Categories: ವಿಶೇಷ

ಕರಾವಳಿಗರ ಮನಗೆದ್ದ ಮಂಡಕ್ಕಿ ಮಾರಾಟದ ಲಕ್ಷ್ಮೀ ದೇವಮ್ಮ

ಬಂಟ್ವಾಳ:  “ಮಂಡಕ್ಕಿ ಬೇಕಾ.. ಮಂಡಕ್ಕೀ…” ಎನ್ನುತ್ತ ತಲೆಮೇಲೆ ಮಂಡಕ್ಕಿ( ಕುರ್ಲರಿ)ಯ ಮೂಟೆ ಹೊತ್ತುಕೊಂಡು ಊರೂರು ಸುತ್ತಿ ಹೊಟ್ಟೆತುಂಬಿಸುತ್ತಿರುವ ಈ ಗೃಹಿಣಿ ಸಾಮಾನ್ಯ ಮಹಿಳೆಯಲ್ಲ…  ಒಂದೂವರೆ ಸಾವಿರ ಮತದಾರರನ್ನೊಳಗೊಂಡ ಗ್ರಾಮಪಂಚಾಯತ್ ಸದಸ್ಯೆಯೂ ಹೌದು.. !

ಇವರ ಹೆಸರು ಲಕ್ಷ್ಮೀ ದೇವಮ್ಮ.  ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದೊಡ್ಡಳ್ಳಿ ಮೂಲದವರಾಗಿರುವ ಇವರು ಕೋಟಗಲ್ ಗ್ರಾಮ ಪಂಚಾಯತ್ ನ ಬಿಜೆಪಿ ಬೆಂಬಲಿತ ಸದಸ್ಯೆಯಾಗಿದ್ದಾರೆ.

17ವರ್ಷಗಳಿಂದ ಬಿ.ಸಿ.ರೋಡಿನಲ್ಲಿ ವಾಸ್ತವ್ಯ: ಕಳೆದ 17 ವರ್ಷಗಳಿಂದ ಬಿ.ಸಿ.ರೋಡಿನಲ್ಲಿ ವಾಸ್ತವ್ಯವಿರುವ ಇವರ ವಾಸ್ತವ್ಯದ ದಾಖಲೆಗಳೆಲ್ಲಾ ಚಿಕ್ಕಬಳ್ಳಾಪುರದಲ್ಲೇ ಇದೆ.  ಇದೇ ಉದ್ಯೋಗ ನಿರ್ವಹಿಸುತ್ತಿರುವ ಇವರ ತಂಗಿ,ಭಾವ ಹಾಗೂ ಗಂಡ ಹನುಮಂತಪ್ಪ ಅವರು ತಿಂಗಳಿಗೊಮ್ಮೆ ಅಥವಾ ಬೆಂಗಳೂರಿನಿಂದ ಪತ್ನಿಗೆ ಮಾರಾಟಕ್ಕಾಗಿ ಮಂಡಕ್ಕಿ ತಂದುಕೊಟ್ಟು  ಹೋಗುತ್ತಾರೆ. ಇವರ ಸಂಬಂಧಿಕರು ಕೂಡ ಬಿ.ಸಿ.ರೋಡಿಗೆ ಸಮೀಪದ ತುಂಬೆ ಪರಿಸರದಲ್ಲಿ ವಾಸವಿದ್ದು,ಅವರು ಮಂಡಕ್ಕಿ ಮಾರಾಟ ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದಾರೆ.
ಗ್ರಾ.ಪಂ.ಸದಸ್ಯೆ ಲಕ್ಷೀ ದೇವಮ್ಮ ದಂಪತಿಗೆ ಒರ್ವ ಮಗನು ಇದ್ದು,ಅತ ಸದ್ಯ ಪ್ರಥಮ ವರ್ಷದ ಪದವಿ ತರಗತಿಯಲ್ಲಿ ಊರಿನಲ್ಲೇ ಓದುತ್ತಿದ್ದಾನೆ.

ಸಾಮಾನ್ಯ ಸಭೆಗೆ ಹಾಜರು:  ತಿಂಗಳು‌ಪೂರ್ತಿ ಮಂಡಕ್ಕಿ‌ಮಾರಾಟ ಮಾಡುವ ಲಕ್ಷ್ಮೀ ದೇವಮ್ಮ, ಗ್ರಾ.ಪಂ.ನಲ್ಲಿ ಪ್ರತಿ ತಿಂಗಳ ನಡೆಯುವ ಸಾಮಾನ್ಯ ಸಭೆಗೆ ತಪ್ಪದೆ ಹಾಜರಾಗುತ್ತಾರೆ.

ತನ್ನ ವಾಡ್೯ ನ ಸಮಸ್ಯೆ ಬಗ್ಗೆ ಸಭೆಯಲ್ಲಿ ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳುತ್ತಿದ್ದಾರೆ. ಕೊರಮಚಟ್ಟಿ ಸಮುದಾಯಕ್ಕೆ ಸೇರಿದ ಇವರು ಕೋಟಗಲ್ ಗ್ರಾ.ಪಂಗೆ ಪ.ಜಾತಿ ಕೋಟಾದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು.1500 ಮತಗಳನ್ನು ಪಡೆದು ಭರ್ಜರಿ ಗೆಲುವನ್ನು ಸಾಧಿಸಿದ್ದರು.ಇದೀಗ ಗ್ರಾ.ಪಂ.ಸದಸ್ಯೆಯಾಗಿ ಎರಡೂವರೆ ವರ್ಷವನ್ನು ಪೂರೈಸಿದರೂ,ತನ್ನ ಬದುಕಿನ ಜಟಕಾ ಬಂಡಿ ಸಾಗಿಸುವ ವೃತ್ತಿ ಮಂಡಕ್ಕಿ ಮಾರಾಟವನ್ನು ಮಾತ್ರ ನಿಲ್ಲಿಸಿಲ್ಲ,ಈಗಲು‌ ತಲೆ ಮೇಲೆ ಮಂಡಕ್ಕಿಯನ್ನು ಹೊತ್ತುಕೊಂಡು ಊರೂರು ಸುತ್ತಾಡುತ್ತಾರೆ.

ತನ್ನ ಮತದಾರರು ಅಗತ್ಯಕ್ಕಾಗಿ ಕರೆ ಮಾಡಿದರೆ, ಅವರ ಗಂಡ ಹನುಮಂತಪ್ಪ ಅವರು ಮತದಾರನ ಸಮಸ್ಯೆಗೆ ಸ್ಪಂದಿಸುತ್ತಾರೆ. ಸಾಮಾನ್ಯ ಸಭೆಗೆ ಅಥವಾ ಅಗತ್ಯದ ಸಂದರ್ಭ ತನ್ನ ಊರಿಗೆ ತೆರಳಿದಾಗ ವಾರಗಳ ಕಾಲ ಇದ್ದು ತನ್ನ ಮತದಾರರ ಜೊತೆಗಿದ್ದು, ಅವರಿಗೆ ಗ್ರಾ.ಪಂ. ಆಗಬೇಕಾದ ಕೆಲಸ,ಕಾರ್ಯಗಳನ್ನು ಮಾಡಿಸಿಕೊಡುತ್ತೆನೆ. ತಾನು ವಾಪಾಸ್ ಬಿ.ಸಿ.ರೋಡಿಗೆ ಬಂದ ಬಳಿಕ ಎಲ್ಲಾ ಕೆಲಸವನ್ನು ಗಂಡನೇ ನಿರ್ವಹಿಸುತ್ತಾರೆ ಎಂದು ಹೇಳುತ್ತಾರೆ ಲಕ್ಷ್ಮೀ ದೇವಮ್ಮ ಅವರು. ಬಿ.ಸಿ.ರೋಡಿನ  ಕೇಂದ್ರ ಸ್ಥಾನದಲ್ಲಿ ವಾಸವಿರುವ ಲಕ್ಷ್ಮೀ ದೇವಮ್ಮ ಅವರು ಬೆಳಗ್ಗೆ 6 ಗಂಟೆಗೆ ತಲೆಮೇಲೆ ಮಂಡಕ್ಕಿ‌ ಮೂಟೆ ಹೊತ್ತು ಹೊರಟರೆ ಸಂಜೆಯ ಹೊತ್ತಿಗೆ ಇಡೀ ಗೋಣಿಚೀಲ ಮುಗಿಸಿ ಮನೆಗೆ ವಾಪಾಸಾಗುತ್ತಾರೆ. ದ.ಕ.ಜಿಲ್ಲೆಯ ಪ್ರತಿ ತಾಲೂಕಿಗೂ ಇವರ ಮಂಡಕ್ಕಿ ಮಾರಾಟಕ್ಕೆ ತೆರಳುತ್ತಾರೆ. ಕೆಲವೊಮ್ಮೆ ಜಾತ್ರಾ ಸ್ಥಳದಲ್ಲಿಯೂ ಮಂಡಕ್ಕಿ ಮಾರಾಟದಲ್ಲಿ ನಿರತರಾಗಿರುತ್ತಾರೆ.   ಹೀಗಾಗಿ ಪ್ರತಿ ತಾಲೂಕಿನಲ್ಲು ಬಹುತೇಕರಿಗೆ ಲಕ್ಷ್ಮೀದೇವಮ್ಮ ಪರಿಚಯಸ್ಥರಾಗಿದ್ದಾರೆ.

ಊರಿನಲ್ಲಿ ಗಂಡನಿಗೆ ಒಂದಷ್ಟು ಕೃಷಿ ಭೂಮಿ ಇದೆಯಾದರೂ, ಅದರಲ್ಲಿ ಬೆಳೆ ಸಿಗುವುದು ಅಷ್ಟಕಷ್ಟೆ. ಮಳೆಗಾಲ ಸಂದರ್ಭ ಕೃಷಿ ಮಾಡಿದರೂ ನೆರೆಯಿಂದಾಗಿ ಬೆಳೆ ಉಳಿದಲ್ಲಿ ಅತ್ಯಲ್ಪ ಲಾಭ ದೊರೆಯುತ್ತದೆ. ಹೀಗಾಗಿ ಜೀವನ ಸಾಗಿಸುವುದಕ್ಕಾಗಿ ಮಂಡಕ್ಕಿ ಮಾರಾಟವನ್ನು ಕಾಯಕವನ್ನಾಗಿಸಿಕೊಂಡಿದ್ದೇನೆ.  17 ವರ್ಷದಿಂದ ಬಿ.ಸಿ.ರೋಡಿನಲ್ಲಿ‌  ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದು,ಇಲ್ಲಿನ ಜನರು ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ಲಕ್ಷ್ಮೀ ದೇವಮ್ಮ ಹೇಳುತ್ತಾರೆ.

Gayathri SG

Recent Posts

ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಪತಿ

ತಾಳಿ ಕಟ್ಟಿದ ಪತಿಯೇ ನಡು ರಸ್ತೆಯಲ್ಲೇ ಗಲಾಟೆ ತೆಗೆದು ಚಾಕುವಿನಿಂದ ಚುಚ್ಚಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ…

21 mins ago

ಮೈಸೂರಿನಲ್ಲಿಯೂ ಪ್ರಜ್ವಲ್‌ ರೇವಣ್ಣನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದ ದೂರು

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲೂ ಒಂದು ಲೈಂಗಿಕ ಕಿರುಕುಳ ಹಾಗೂ ಅಪಹರಣ…

33 mins ago

ಪ್ರಜ್ವಲ್‌ ವಿಡಿಯೋ ಪ್ರಕರಣ, ನಾಡಿನ ಮಾನವನ್ನು ಹರಾಜು ಹಾಕಿದೆ: ಮಾರಸಂದ್ರ ಮುನಿಯಪ್ಪ

ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಅವರ ತಂದೆ, ಶಾಸಕ ರೇವಣ್ಣ ಅವರು ಅಮಾಯಕ…

52 mins ago

ಬೆಂಗಳೂರಿನಲ್ಲಿ ಬಿಸಿಲ ಬೇಗೆಯಲ್ಲಿ ಬೇಯುತ್ತಿದ್ದ ಜನರನ್ನು ತಂಪಾಗಿಸಿದ ಮಳೆರಾಯ

ಬಿಸಿಲ ಬೇಗೆಯಲ್ಲಿ ಬೇಯುತ್ತಿದ್ದ ಬೆಂಗಳೂರಿಗೆ ಸುಮಾರು ಆರು ತಿಂಗಳ ನಂತರ ನಗರದ ಬಹುತೇಕ ಕಡೆ ಗುರುವಾರ ಸಂಜೆ, ಗುಡುಗು–ಮಿಂಚು ಸಹಿತ…

1 hour ago

ರಾಜಕೀಯ ಲಾಭಕ್ಕೆ ಧರ್ಮವನ್ನು ಆಯುಧವಾಗಿ ಬಳಕೆ: ಪರಕಾಲ ಪ್ರಭಾಕರ್‌

ಬಿಜೆಪಿ ಅಧಿಕಾರದಲ್ಲಿರುವ ನವಭಾರತದಲ್ಲಿ ರಾಜಕೀಯ ಲಾಭಕ್ಕೆ ಧರ್ಮವನ್ನು ಆಯುಧವಾಗಿ ಬಳಕೆ ಮಾಡಲಾಗುತ್ತಿದೆ ಎಂದು ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್‌ ಆರೋಪಿಸಿದರು.

1 hour ago

ಚಿನ್ನ ಬೆಳ್ಳಿ ಬೆಲೆ ಕೊಂಚ ಏರಿಕೆ ಕಂಡಿದೆ: ಇಂದಿನ ದರ ಪಟ್ಟಿ ಹೀಗಿದೆ!

ಚಿನ್ನ ಮತ್ತು ಬೆಳ್ಳಿ ಬೆಲೆ ಎರಡನೇ ಬಾರಿ ಏರಿಕೆ ಆಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 40 ರೂನಷ್ಟು ಹೆಚ್ಚಾದರೆ, ಬೆಳ್ಳಿ…

2 hours ago