ಬೆಂಗಳೂರು: ದಾಖಲೆ ಇಲ್ಲದೆ ರೈತರ ಹೆಸರಲ್ಲಿ 11,500 ಕೆಜಿ ಅಡಿಕೆ ಕಳ್ಳಸಾಗಣೆ ಮಾಡಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಅಸ್ಸಾಂ ಹಾಗೂ ಮಣಿಪುರದಿಂದ ಮಧ್ಯಪ್ರದೇಶ ಹಾಗೂ ಬೆಂಗಳೂರಿಗೆ 460 ಬ್ಯಾಗ್ ಅಡಿಕೆ ಸಾಗಾಟ ಮಾಡಲಾಗುತಿತ್ತು. ವಾಣಿಜ್ಯ ತೆರಿಗೆ ಇಲಾಖೆ ಜಾಗೃತ ದಳದ ಅಧಿಕಾರಿಗಳಿಂದ ಸದ್ಯ ಅಡಿಕೆಯನ್ನು ವಶಕ್ಕೆ ಪಡೆದಿದ್ದು, ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಕರಣ ಭೇದಿಸಿದ್ದಾರೆ.
ದಾಖಲೆ ಇಲ್ಲದೆ 460 ಬ್ಯಾಗ್ ಅಂದರೆ 11.500 ಕೆಜಿ ಅಡಿಕೆ ಕಳ್ಳಸಾಗಣೆ ಮಾಡಿರುವಂತಹ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಮಯನ್ಮಾರ್ ನಿಂದ ಅಡಿಕೆಯನ್ನ ಕಳ್ಳಸಾಗಣೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಕಡಿಮೆ ಗುಣಮಟ್ಟ ಹಾಗೂ ಕಡಿಮೆ ಬೆಲೆಯ ಅಡಿಕೆ ತಂದು ಸ್ಥಳೀಯ ಅಡಿಕೆಯಲ್ಲಿ ಕಲಬೆರಕೆ ಮಾಡುವ ಸಂಚು ಹೂಡಲಾಗಿತ್ತು ಎಂದು ಶಂಕಿಸಲಾಗಿದೆ.