ವಿಶೇಷ

ಅಷ್ಟ ಐಶ್ವರ್ಯ ಸಿದ್ಧಿ ಧಾತ್ರಿ ಲಕ್ಷ್ಮಿದೇವಿ

ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ ಹಬ್ಬವಾಗಿ ಆಚರಣೆಯಾಗುವ ಹಬ್ಬವೇ ದೀಪಾವಳಿ. ಅಜ್ಞಾನದ ಅಂಧಕಾರವನ್ನು ಮೆಟ್ಟಿ ಜ್ಞಾನದ ಬೆಳಕನ್ನು ಹರಿಸುವ ಹಬ್ಬ. ಈ ವಿಶೇಷ ಹಬ್ಬದಂದು ಲಕ್ಷ್ಮಿದೇವಿಯ ಪೂಜೆಯು ಪ್ರಮುಖ ಅಂಶವಾಗಿದೆ.

ಲಕ್ಷ್ಮಿದೇವಿಯ ಜನನದ ಕಥೆ

ಲಕ್ಷ್ಮಿದೇವಿಯು ವಿಷ್ಣುವಿನ ಪತ್ನಿಯಾಗಿ ಸಂಪತ್ತಿನ ಅಧಿದೇವತೆಯಾಗಿದ್ದಾಳೆ. ವಿಷ್ಣು ಪುರಾಣದ ಪ್ರಕಾರ ದೇವತೆಗಳು ತಮಗೆ ಅಮರತ್ವ ಪಡೆಯಬೇಕು ಎನ್ನುವ ಸಲುವಾಗಿ ವಿಷ್ಣುವನ್ನು ಪ್ರಾರ್ಥಿಸಿ ಸಮುದ್ರ ಮಂಥನ ಮಾಡಲು ಒಪ್ಪಿಸಿದರು. ಅದರಂತೆ ಮಂದಾರ ಪರ್ವತವು ಕಡೆಗೋಲಾಗಿ, ವಾಸುಕಿಯನ್ನು ಹಗ್ಗವಾಗಿ ಮಾಡಿ ಸಮುದ್ರ ಮಂಥನವನ್ನು ಪ್ರಾರಂಭಿಸಿದರು. ಆಗ ಮಂದಾರ ಪರ್ವತವು ಯಾವುದೇ ಬಲವಿಲ್ಲದೆ ನಿಂತಕಾರಣ ಮುಳುಗಲು ಪ್ರಾರಂಭಿಸಿತು. ಆಗ ವಿಷ್ಣುವು ಕೂರ್ಮಾವತಾರವೆತ್ತಿ ಪರ್ವತ ಮುಳುಗದಂತೆ ತಡೆದನು. ಹೀಗೆ ಸಾಗರ ಮಂಥನ ನಡೆಯುವಾಗ ಬೆಲೆಬಾಳುವ ಚಿನ್ನ, ರತ್ನಗಳು ಹೊರಬಂದವು. ಮಂಥನದಲ್ಲಿ ಭಾಗವಹಿಸಿದ ಎಲ್ಲರೂ ತಮಗೆ ಬೇಕಾದದನ್ನು ಪಡೆದುಕೊಂಡರು. ಇದರ ಜೊತೆಗೆ ಅತಿ ಭಯಂಕರವಾದ ಹಾಲಾಹಲವು ಸಮುದ್ರದಿಂದ ಹೊರ ಬಂದಿತು, ಇದನ್ನು ಯಾರು ಪಡೆದುಕೊಳ್ಳಲು ತಯಾರಿರಲಿಲ್ಲ ಕಡೆಗೆ ಪರಶಿವನು ಹಾಲಾಹಲವನ್ನು ಕುಡಿದು ಲೋಕವನ್ನು ಕಾಪಾಡಿದನು.

ಈ ಮಂಥನದಿಂದ ಅಪ್ಸರೆಯರು ಹೊರಬಂದರು ಅವರುಗಳ ಜೊತೆಗೆ ಲಕ್ಷ್ಮಿ ದೇವಿಯು ಪ್ರತ್ಯಕ್ಷಳಾದಳು ಮತ್ತು ಲಕ್ಷ್ಮಿ ದೇವಿಯನ್ನು ವಿಷ್ಣುವು ತನ್ನ ಪತ್ನಿಯಾಗಿ ಸ್ವೀಕರಿಸಿದನು. ಇಲ್ಲಿಂದ ವಿಷ್ಣು ಪ್ರತಿಯೊಂದು ಯುಗದಲ್ಲೂ ಒಂದೊಂದು ಅವತಾರಗಳನ್ನು ಎತ್ತಿದಾಗಲೂ ಲಕ್ಷ್ಮಿ ದೇವಿ ಸದಾ ಜೊತೆಯಲ್ಲಿಯೇ ಇರುತ್ತಾಳೆ. ಶ್ರೀರಾಮನ ಪತ್ನಿಯಾಗಿ ಸೀತಾದೇವಿ, ಶ್ರೀ ಕೃಷ್ಣನ ಪತ್ನಿಯಾಗಿ ರುಕ್ಮಿಣಿ ಹೀಗಿ ಲಕ್ಷ್ಮಿ ದೇವಿಯು ಸದಾ ಶ್ರೀಹರಿಯೊಂದಿಗಿರುತ್ತಾಳೆ.

ಲಕ್ಷ್ಮಿದೇವಿಯ ಇತರ ರೂಪಗಳು

ಆದಿ ಲಕ್ಷ್ಮಿ , ಸಂತಾನ ಲಕ್ಷ್ಮಿ, ಗಜ ಲಕ್ಷ್ಮಿ, ಧನ ಲಕ್ಷ್ಮಿ, ಧಾನ್ಯ ಲಕ್ಷ್ಮಿ, ವಿಜಯ ಲಕ್ಷ್ಮಿ, ಹಾಗೂ ಮಹಾ ಲಕ್ಷ್ಮಿ ಯಾಗಿ ಜನರ ಮನೆ ಮನಗಳಲ್ಲಿ ನೆಲೆಸಿದ್ದಾಳೆ.

Ashika S

Recent Posts

ತ್ರಿವಳಿ ತಲಾಖ್‌ನಿಂದ ನೊಂದು ಹಿಂದೂ ಯುವಕನ್ನು ಮದುವೆಯಾದ ಮುಸ್ಲಿಂ ಮಹಿಳೆ

ತ್ರಿವಳಿ ತಲಾಖ್‌ ನಿಂದ ನೊಂದಿದ್ದ ಮುಸ್ಲಿಂ ಮಹಿಳೆಯೊಬ್ಬಳು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಯುವಕನನ್ನು ಮದುವೆ ಆಗಿರುವ ಘಟನೆ ಉತ್ತರಪ್ರದೇಶದಲ್ಲಿ…

13 mins ago

ಶಿಕಾರಿಗೆ ತೆರಳಿದ್ದ ಯುವಕನ ಮೇಲೆ ಮಿಸ್​​ ಫೈರ್; ಯುವಕ ಸಾವು

ಶಿಕಾರಿಗೆ ತೆರಳಿದ್ದ ಯುವಕನ ಮೇಲೆ ಮಿಸ್ ಫೈರ್ ಆದ ಘಟನೆ ಚಿಕ್ಕಮಗಳೂರಿನ ತಾಲೂಕಿನ ಉಲುವಾಗಿಲು ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದಲ್ಲಿ…

23 mins ago

ಖಾರವಾದ ಚಿಪ್ಸ್ ತಿಂದ 14ರ ಬಾಲಕನಿಗೆ ಹೃದಯ ಸ್ತಂಭನ

ಅತ್ಯಂತ ಖಾರವಾದ ಟೋರ್ಟಿಲ್ಲಾ ಚಿಪ್ ತಿನ್ನುವ ಸಾಮಾಜಿಕ ಮಾಧ್ಯಮ ಚಾಲೆಂಜ್‌ ನಲ್ಲಿ ಭಾಗವಹಿಸಿದ ಅಮೆರಿಕದ 14ರ ಹರೆಯದ ಹುಡುಗನೊಬ್ಬ ಹೃದಯ…

38 mins ago

ನಂಜನಗೂಡು ಶ್ರೀ ನಂಜುಂಡೇಶ್ವರನ ದರ್ಶನ ಪಡೆದ ಹೆಚ್. ಡಿ ರೇವಣ್ಣ

ಮಹಿಳೆ ಕಿಡ್ನಾಪ್ ಕೇಸ್ ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಮಾಜಿ ಸಚಿವ ಹೆಚ್.…

55 mins ago

ʼನನ್ನನ್ನು ನೋಡಬೇಡಿ, ಅಟಲ್‌ ಸೇತುವೆ ನೋಡಿʼ ಎಂದ ರಶ್ಮಿಕಾಗೆ ಪಿಎಂ ಮೋದಿ ಮೆಚ್ಚುಗೆ

ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ಸಿನಿಮಾಗಳು.…

1 hour ago

ಗಮನ ಸೆಳೆದ ಮಾವು ಮೇಳ; ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ

ಹಣ್ಣುಗಳ ರಾಜನೆಂದು ಕರೆಯಲಾಗುವ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ…

2 hours ago