ಜೈಪುರ: ರಾಜಸ್ಥಾನದ ಝಲಾವರ್ ಜಿಲ್ಲೆಯ ಝಲ್ರಪಟನ್ನಲ್ಲಿ ನಡೆದ ಸ್ಥಳೀಯ ಜಾತ್ರೆಯಲ್ಲಿ ಪ್ರಸಾದ ಸ್ವೀಕರಿಸಿದ 42 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪ್ರಾಪ್ತ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ.
ಮೃತ ಬಾಲಕಿಯನ್ನು ಅಜಯ್ ಕಶ್ಯಪ್ ಅವರ ಪುತ್ರಿ ತನ್ವಿ ಕಶ್ಯಪ್ (7) ಎಂದು ಗುರುತಿಸಲಾಗಿದೆ. ಈ ಸಂಬಂಧ ಮಾತನಾಡಿರುವ ಜಲಾವರ್ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಗೌತಮ್ ನಾಗೌರಿ, ಕನಿಷ್ಠ 42 ಮಕ್ಕಳು ಫುಡ್ ಪಾಯ್ಸನ್ ಆಗಿದೆ ಎಂದು ದೂರಿದ್ದಾರೆ.
ಈ ಪೈಕಿ 16 ಮಕ್ಕಳನ್ನು ಪಿಐಸಿಯುನಲ್ಲಿ, 6 ಮಕ್ಕಳನ್ನು ವಾರ್ಡ್ನಲ್ಲಿ ಮತ್ತು 3 ಮಕ್ಕಳನ್ನು ಐಸಿಯುನಲ್ಲಿ ದಾಖಲಿಸಲಾಗಿದೆ. ಈ ಎಲ್ಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ. ಮಕ್ಕಳು ಸೇವಿಸಿದ ಆಹಾರ ಮಾದರಿಗಳನ್ನು ತೆಗೆದುಕೊಳ್ಳಲಾಗಿದ್ದು, ಪರೀಕ್ಷಾ ವರದಿ ಬಂದ ನಂತರ ಕಾರಣ ತಿಳಿಯಲಿದೆ ಎಂದು ತಿಳಿಸಿದ್ದಾರೆ.