ನೆಲ್ಲಕುಂಜೆ ನಡುಮನೆ ತರವಾಡು ಮನೆಯ ಗೃಹ ಪ್ರವೇಶ ಹಾಗೂ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಜನವರಿ 30 ರಿಂದ ಫೆಬ್ರವರಿ 2ರವರೆಗೆ ನಡೆಯಲಿದೆ.
ಫೆ.2ನೇ ಬುಧವಾರ ಪ್ರಾತಃಕಾಲ 9,22ರ ಕುಂಭ ಲಗ್ನದ ಶುಭ ಮುಹೂರ್ತದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಲಂಪಾಡಿ ಗಣೇಶ್ ತಂತ್ರಿಗಳವರ ನೇತೃತ್ವದಲ್ಲಿ ನೆಲ್ಲಕುಂಜೆ ನಡುಮನೆ ತರವಾಡು ಮನೆಯ ಗೃಹ ಪ್ರವೇಶ ಹಾಗೂ ರಾಜನ್ದೈವ ಧೂಮಾವತಿ, ಪಲವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿರುವುದು.
ಈ ಕಾರ್ಯಕ್ರಮದಲ್ಲಿ ಜ್ಞಾನಶಕ್ತಿ ಸುಬ್ರಹ್ಮಣ್ಣ ಕೃಪಾಪೋಷಿತ ಯಕ್ಷಗಾನ ಮಂಡಲ, ಪಾವಂಜೆ ಇವರಿಂದ ಯಕ್ಷಗಾನ ಬಯಲಾಟ “ಶ್ರೀ ದೇವಿ ಮಹಾತ್ಮೆ” ನಡೆಯಲಿದೆ ಹಾಗೂ ದೈವಗಳ ತೊಡಂಗೇಲ್ ಹಾಗೂ ಪೊಲ್ಡನ್ ದೈವದ ನೇಮೋತ್ಸವ, ರಕ್ತೇಶ್ವರಿ ದೈವದ ನೇಮೋತ್ಸವ ಮತ್ತು ಧೂಮಾವತಿ ಮತ್ತು ಕಾಳಗುಳಿಗ ದೈವದ ನೇಮೋತ್ಸವ, ರಾಜನ್ ದೈವ ಧೂಮಾವತಿ, ದೈವದ ಭಂಡಾರ ತೆಗೆದು ನೇಮೋತ್ಸವ ಹಾಗೂ ಕೊರಗ ದೈವದ ನೇಮೋತ್ಸವ, ಕಲ್ಲಾಲ್ದ ಗುಳಗ ನೇಮೋತ್ಸವ ನಡೆಯಲಿದೆ.