ಹುಲಸೂರ: ತಾಲ್ಲೂಕಿನ ಮಿರಖಲ ಗ್ರಾಮದಲ್ಲಿ ತೆರೆದ ಬಾವಿಗೆ ಬಿದ್ದು ನಿವೃತ್ತ ಸಿಆರ್ಪಿಎಫ್ ಯೋಧ ಶರಣಬಸಪ್ಪ ಪೂಜಾರಿ (59) ಆತ್ಮಹತ್ಯೆ ಮಾಡಿಕೊಂಡಿದ್ದು ಘಟನೆಗೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಶರಣಬಸಪ್ಪ ಪೂಜಾರಿ ಅವರು ಕಲಬುರಗಿ ಜಿಲ್ಲೆಯ ಕುರಿಕೋಟಾ ಗ್ರಾಮದವರು.
ಅವರನ್ನು ಕೆಲವರು ಅಪಹರಿಸಿ ಮಿರಖಲ ಗ್ರಾಮಕ್ಕೆ ಬಂದು ಕೂಡಿ ಹಾಕಿದ್ದರು. ಅವರು ಅಲ್ಲಿಂದ ಬಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಶರಣಬಸಪ್ಪ ಅವರ ಪತ್ನಿ ಅವ್ವಮ್ಮ ಹುಲಸೂರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಘಟನೆಗೆ ಸಂಬಂಧಿಸಿ ಆರೋಪಿಗಳಾದ ಅನಿಲಕುಮಾರ ರಾಮತೀರ್ಥ, ಅರ್ಜುನ ಕೃಷ್ಣಾಜಿ, ಭೀಮರಾವ ಮೂಳೆ ಅವರನ್ನು ಬಂಧಿಸಲಾಗಿದೆ ಎಂದು ಪಿಎಸ್ಐ ನಾಗೇಂದ್ರ ತಿಳಿಸಿದ್ದಾರೆ.
ಘಟನೆಯ ವಿವರ: ‘ಶರಣಬಸಪ್ಪ ಅವರು 124 ಎಕರೆ ಜಮೀನು ಕೊಡಿಸುತ್ತೇನೆ ಎಂದು ತಮ್ಮಿಂದ ₹ 12 ಲಕ್ಷ ಪಡೆದಿದ್ದು, ಜಮೀನು ಕೊಡಿಸಿಲ್ಲ. ಹಣವೂ ಮರಳಿ ನೀಡದ ಕಾರಣ ಮಹಾಗಾಂವ ಕ್ರಾಸ್ನಿಂದ ಅಪಹರಿಸಿದ್ದೇವೆ ಎಂದು ಆರೋಪಿ ಅನಿಲ ರಾಮತೀರ್ಥ ಅವರು ಶರಣಬಸಪ್ಪ ಪತ್ನಿ ಅವ್ವಮ್ಮಗೆ ಕರೆ ಮಾಡಿದ್ದರು. ಹಣ ವಾಪಸ್ ಮಾಡಲು ತಿಳಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಹಣ ಹೊಂದಿಸಿಕೊಡುತ್ತೇನೆ ಎಂದಾಗ ಅನಿಲ ಕರೆ ಕಟ್ ಮಾಡಿದ್ದಾರೆ. ಫೆಬ್ರುವರಿ 9ರಂದು ತಾನು ಮತ್ತು ತನ್ನ ಮಕ್ಕಳು ಮಿರಖಲ ಗ್ರಾಮಕ್ಕೆ ಶರಣಬಸಪ್ಪ ಅವರನ್ನು ಕರೆತರಲು ಹೋದಾಗ ಬಾವಿಯಲ್ಲಿ ಶವ ಪತ್ತೆಯಾಗಿದೆ’ ಎಂದು ಅವ್ವಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821
ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು ಘಾಟ್ ಬಳಿ ಕಾರೊಂದು ಪಲ್ಟಿಯಾದ ಘಟನೆ ನಡೆದಿದೆ.
ಫ್ಲಾಟ್ಗಳನ್ನು ನಿರ್ಮಿಸಲು ಎಂಟು ಮರಗಳನ್ನು ಕಡಿದ ಆರೋಪದ ಮೇಲೆ ಆಂಧ್ರಪ್ರದೇಶ ಮೂಲದ ಬಿಲ್ಡರ್ ವಿರುದ್ಧ ಬಿಬಿಎಂಪಿ ಅರಣ್ಯ ವಿಭಾಗವು ಎಫ್ಐಆರ್…
ಪಟ್ಟಣದ ಬೈಪಾಸ್ ಬಳಿ ಅಣ್ಣಿಗೇರಿಯಿಂದ ಹುಬ್ಬಳ್ಳಿ ರಸ್ತೆಗೆ ಸೇರುವ ರಸ್ತೆ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಸಾರಿಗೆ ಬಸ್ ಮತ್ತು ತರಕಾರಿ…
ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ ರೋಟರಿಗೆ ಬಾಲಕ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅವಳಿ ನಗರದಲ್ಲಿ ಹೆಚ್ಚುತ್ತಿರುವ ಕ್ರೈಂ ರೇಟ್ ಕಡಿವಾಣ ಹಾಕುವಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ರೇಣುಕಾಸುಕುಮಾರ ಅವರನ್ನು ಬದಲಾವಣೆ ಮಾಡಬೇಕು ಅಂತ…
ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ದೇಶಕ್ಕೆ ಹೋಗಿದ್ದು, ಇಲ್ಲಿಯವರೆಗು ಜರ್ಮನಿಯಲ್ಲಿದ್ದಾರೆ ಎಂದು…