News Karnataka Kannada
Monday, April 29 2024
ಆರೋಗ್ಯ

ಯುವಜನರಲ್ಲಿ ಹೃದಯಾಘಾತ 22% ಹೆಚ್ಚಳ: ಡಾ.ಸಿ.ಎನ್‌.ಮಂಜುನಾಥ್‌ ಮಾಹಿತಿ

heart attacks
Photo Credit : Facebook

ಬೆಂಗಳೂರು: ‘ನಮ್ಮ ದೇಶದಲ್ಲಿ ಕಳೆದ 15 ವರ್ಷದಿಂದ ಈಚೆಗೆ ಯುವಕರು ಹಾಗೂ ಮಧ್ಯ ವಯಸ್ಕರಲ್ಲಿ ಹೃದಯಾಘಾತಗಳು ಶೇ.22ರಷ್ಟು ಹೆಚ್ಚಾಗಿವೆ. 25-40 ವರ್ಷದ ಮಹಿಳೆಯರಲ್ಲೇ ಹೃದಯಾಘಾತಗಳು ಶೇ.8ರಷ್ಟು ಹೆಚ್ಚಾಗಿವೆ. ಹೀಗಾಗಿ ಜೀವನಶೈಲಿ, ಆಹಾರ ಕ್ರಮ, ಆರೋಗ್ಯದ ಬಗ್ಗೆ ನಿಗಾ ಸೇರಿದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದು ಕಡ್ಡಾಯ’ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಹಾಗೂ ಹೃದ್ರೋಗ ತಜ್ಞ ಡಾ.ಸಿ.ಎನ್‌.ಮಂಜುನಾಥ್‌ ತಿಳಿಸಿದ್ದಾರೆ.

ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಹಠಾತ್‌ ನಿಧನದ ಬಗ್ಗೆ ಪ್ರತಿಕ್ರಿಯಿಸಿದ ಅವರು , 3-4 ದಶಕಗಳ ಹಿಂದೆ ಮಹಿಳೆಯರಲ್ಲಿ ಹೃದಯಾಘಾತ ಸಮಸ್ಯೆ ಎಂಬುದೇ ಅಪರೂಪ ಎಂಬಂತಾಗಿತ್ತು. ಈಗಲೂ ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಹೃದಯ ಸಮಸ್ಯೆಗಳು ಕಡಿಮೆ. ಆದರೆ, ಇತ್ತೀಚೆಗೆ ಮಹಿಳೆಯರಲ್ಲೂ ಅಕಾಲಿಕ ಹೃದಯಾಘಾತ ಸಮಸ್ಯೆ ಶೇ.8ರಷ್ಟು ಹೆಚ್ಚಾಗಿದೆ ಎಂದು ಹೇಳಿದರು.

ಇದಕ್ಕೆ ಮಹಿಳೆಯರ ಜೀವನದಲ್ಲೂ ಗಂಡಸರ ರೀತಿಯಲ್ಲೇ ಒತ್ತಡ ಹೆಚ್ಚಾಗುತ್ತಿರುವುದು ಪ್ರಮುಖ ಕಾರಣ. ಜತೆಗೆ, ಹಾರ್ಮೊನ್ಸ್‌, ಫ್ಯಾಟಿ ಲಿವರ್‌, ಥೈರಾಯ್ಡ್‌, ಪಿಒಸಿಡಿ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದರು. ಹೃದಯ ಸೇರಿದಂತೆ ದೇಹದ ಆರೋಗ್ಯಕ್ಕೆ ವ್ಯಾಯಾಮ ಎಂಬುದು ತುಂಬಾ ಮುಖ್ಯ. ಆದರೆ ಅತಿರೇಕದ ಉತ್ಸಾಹ, ಅತಿಯಾದ ವ್ಯಾಯಾಮ ಒಳ್ಳೆಯದಲ್ಲ.

ತೂಕ ಇಳಿಸಲು ಡಯಟ್‌ಗಳ ಮೊರೆ ಹೋಗಬಾರದು. ಕೃತಕ ಪ್ರೊಟೀನ್‌ ಸೇವಿಸುವ ಬದಲು ಮೊಳಕೆ ಕಾಳು, ಮೊಟ್ಟೆಯಂತಹ ಪ್ರೊಟೀನ್‌ ಸೇವಿಸಬೇಕು ಎಂದು ಹೇಳಿದರು.

ಆಹಾರ ಪದ್ಧತಿ, ಆಹಾರ ಪದಾರ್ಥಗಳಲ್ಲಿ ಮಿತಿ ಇರಬೇಕು. ಹೆಚ್ಚು ಹಣ್ಣು, ತರಕಾರಿ ಸೇವಿಸಬೇಕು. ಫಾಸ್ಟ್‌ಫುಡ್‌ ಸೇವನೆ ಮಾಡಬಾರದು. ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಊಟದಲ್ಲಿ ಉಪ್ಪು, ಕೊಬ್ಬಿನಂಶ ಹಾಗೂ ಸಕ್ಕರೆ ಅಂಶ ನಿಯಂತ್ರಿಸಬೇಕು ಎಂದು ಆರೋಗ್ಯದ ಕುರಿತು ಕಿವಿ ಮಾತು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು