Categories: ಕ್ರೈಮ್

ಕಾರು ಪಾರ್ಕ್‌ ಮಾಡುವ ವೇಳೆ ಘೋರ ದುರಂತ: ಕಾರು ಹರಿದು ಮಗು ಸಾವು

ಕಾಸರಗೋಡು: ಕಾರು ಪಾರ್ಕ್‌ ಮಾಡುವ ವೇಳೆ ಎಷ್ಟು ಜಾಗ್ರತೆಯಿದ್ದರೂ ಸಾಲದು. ಕೆಲವೊಮ್ಮೆ ನಮ್ಮ ಸಣ್ಣ ತಪ್ಪು ಜೀವವೇ ಹೋಗಬಹುದು ಅಂತಹುದೇ ಒಂದು ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಮನೆಯಿಂದ ಕಾರಿನಲ್ಲಿ ಹೊರ ಹೋಗಿದ್ದ ವೃದ್ಧರೊಬ್ಬರು ಮರಳಿ ವಾಪಸ್‌ ಬರುವ ವೇಳೆ ಅಚಾನಕ್‌ ಆಗಿ ಎಳೆಯ ಮಗುವೊಂದು ಕಾರಿನಡಿ ಬಿದ್ದ ಘಟನೆ ನಡೆದಿದೆ. ಕಾಸರಗೋಡಿನ ಉಪ್ಪಳ ಸೋಂಕಾಲ್‌ ನಲ್ಲಿ ಈ ಘಟನೆ ನಡೆದಿದೆ.

ಕಾರಿನಲ್ಲಿ ಮನೆಗೆ ಆಗಮಿಸಿದ ವೃದ್ಧ ಎದುರಿಗಿದ್ದ ಮುಗುವನ್ನು ಗಮನಿಸದೇ ಅದರ ಮೇಲೆ ಚಲಾಯಿಸಿದ್ದಾರೆ. ವಿಡಿಯೋದಲ್ಲಿರುವ ದೃಶ್ಯ ಹೀಗಿದೆ. ಕಾರು ಮನೆಯೆದುರಿಗೆ ಬರುತ್ತದೆ. ಆ ವೇಳೆ ಎರಡು ಮಕ್ಕಳು ಅಂಗಳದಲ್ಲಿದ್ದು, ಓರ್ವ ಚಿಕ್ಕ ಹುಡುಗ ಮಕ್ಕಳು ಆಟವಾಡುವ ಸೈಕಲ್‌ ಅನ್ನು ಬದಿಗೆ ಸರಿಸುತ್ತಾನೆ. ಅದೇ ವೇಳೆ ಎಳೆಯ ಮಗವೊಂದು ಕೂಡ ಅಲ್ಲಿ ಆಟವಾಡುತ್ತಿರುತ್ತದೆ. ಆದರೆ ಅದನ್ನು ಗಮನಿಸಿದೇ ಚಾಲಕ ಕಾರು ಚಲಾಯಿಸಿದ್ದಾರೆ. ಈ ವೇಳೆ ಮಗು ನೋವಿನಿಂದ ಜೋರಾಗಿ ಚೀರುತ್ತದೆ. ಅಲ್ಲದೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರು ಕೂಡ ಅಲ್ಲಿಗೆ ಬರುವುದು ದಾಖಲಾಗಿದೆ.

Ashika S

Recent Posts

ಬಿಸಿಲಿನ ತಾಪ, ಮೇವಿನ ಕೊರತೆಯಿಂದ ಸಾವಿಗೀಡಾಗುತ್ತಿವೆ ಸಾಕುಪ್ರಾಣಿಗಳು

ಹೆಚ್ಚುತ್ತಿರುವ ಬಿಸಿಲಿನ ತಾಪ ಹಾಗೂ ಸಮರ್ಪಕ ಮೇವು ದೊರಕದೆ ಕಾಡಂಚಿನ ಗ್ರಾಮಗಳ ಜಾನುವಾರು, ಸಾಕುಪ್ರಾಣಿಗಳು ಸಾವಿಗೀಡಾಗುತ್ತಿವೆ.

14 mins ago

ದೊಡ್ಡಬಳ್ಳಾಪುರ: ಹಳೇ ದ್ವೇಷಕ್ಕೆ ಯುವಕನ ಕತ್ತು ಕುಯ್ದು ಕೊಲೆ

ಹಳೇ ದ್ವೇಷಕ್ಕೆ ನಡುರಸ್ತೆಯಲ್ಲಿ ಯುವಕನ ಕತ್ತು ಕುಯ್ದು ಕೊಲೆ ಮಾಡಿದ ಘಟನೆ ದೊಡ್ಡಬಳ್ಳಾಪುರ ಹೊರವಲಯ ನವೋದಯ ಶಾಲೆಯ ಮುಂಭಾಗದಲ್ಲಿ ನಡೆದಿದೆ.

28 mins ago

ಕೇಂದ್ರ ಸೂಚನೆ ನೀಡಿದ ಕೂಡಲೇ ರಾಜ್ಯದಲ್ಲಿ ಸಿಎಎ ಅನುಷ್ಠಾನ: ಮೋಹನ್‌ ಯಾದವ್‌

ದೇಶಾದ್ಯಂತ ಚುನಾವಣೆಗ ಅಂತ್ಯಗೊಳುವುದಕ್ಕೂ ಮುನ್ನ ವಿವಿಧ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕ್ರಿಯೆ ಆರಂಭಿಸಬೇಕೆಂದು ಕೇಂದ್ರ ನಿರ್ಧರಿಸಿದೆ.

45 mins ago

ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಮಾನಸಿಕ ಅಸ್ವಸ್ಥ

ವ್ಯಕ್ತಿಯೊಬ್ಬ ತನ್ನ ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ  ಸೀತಾಪುರದಲ್ಲಿ ನಡೆದಿದೆ.

1 hour ago

ಕಲಬುರಗಿ: ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ

ಮದುವೆಗೆ ನಿರಾಕರಿಸಿದ್ದಕ್ಕೆ  ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ನಡೆದಿದೆ.

2 hours ago

ಮುಂದಿನ 6 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಮುಂದಿನ 6 ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ  ನೀಡಿದೆ.

2 hours ago