ಕಲಬುರಗಿ: ಅದು ಐಷಾರಾಮಿ ಖಾಸಗಿ ವೋಲ್ವೋ ಬಸ್, ಆರಾಮಾಗಿ ಮಲಗಿಕೊಂಡು ಗೋವಾ ತಲುಪುವಂತಹ ವ್ಯವಸ್ಥೆ ಇರುವ ಈ ಬಸ್ನಲ್ಲಿ ಕೊನೆ ಸೀಟಲ್ಲಿ ಗಿಜಿನಿಂದ ಮಾಡಿದ ಸುರಕ್ಷಿತ ಲಾಕರ್ ತೆರೆದಾಗಲೇ ಗೊತ್ತಾಗಿದ್ದು ಅಲ್ಲಿ ಮಿನಿ ಬಾರ್ ಸೃಷ್ಟಿಯಾಗಿರೋದು. ಈ ಬಸ್ಸಿನ ಕೊನೆ ಸೀಟ್ನ ಈ ಗಾಜಿನ ಪೆಟ್ಟಿಗೆಯಲ್ಲಿ ಬೆಲೆ ಬಾಳುವಂತಹ ವ್ಹಿಸ್ಕಿ, ಮದ್ಯದ ಅನೇಕ ಬಾಟಲ್ಗಳನ್ನು ಒಪ್ಪಓರಣವಾಗಿ ಜೋಡಿಸಿಡಲಾಗಿತ್ತು.
ಗೋವಾದಿಂದ ತೆಲಂಗಾಣಕ್ಕೆ ಹೊರಟಿದ್ದ ಈ ಬಸ್ಸನ್ನು ಕಲಬುರಗಿಯಲ್ಲಿ ಅಬಕಾರಿ ಪೊಲೀಸರು ನಿಲ್ಲಿಸಿ ಪರಿಶೀಲನೆ ಮಾಡಿದಾಗ ಬಸ್ಸೊಳಗೇ ಮಿನಿ ಬಾರ್ ಸೃಷ್ಟಿಸಿರೋದು ಪತ್ತೆಯಾಗಿದೆ. ದಾಳಿ ಕಾಲದಲ್ಲಿ ಬ್ಲೆಂಡರ್ ಪ್ರೈಡ್, ರಾಯಲ್ ಸ್ಟಾಗ್ ಸೇರಿದಂತೆ ಅನೇಕ ಬೆಲೆ ಬಾಳುವ ಮದ್ಯದ ಬಾಟಲ್ಗಳು ಸಿಕ್ಕಿವೆ. ಅವೆಲ್ಲವನ್ನು ಪೊಲೀಸರು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಿದ್ದಾರೆ. ನಿತ್ಯ ತೆಲಂಗಾಣ ರಾಜ್ಯದ ಹೈದ್ರಾಬಾದ್- ಗೋವಾ ನಡುವೆ ಓಡಾಡುವ ಈ ಬಸ್ಸಲ್ಲಿ ಮದ್ಯದ ಬಾಟಲ್ ಸಾಗಾಟ ನಡೆದಿದೆ ಎಂಬ ಖಚಿತ ದೂರುಗಳು ಪೊಲೀಸರಿಗೆ ಬರುತ್ತಿದ್ದವಾದರೂ ಸರಿಯಾದ ಮಾಹಿತಿ ಇಲ್ಲದೆ ಅವು ಸಿಕ್ಕಿಬಿದ್ದಿರಲಿಲ್ಲ. ನಿನ್ನೆ ಕಲಬುರಗಿ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿಯಂತೆ ನಡೆದ ದಾಳಿಯಲ್ಲಿ ಅಬಕಾರಿ ಇಲಾಖೆ ಭದ್ರತಾ ಸಿಬ್ಬಂದಿ ಅಪಾರ ಬೆಲೆಬಾಳುವ ಮದ್ಯದ ಬಾಟಲ್, ಜೊತೆಗೇ ಬಸ್ ಎಲ್ಲವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಗೋವಾದಲ್ಲಿ ಮದ್ಯ ತುಂಬ ಅಗ್ಗ, ಹೀಗಾಗ ಅದನ್ನು ಅಗ್ಗದ ದರದಲ್ಲಿ ಖರೀದಿಸಿ ತಂದು ಕರ್ನಾಟಕ, ತೆಲಂಗಾಣದುದ್ದಕ್ಕೂ ದೊಡ್ಡ ಪಟ್ಟಣ, ನಗರಗಳಲ್ಲಿನ ಗಿರಾಕಿಗಳಿಗೆ ಈ ಬಸ್ಸಿನವರು ಮಾರುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಗೋವಾದಿಂದ ಹೊರಡುತ್ತಿದ್ದ ಈ ಖಾಸಗಿ ಟ್ರಾವಲ್ ಬಸ್ ದಾರಿಯುದ್ದಕ್ಕೂ ತನ್ನದೇ ಆದಂತಹ ಮದ್ಯಪ್ರೀಯ ಗಿರಾಕಿಗಳನ್ನು ಹೊಂದಿತ್ತು ಎನ್ನಲಾಗಿದೆ. ದಾರಿಯುದ್ದಕ್ಕೂ ಈ ಬಸ್ಸಿನ ಚಾಲಕರು, ಸಹಾಯಕರು ಎಲ್ಲರೂ ತಾವುಗೋವಾದಿಂದ ಖರೀದಿಸಿ ತರುತ್ತಿದ್ದ ಮದ್ಯವನ್ನ ಹಾಗೇ ಮಾರಾಟ ಮಾಡುತ್ತಲೇ ಸಾಗುತ್ತಿದ್ದರು ಎಂದೂ ವಿಚಾರಣೆಯಲ್ಲಿ ಬಸ್ಸಿನ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ.
ಸದ್ಯ ಕಲಬುರಗಿ ಅಬಕಾರಿ ಪೊಲೀಸರು ವೋಲ್ವೋ ಬಸ್, ಆ ಬಸ್ನ ಚಾಲಕ ಸೇರಿದಂತೆ ತೆಲಂಗಾಣ ಮೂಲದ ಮೂವರನ್ನು ಬಂಧಿಸಿದ್ದಾರೆ. ಸದರ್ ಜಪ್ತಿಯಾದ ವೋಲ್ವೋ ಬಸ್ ಎಸ್ವಿಆರ್ ಖಾಸಗಿ ಟ್ರಾವೆಲ್ಸ್ ಕಂಪನಿಗೆ ಸೇರಿದೆ.
ಈ ಸಂಬಂಧ ಅಬಕಾರಿ ಇಲಾಖೆಯ ಅಧಿಕಾರಿಗಳು ಸುದ್ದಿಗಾರರೊಂದಿಗೆ ಮಾತನಾಡಿದ್ದು ಗೋವಾ ರಾಜ್ಯದಿಂದ ಹೊರಡುವ ಖಾಸಗಿ ಬಸ್ಗಳಲ್ಲಿ ಇಂತಹ ಅಕ್ರಮ ಚಟುವಟಿಕೆ ನಡೆದ ಬಗ್ಗೆ ಸಾಕಷ್ಟು ದೂರುಗಳಿವೆ. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಈ ಯಶಸ್ವಿ ದಾಳಿ ಮಾಡಲಾಗಿದೆ ಎಂದಿದ್ದಾರೆ.
ಈಗಾಗಲೇ ತೆಲಂಗಾಣ ರಾಜ್ಯದ ಅಬಕಾರಿ ಇಲಾಖೆಯವರೂ ಸಹ ಈ ಸಂಬಂಧ ಕಟ್ಟುನಿಟ್ಟು ಆದೇಶ ಹೊರಡಿಸಿ ಸೂಚನೆ ನೀಡಿದ್ದರೂ ಸಹ ಖಾಸಗಿ ಟ್ರಾವೆಲ್ ಏಜೆನ್ಸಿಯ ಸಿಬ್ಬಂದಿ ತಮ್ಮ ಅಕ್ರಮ ಮದ್ಯ ಮಾರಾಟ ದಂಧೆ ಹಾಗೇ ಮುಂದುವರಿಸಿದ್ದರು ಎನ್ನಲಾಗಿದೆ.
ಹುಬ್ಬಳ್ಳಿಯಲ್ಲಿ ಹಂತಕನ ದಾಳಿಗೆ ಬಲಿಯಾಗಿರುವ ಅಂಜಲಿ ಅಂಬಿಗೇರ ಕುಟುಂಬಕ್ಕೆ ಭಾರಿ ಸಿಡಿಲು ಬಡಿದಿದೆ.
ಪತಂಜಲಿಯ ನವರತ್ನ ಇಲೈಚಿ ಸೋನ್ ಪಾಪ್ಡಿ ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ನಂತರ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಅಧಿಕಾರಿ ಮತ್ತು ಇತರ…
ಕಸ್ಟಮ್ಸ್ ಅಧಿಕಾರಿಗಳು 1.96 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ…
ಶನಿವಾರ ನಡೆದ ಹೈವೋಲ್ಟೇಜ್ ಆರ್ಸಿಬಿ ವರ್ಸಸ್ ಸಿಎಸ್ಕೆ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅತಿಕ್ರಮ ಪ್ರವೇಶ ಮಾಡುವುದಾಗಿ ವಿಡಿಯೋ ಪೋಸ್ಟ್…
ತೆರಿಗೆ ವಂಚನೆ ಮತ್ತು ಅಕ್ರಮ ಆಸ್ತಿ ಹೊಂದಿದ್ದ ಆರೋಪದ ಮೇಲೆ ಐಟಿ ಅಧಿಕಾರಿಗಳು ಆಗ್ರಾದಲ್ಲಿ ಶೂ ವ್ಯಾಪಾರಿ ರಾಮನಾಥ್ ಡಂಗ್…
ಐಪಿಎಲ್ ಬೆಟ್ಟಿಂಗ್ನಲ್ಲಿ ಲಕ್ಷ ಲಕ್ಷ ಹಣ ಕಳೆದುಕೊಂಡ ಯುವಕನೊಬ್ಬ ಲಾಡ್ಜ್ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನ…