ಮಂಗಳೂರು: ಯೂತ್ ಆಫ್ ಜಿಎಸ್ ಬಿ ಆಯೋಜಿಸಿದ ಆಭರಣ್ ಜ್ಯುವೆಲ್ಲರ್ಸ್ ಮಿಸ್ಟರ್ ಅಂಡ್ ಮಿಸ್ ಜಿಎಸ್ ಬಿ, ಆದರ್ಶ ದಂಪತಿ ಕಾರ್ಯಕ್ರಮದ ಗ್ರಾಂಡ್ ಫೈನಲ್ಸ್ ಭಾನುವಾರ ಮಂಗಳೂರಿನ ಟಿಎಂಎ ಪೈ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.
ಟ್ಯಾಲೆಂಟ್ ರೌಂಡ್, ತೀರ್ಪುಗಾರರ ಪ್ರಶ್ನಾ ಸುತ್ತು ಸಹಿತ ವಿವಿಧ ಸುತ್ತುಗಳಲ್ಲಿ ವಿಜೇತರಾದ ಸ್ಪರ್ಧಿಗಳಲ್ಲಿ ಮಿಸ್ ಅಂಡ್ ಮಿಸ್ಟರ್ ಪ್ರಶಸ್ತಿ ಗೆದ್ದವರಿಗೆ ಐಫೋನ್ ಬಹುಮಾನವಾಗಿ ನೀಡಲಾಯಿತು. ಆದರ್ಶ ದಂಪತಿ ವಿಜೇತರಿಗೆ 10 ದಿನಗಳ ಕಾಶ್ಮೀರ ಪ್ರವಾಸದ ಆನಂದ ದೊರೆಯಲಿದೆ. ವಿಜೇತರಿಗೆ ಮತ್ತು ರನ್ನರ್ ಅಪ್ ಸ್ಪರ್ಧಿಗಳಿಗೆ ಬ್ರಹ್ಮಾವರದ ಸತ್ಯನಾಥ ಸ್ಟೋರ್ ಹಾಗೂ ಆಭರಣ್ ಜ್ಯುವೆಲ್ಲರ್ಸ್ ವತಿಯಿಂದ ಗಿಫ್ಟ್ ವೋಚರ್, ಹ್ಯಾಂಗ್ಯೋ, ವಿವೇಕ್ ಟ್ರೇಡರ್ಸ್, ಮಹಾಮಾಯಾ ಟ್ರೇಡರ್ಸ್ ವತಿಯಿಂದ ಆಕರ್ಷಕ ಬಹುಮಾನ ನೀಡಲಾಯಿತು.
ಮಿಸ್ಟರ್ ಜಿಎಸ್ ಬಿಯಾಗಿ ನಿತಿನ್ ಕಾಮತ್, ಮೊದಲ ರನ್ನರ್ ಅಪ್ ಆಗಿ ವೈಷ್ಣವ್ ಶೆಣೈ, ಎರಡನೇ ರನ್ನರ್ ಅಪ್ ಆಗಿ ಶ್ರೀಶಾ ಭಟ್, ಮಿಸ್ ಜಿಎಸ್ ಬಿಯಾಗಿ ವಾಸವಿ, ಮೊದಲ ರನ್ನರ್ ಅಪ್ ಆಗಿ ಗ್ರೀಷ್ಮಾ, ಎರಡನೇ ರನ್ನರ್ ಅಪ್ ಆಗಿ ಸನ್ನಿಧಿ ಆಯ್ಕೆಯಾದರು.
ಆದರ್ಶ ದಂಪತಿ ವಿಜೇತರಾಗಿ ಬೆಂಗಳೂರಿನ ಸತೀಶ್ ನಾಯಕ್-ಸ್ನೇಹಾ ನಾಯಕ್, ಮೊದಲ ರನ್ನರ್ ಅಪ್ ಆಗಿ ಮೂಲ್ಕಿಯ ಪ್ರಮೋದ್ ಭಟ್- ಪ್ರಜ್ಞಾ ಭಟ್, ಎರಡನೇ ರನ್ನರ್ ಅಪ್ ಆಗಿ ಮಂಗಳೂರಿನ ವಿಷ್ಣುಮೂರ್ತಿ ಕಾಮತ್-ಅಮಿತಾ ಕಾಮತ್ ಆಯ್ಕೆಯಾದರು.
ಈ ಅಂತಿಮ ಸ್ಪರ್ಧಾಕಣದ ಪೂರ್ವಭಾವಿಯಾಗಿ ನಡೆದ ವಿವಿಧ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ವಿಂದ್ಯಾ ಪೈ, ಪ್ರೀತಂ ಕಾಮತ್, ಸುಮತಾ ನಾಯಕ್, ಪ್ರತೀಕ್ಷಾ, ಶ್ರೇಯಾ ಭಕ್ತ, ಸುರೇಶ್ ಕಾಮತ್ ಸಹಕರಿಸಿದರು.
ಎರಡೂ ದಿನವೂ ಆಗಮಿಸಿದ ಎಲ್ಲಾ ಅತಿಥಿಗಳಿಗೆ ಹ್ಯಾಂಗ್ಯೋ ಉತ್ಪನ್ನಗಳು, ಉತ್ತರ ಭಾರತ ಶೈಲಿಯ ಊಟೋಪಚಾರ ಹಾಗೂ ವಿವಿಧ ಪಾನೀಯ, ಖಾದ್ಯಗಳನ್ನು ಉಣಬಡಿಸಲಾಯಿತು.
ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ ಆಭರಣ್ ಜ್ಯುವೆಲ್ಲರ್ಸ್ ಇದರ ಮುಖ್ಯಸ್ಥರಾದ ಸುಭಾಷ್ ಕಾಮತ್, ಸಂಧ್ಯಾ ಕಾಮತ್, ಮಹೇಶ್ ಕಾಮತ್, ವೀಣಾ ಕಾಮತ್, ಸಾತ್ವಿಕ್ ಕಾಮತ್, ಆಕಾಶ್ ಕಾಮತ್
ಯೂತ್ ಆಫ್ ಜಿಎಸ್ ಬಿ ಸಂಚಾಲಕರಾದ ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್, ಅಂಜನಾ ಕಾಮತ್, ಅರ್ಚನಾ ಬಾಳಿಗಾ, ಕಿರಣ್ ಶೆಣೈ, ನಿವೇದಿತಾ ಪ್ರಭು, ಸಂದೇಶ್ ಕಾಮತ್ ಹಾಗೂ ಗಣ್ಯರು
ಉಪಸ್ಥಿತರಿದ್ದರು. ವರ್ಷಾ ಭಂಡಾರಕಾರ್ ಕಾಮತ್ ಹಾಗೂ ಅಮೃತಾ ನಾಯಕ್ ನಿರೂಪಿಸಿದರು.
ಮೊಬೈಲ್ ಬಳಕೆ ಕಡಿಮೆ ಮಾಡು ಎಂದು ತಿಳಿಹೇಳಿದಕ್ಕೆ ತಂಗಿಯೊಬ್ಬಳು ಅಣ್ಣನನ್ನು ಹತ್ಯೆ ಮಾಡಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. 14 ವರ್ಷದ…
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ರಾಮಲಲ್ಲಾನ ದರ್ಶನ ಪಡೆದು ಬಳಿಕ ರೋಡ್ ಶೋ…
ಐಪಿಎಲ್ನ 52ನೇ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ ಹೊಸ ಮೈಲುಗಲ್ಲು ದಾಟಿದ್ದಾರೆ. ಈ ಮೂಲಕ ಈ ಸಾಧನೆ…
ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿಯ ಕಾರು ಅಪಘಾತಕ್ಕೊಳಗಾಗಿದೆ. ಅಪಘಾತದಲ್ಲಿ ಶಿವಕುಮಾರ ಸ್ವಾಮೀಜಿಗೆ ಗಾಯಗಳಾಗಿದ್ದು, ಆ್ಯಂಬುಲೆನ್ಸ್ ಮೂಲಕ ಸ್ವಾಮೀಜಿಯನ್ನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಹೆಡಿಯಾಲ ಉಪ ವಿಭಾಗದ ಹೆಬ್ಬಳ್ಳ ಗಸ್ತಿನ ಚಾಮಲಾಪುರ ಅರಣ್ಯ ಪ್ರದೇಶದಲ್ಲಿ ಹುಲಿಯೊಂದರ ಮೃತದೇಹಪತ್ತೆಯಾಗಿದ್ದು 11…
ಅತ್ಯಾಚಾರ ಆರೋಪ ಮತ್ತು ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಮತ್ತು ಹಾಲಿ ಶಾಸಕ ಹೆಚ್ಡಿ ರೇವಣ್ಣರನ್ನು ಕಳೆದ ದಿನ ಎಸ್ಐಟಿ…