಲೇ ಸೆಟ್ಟೇರಿ, ಚಿತ್ರೀಕರಣ ಮುಗಿದಿದ್ದು ನವೆಂಬರ್ ೧೨ ಕ್ಕೆ
ಥಿಯೇಟರ್ ಗೆ ಪಾದರ್ಪಣೆ ಮಾಡ್ತಾ ಇದೆ.
ಕೆಜಿಎಫ್ ಸಿನಿಮಾದ ಒನ್ ಆಫ್ ದಿ ಡೈಲಾಗ್ ರೈಟರ್ ಆಗಿ ಖ್ಯಾತಿ ಗಳಿಸಿದ್ದ ರಾಘವ್ ವಿನಯ್ ಶಿವಗಂಗೆ ಅವರ ನಿರ್ದೇಶನನವಿರೋ ಈ ವಿನೂತನ ಚಿತ್ರದಲ್ಲಿ ಯುವ ಪೀಳಿಗೆಯನ್ನು ಸೆಳೆಯುವ ಸಬ್ಜೆಕ್ಸ್
ಹೊತ್ತು, ಒಂದೊಳ್ಳೆಯ ಸಂದೇಶವೂ ಚಿತ್ರದಲ್ಲಿದೆ. ಕಂಪ್ಲೀಟ್ಲೀ ಯೂತ್ ಓರಿಯೆಂಟೆಡ್ ಆಗಿರೋ ಈ ಸಿನ್ಮಾದಲ್ಲಿ ಗಂಟುಮೂಟೆ ಚಿತ್ರದ ಖ್ಯಾತಿಯ ನಿಶ್ಚಿತ್
ಕೊರೋಡಿ, ಚೈತ್ರಾ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಟಾಮ್ ಅಂಡ್ ಜರ್ರಿ ಹೆಸರೇ ಹೇಳುವಂತೆ ಚಿತ್ರದಲ್ಲಿ ಇಬ್ಬರು ಸ್ನೇಹಿತರ ನಡುವಿನ ಜಗಳ, ಕೋಪ, ತರಲೆ,ತಮಾಷೆ, ಪ್ರೀತಿ, ಆಕ್ಷನ್ ಸೇರಿದಂತೆ ಭಾವಗಳಿರೋ ಒಂದೊಳ್ಳೆ ಕಥೆಯಾಗಿರೋ ಈ ಚಿತ್ರ ಸೆನ್ಸಾರ್ ಪರೀಕ್ಷೆಯಲ್ಲಿ ಯು/ಎ ರ್ಟಿಫಿಕೇಟ್ ಪಡೆದು ಪಾಸಾಗಿದೆ.ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನವಿರೊ ಟಾಮ್ ಅಂಡ್ ಜರ್ರಿ ಚಿತ್ರದಲ್ಲಿ ಆರು ಹಾಡುಗಳಿದ್ದು, ಈಗಾಗಲೇ ಸಿದ್ ಶ್ರೀರಾಮ್
ದನಿಯಲ್ಲಿ ಮೂಡಿ ಬಂದ ‘ಹಾಯಾಗಿದೆ ಎದೆಯೊಳಗೆ’ ಹಾಡು ಈಗಾಗಲೇ ಸಿನಿ ಪ್ರಿಯರನ್ನ ಮೋಡಿ ಮಾಡಿದ್ದಾಗಿದೆ. ಬಿಡುಗಡೆಗೂ ಮುನ್ನವೇ ಇಷ್ಟೆಲ್ಲಾ ಕುತೂಹಲವನ್ನುಂಟು ಮಾಡಿರೋ ಈ ಸಿನೆಮಾದಲ್ಲಿ ಖಳನಟನಾಗಿ ಸೂರ್ಯಶೇಖರ್ ಮಿಂಚಿದ್ದು, ತಾರ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು,ರಾಕ್ಲೈನ್ ಸುಧಾಕರ್, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನ ಮೈತ್ರಿ ಜಗ್ಗಿ ಒಳಗೊಂಡ ಕಲಾವಿದರ ಬಳಗವಿದೆ.ಮೊದಲ ನರ್ದೇಶನದ ಕನಸು ಹೊತ್ತು ಬಂದ ರಾಘವ್ ವಿನಯ್ ಅವರಿಗೆ ಬೆನ್ನೆಲುಬಾಗಿ ಸಾಥ್ ಕೊಟ್ಟು, ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತದ್ದು, ನರ್ಮಾಪಕ ರಾಜು ಶೇರಿಗಾರ್. ಮೊದಲ ಬಾರಿಗೆ ನಿರ್ಮಾಣದ ಜವಾಬ್ದಾರಿ ಹೊತ್ತ ಇವರು ತಮ್ಮದೇ ಆದ ರಿದ್ಧಿ ಸಿದ್ಧಿ ಫಿಲ್ಮ್ಸ್ ಬ್ಯಾನರ್ ನಡಿ ಚೊಚ್ಚಲ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.ಇನ್ನುಳಿದಂತೆ, ಸಂಕೇತ್ ಎಂವೈಎಸ್ ಕ್ಯಾಮೆರಾ ನಿರ್ದೇಶನ ಚಿತ್ರಕ್ಕಿದ್ದು, ಸೂರಜ್ ಅಂಕೊಲೇಕರ್ ಸಂಕಲನ, ರ್ಜುನ್ ರಾಜ್ ಸಾಹಸ ನಿರ್ದೇಶನ ಟಾಮ್ ಅಂಡ್ ಜರ್ರಿ ಚಿತ್ರಕ್ಕಿದೆ. ಟೈಟಲ್ ಹಾಗು ಹಾಡುಗಳ ಮೂಲಕ ಈಗಾಗಲೇ ಸಿನಿಪ್ರಿಯರ ಮನ ಕದ್ದಿರೋ ಟಾಮ್ ಅಂಡ್ ಚರ್ರಿ ತೆರೆಯ ಮೇಲೆ ಮೂಡಿ ಬಂದು ಚಿತ್ರಪ್ರೇಮಿಗಳನ್ನ ಹೇಗೆ ಮೋಡಿ ಮಾಡಲಿದೆ ಅನ್ನೋದನ್ನ ಕಾದುನೋಡಬೇಕಿದೆ.
ಮೊಬೈಲ್ ನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದಿದ್ದ ಕಣಗಿಲೆ ಹೂವನ್ನು ಕಿತ್ತು ತಿಂದ ಪರಿಣಾಮ ಯುವತಿಯೊಬ್ಬಳು ಪ್ರಾಣವನ್ನೇ ಕಳೆದುಕೊಂಡಿರುವ ಅಹಿತಕರ ಘಟನೆ…
ಸೋಷಿಯಲ್ ಮೀಡಿಯಾದಲ್ಲಿ ಹಸಿ ಬಿಸಿ ಫೋಟೋಗಳನ್ನು ಶೇರ್ ಮಾಡುತ್ತ, ಹಲ್ಚಲ್ ಸೃಷ್ಟಿಸುತ್ತಿದ್ದ ಕಿರುತೆರೆ ನಟಿ ಜ್ಯೋತಿ ರೈ, ಇದೀಗ ಖಾಸಗಿ…
ಹುಬ್ಬಳ್ಳಿಯ ಕೇಶ್ವಾಪುರದ ಸರ್ವೋದಯ ಸರ್ಕಲ್ ನಿಂದ ದೇಸಾಯಿ ಬ್ರಿಡ್ಜ್ ವರೆಗೂ ಅಪರಿಚಿತ ವಾಹನವೊಂದರ ಇಂಜಿನ್ ಆಯಿಲ್ ಲೀಕ್ ಆಗಿ ರಸ್ತೆಯ…
ಚಂಡಮಾರುತದ ಪ್ರಭಾವದಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಮುಂದಿನ ಆದೇಶದವರೆಗೆ ಮಲ್ಪೆಯಲ್ಲಿ ಎಲ್ಲ ರೀತಿಯ ವಾಟರ್ ಸ್ಪೋರ್ಟ್ಸ್ ಸ್ಥಗಿತಗೊಳಿಸಲಾಗಿದೆ.
ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಪರೀಕ್ಷೆ ಬರೆದ 6,31,204 (73.40)ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರೆ,…
ಇಂದು ರಾಜ್ಯದೆಲ್ಲಡೆ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಬಿಡುಗಡೆಯಾದ ಹಿನ್ನಲೆ ವಿದ್ಯಾರ್ಥಿನೋರ್ವ ಪರೀಕ್ಷೆ ಫಲಿತಾಂಶಕ್ಕೆ ಭಯಪಟ್ಟು ನಾಪತ್ತೆಯಾಗಿದ್ದಾನೆ. ಘಟನೆ ಬೆಂ.ಗ್ರಾಮಾಂತರ ಜಿಲ್ಲೆ…