ಬೀದರ್: ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ದಿನಾಂಕ 23 ರಂದು ಗಣೇಶ ಚತುರ್ಥಿ ಹಬ್ಬದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸರಾಯಿ ಮಾರಾಟ ನಿಷೇಧ (Dry Day) ಘೋಶಣೆ ಮಾಡಿದ್ದರು.
ಬೀದರ್ ನ ಪ್ರತಾಪ ನಗರದಲ್ಲಿ ಆದೇಶವನ್ನು ಉಲ್ಲಂಘನೆ ಮಾಡಿ ಸರಾಯಿ ಮಾರಾಟ ಮಾಡುತ್ತಿರವ ಮಾಹಿತಿಯಂತೆ ಬೀದರ್ ನೂತನ ನಗರ ಪೊಲೀಸ್ ಠಾಣೆಯ ಪ್ರಭಾರಿ ಪಿ.ಐ ವಿಜಯಕುಮಾರ ರವರು ತಮ್ಮ ಠಾಣೆಯ, ತಸ್ಲೀಮ್ ಸುಲ್ತಾನಾ, ಪಿ.ಎಸ್.ಐ, ವಿಜಯಕುಮಾರ, ಸಿಹೆಚ್.ಸಿ, ಹನುಮಗೌಡ, ಸಿಪಿಸಿ ರವರೊಂದಿಗೆ ದಾಳಿ ಮಾಡಿದ್ದಾರೆ.
ಈ ದಾಳಿಯಲ್ಲಿ ವಿವಿಧ ನಮೂನೆಯ ಅಂದಾಜು ಮೌಲ್ಯ 83,553.00 ರೂಪಾಯಿ ಬೆಲೆ ಬಾಳುವ ಸರಾಯಿ ಮತ್ತು 13,000.00 ಸಾವಿರ ರೂಪಾಯಿಯ ಎರಡೂ ಮೊಬೈಲ್ ಹೀಗೆ ಒಟ್ಟು 96,553.00 ರೂಪಾಯಿಯ ಮಾಲನ್ನು ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.