ಬೀದರ್: ಜೂ.20 ಇಂದಿನ ಆಹಾರ ಕ್ರಮದ ಪದ್ದತಿ ಹಾಗೂ ಒತ್ತಡದ ಜೀವನದಲ್ಲಿ ನಾವು ಅನೇಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತಿದ್ದು, ಅದರಲ್ಲಿ ಮಕ್ಕಳಾಗದ ಬಂಜೆತನದ ಸಮಸ್ಯೆಯೂ ಒಂದಾಗಿದೆ, ಅನೇಕ ದಂಪತಿಗಳು ಈ ಸಮಸ್ಯೆಯನ್ನು ಎದುರಿಸುತಿದ್ದಾರೆ. ಆದರೆ ಬಂಜೆನತದಿಂದ ಬಳಲುತಿರುವ ದಂಪತಿಗಳು ಹೆದರಬೇಕಾಗಿಲ್ಲ.
ಇದಕ್ಕೆ ನಮ್ಮಲ್ಲಿ ಸೂಕ್ತ ಚಿಕಿತ್ಸೆ ಇದೆ. ಅಡವಾನ್ಸ್ ಟೆಕ್ನಾಲಜಿ ಹೊಂದಿರುವ ನಮ್ಮ ಅವಿರಾ ಫರ್ಟಿಲಿಟಿ ಆಸ್ಪತ್ರೆಯ ನುರಿತ ವೈದ್ಯರು ಇದೀಗ ಬೀದರನ ವಾಲಿಶ್ರೀ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ತಪಾಸಣೆ ನಡೆಸಲಿದ್ದಾರೆ ಎಂದು ಹೈದ್ರಾಬಾದನ ಅವಿರಾ ಫರ್ಟಿಲಿಟಿ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ. ವಿಜಯಾ ರೆಡ್ಡಿ ಅವರು ತಿಳಿಸಿದರು.
ಅವರು ನಗರದ ವಾಲಿಶ್ರೀ ಆಸ್ಪತ್ರೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತಿದ್ದರು. ಅವರು ಮುಂದುವರೆದು ಮಾತನಾಡಿ, ಗರ್ಭ, ಅಂಡಾಶಯ, ವೀರ್ಯ, ಸಂತಾನೋತ್ಪತ್ತಿ, ಚಿಕಿತ್ಸೆಯ ಎಲ್ಲ ಆಧುನಿಕ ತಂತ್ರಜ್ಞಾನ ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿದೆ. ಐವಿಐ, ಐವಿಎಫ್, ಐಸಿಎಸ್ಐ, ಟೆಸ್ಟ್ಟ್ಯೂಬ್ ಬೇಬಿ ಸೇರಿದಂತೆ ಬಂಜೆತನ ನಿವಾರಣೆಯ ಎಲ್ಲ ಸೌಲಭ್ಯಗಳಿದ್ದು, ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ಮಾಡಲಾಗುವುದು.
ಈ ನಿಟ್ಟಿನಲ್ಲಿ ಬೀದರನ ವಾಲಿಶ್ರೀ ಆಸ್ಪತ್ರೆಯಲ್ಲಿ ಇಂದು ದಿನಾಂಕ 19-6-2023 ರಂದು ಉಚಿತ ಕ್ಯಾಂಪ್ ಸಹ ಮಾಡಲಾಗುತಿದ್ದು, ಪ್ರತಿ ತಿಂಗಳು ನಮ್ಮ ತಜ್ಞ ವೈದ್ಯರು ಆಗಮಿಸಿ ತಪಾಸಣೆ ಮಾಡುವರು. ಮಕ್ಕಳಾಗದ ದಂಪತಿಗಳು ಇದರ ಸದುಪಯೋಗ ಪಡೆದುಕೊಳ್ಳಬೆಕೆಂದು ಡಾ. ವಿಜಯಾ ರೆಡ್ಡಿ ವಿವರಿಸಿದರು.
ಮಕ್ಕಳಾಗದೆ ಇರುವ ಪ್ರತಿಯೊಬ್ಬ ರೋಗಿಗೂ ಐವಿಎಫ್ ಅವಶ್ಯಕತೆಯಿರುವುದಿಲ್ಲ, ಅವರ ಗರ್ಭಕೋಶ, ಅಂಡಾಶಯ, ವೀರ್ಯ, ಸಂತಾನೋತ್ಪತಿಯ ರೋಗ ಲಕ್ಷಣಗಳ ಕುರಿತು ತಪಾಸಣೆ ಮಾಡಿದ ನಂತರ ಅವರಿಗೆ ಅವಶ್ಯಕತೆಯಿರುವ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.
ಮತ್ತು ನಮ್ಮ ಆಸ್ಪತ್ರೆಯಲ್ಲಿ ಡೋನರ್ ವ್ಯವಸ್ಥೆಯು ಸಹ ಲಭ್ಯವಿದ್ದು, ಗುಣಮಟ್ಟದ ಚಿಕಿತ್ಸೆಯಿಂದ ಇದುವರೆಗೆ ಉತ್ತಮ ಫಲಿತಾಂಶ ನೀಡುತ್ತಾ ಬರುತಿದ್ದೇವೆ ಎಂದು ಖ್ಯಾತ ವೈದ್ಯರಾದ ಡಾ. ವಿಜಯಾ ರೆಡ್ಡಿ ಅವರು ವಿವರಿಸಿದರು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ; 7730820860 / 7801002303 ಹಾಘೂ 9777755550 ಗೆ ಸಂಪರ್ಕಿಸಬಹುದಗಿದೆ. ಪತ್ರಿಕಾಗೋಷ್ಠಿಯಲ್ಲಿ ವಾಲಿಶ್ರೀ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶಾಂತಿಸಿಂಗ್, ಡಾ. ಹರಿತಾ ಮತ್ತಿತರರು ಉಪಸ್ಥಿತರಿದ್ದರು.