ಮಂಗಳೂರು: ಉಡುಪಿ ನೇಜಾರಿನಲ್ಲಿ ನಾಲ್ವರನ್ನು ಬರ್ಬರವಾಗಿ ಕೊಂದು ಪರಾರಿಯಾಗಿದ್ದ ಆರೋಪಿ ಪ್ರವೀಣ್ ಚೌಗುಲೆಯನ್ನು ಉಡುಪಿ ಪೊಲೀಸರು ಸ್ಥಳ ಪರಿಶೀಲನೆಗಾಗಿ ಪದವಿನಂಗಡಿಯಲ್ಲಿರುವ ಆತನ ಹಿಂದಿನ ನಿವಾಸಕ್ಕೆ ಕರೆತಂದಿದ್ದಾರೆ.
ಪ್ರವೀಣ್ ಈ ಹಿಂದೆ ಪದವಿನಂಗಡಿಯ ಮನೆಯೊಂದರಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದ್ದು, ಆ ಪ್ರದೇಶದಲ್ಲಿ ಸ್ಥಳ ಪರಿಶೀಲನೆಗಾಗಿ ಪೊಲೀಸರು ಆತನನ್ನ ಕರೆತಂದಿದ್ದಾರೆ. ತಪಾಸಣೆ ವೇಳೆ ಪ್ರಕರಣ ತನಿಖಾಧಿಕಾರಿ, ವಿಧಿವಿಜ್ಞಾನ ಅಧಿಕಾರಿಗಳು ಹಾಗೂ ಇತರೆ ಪೊಲೀಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಚಾಕು ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.