ಇಂದಿನ ರೆಸಿಪಿ ಕುಡ್ಲ ಸ್ಟೈಲ್ ನಾಟಿ ಕೋಳಿ ಸಾರು

ನಾಟಿ ಕೋಳಿ ಸಾರು ರುಚಿಗೆ ಬೇರಾವುದು ಸಾಟಿಯಿಲ್ಲ ಬಿಡಿ. ಹಬ್ಬಕ್ಕೆ, ರಜೆ ಸಮಯದಲ್ಲಿ ನಾಟಿ ಕೋಳಿ ಸಾರು ಪ್ರತಿ ಮನೆಯಲ್ಲೂ ಸಾಮಾನ್ಯವಾಗಿರುತ್ತೆ. ಆದರೆ ಕರಾವಳಿ ಭಾಗದಲ್ಲಿ ಮನೆಗೆ ನೆಂಟರು ಬಂದರೆ ಸಾಕು ಅಂಗಳದಲ್ಲಿದ್ದ ಕೋಳಿಯನ್ನು ಹಿಡಿದು ಹಾಗೇ ಕೋಳಿ ಸಾಂಬಾರ್ ಗೆ ರೆಡಿ ಮಾಡುತ್ತಾರೆ. ತಿನ್ನಲು ಎರಡು ತುಂಡು ಸಿಕ್ಕರೂ ಸಾಕು ಅದಲ್ಲಿರುವ ರುಚಿ ಬೇರಾವು ಕೋಳಿ ಮಾಂಸದಲ್ಲಿ ಸಿಗುವುದಿಲ್ಲ ಬಿಡಿ.

ಕೋಳಿ ಸಾರು ಮಾಡಲು ಬೇಕಾಗುವ ಸಾಮಾಗ್ರಿಗಳು
ನಾಟಿ ಕೋಳಿ
ಮೆಣಸು- 10ರಿಂದ 15
ಕೊತ್ತಂಬರಿ ಬೀಜ- 3 ಚಮಚ
ಸಾಸಿವೆ- 1 ಚಮಚ
ಜೀರಿಗೆ- 1 ಚಮಚ
ಮೆಂತ್ಯೆ-5 ಕಾಳು
ಕಾಳು ಮೆಣಸು 8-9ಕಾಳು
ತೆಂಗಿನಕಾಯಿ ತುರಿ- 1ಕಪ್
ಹರಿಶಿನ ಹುಡಿ-1 ಚಮಚ
ಈರುಳ್ಳಿ-2
ಹುಳಿ ಸ್ವಲ್ಪ, ಎಣ್ಣೆ, ಉಪ್ಪು ಮತ್ತು ಬೆಳ್ಳುಳ್ಳಿ

ಮಾಡುವ ವಿಧಾನ:
1.ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಟ್ ಮಾಡಿ ಇಟ್ಟುಕೊಂಡ ಈರುಳ್ಳಿಯನ್ನು ಕೆಂಪಾಗೆ ಆಗುವವರೆಗೆ ಹುರಿಯಿರಿ. ನಂತರ ಅದೇ ಬಾಣಲೆಯಲ್ಲಿ ಕೊತ್ತಂಬರಿ ಬೀಜ, ಜೀರಿಗೆ, ಸಾಸಿವೆ, ಮೆಂತ್ಯೆ, ಕಾಳುಮೆಣಸು ಹಾಗೂ ಬೆಳ್ಳುಳ್ಳಿಯನ್ನು ಹಾಕಿ 1 ನಿಮಿಷ ಹುರಿಯಿರಿ. ನಂತರ ಅದೇ ಬಾಣಲೆಯಲ್ಲಿ ಮೆಣಸನ್ನು ಹಾಕಿ ಒಂದು ನಿಮಿಷ ಹುರಿಯಿರಿ. ಇದೀಗ ಎಲ್ಲ ಮಿಶ್ರಣವನ್ನು ಮಿಕ್ಸ್ ಗೆ ಹಾಕಿ ನಂತರ ಒಂದು ಕಪ್ ತೆಂಗಿನಕಾಯಿ ತುರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

2.ಇದೀಗ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಒಗ್ಗರಣೆ ಕೊಟ್ಟು ನಂತರ ಈರುಳ್ಳಿ ಸೇರಿಸಿ ಕುರಿದು ಅದಕ್ಕೆ ಕ್ಲೀನ್ ಮಾಡಿ ಕಟ್ ಮಾಡಿ ಇಟ್ಟುಕೊಂಡ ನಾಟಿಕೋಳಿಯನ್ನು ಹಾಕಿ. ನಂತರ 15ನಿಮಿಷ ಬಿಟ್ಟು ಅದಕ್ಕೆ ಮಿಕ್ಸ್ ಮಾಡಿ ಇಟ್ಟುಕೊಟ್ಟ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಬೇಯಿಸಿ. ಇದೀಗ ರುಚಿಕರವಾದ ನಾಟಿ ಕೋಳಿ ಸಾರು ಸವಿಯಲು ಸಿದ್ದ. ರೊಟ್ಟಿ ಹಾಗೂ ಅನ್ನದ ಜತೆ ತುಂಬಾ ಚೆನ್ನಾಗಿರುತ್ತೆ.

Desk

Recent Posts

ಈಜಲು ಹೋಗಿ‌ದ್ದ ಮೂವರು ನೀರುಪಾಲು: 5 ಜನ ಪ್ರಾಣಾಪಾಯದಿಂದ ಪಾರು

ಈಜಲು ಹೋಗಿ‌ದ್ದ ಮೂವರು ನೀರುಪಾಲಾಗಿರುವ ಘಟನೆ ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬಳಿ ನಡೆದಿದೆ.

11 mins ago

“ಪಟ್ಲ ಸಂಭ್ರಮ” ಯಶಸ್ವಿಗೊಳಿಸಲು ಪಟ್ಲ ಸತೀಶ್ ಶೆಟ್ಟಿ ಕರೆ

ಮೇ 26 ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ "ಪಟ್ಲ ಸಂಭ್ರಮ" ನಮ್ಮೆಲ್ಲರ ಮನೆಯ ಕಾರ್ಯಕ್ರಮ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಟ್ಲ…

21 mins ago

ಮಂಗಳೂರು: ಕರ್ತವ್ಯದಲ್ಲಿದ್ದ ವಾಹನದ ಬಗ್ಗೆ ಸುಳ್ಳು ಸಂದೇಶ ರವಾನಿಸಿದ ಸಾರ್ವಜನಿಕ

ಕಳೆದ ದಿನ (ಮೇ 16) ಸಂಜೆ ಮಂಗಳೂರು ನಗರದ ಕುಂಟಿಕಾನ ಬಳಿ ಕರ್ತವ್ಯದಲ್ಲಿದ್ದ ಕೆಎ-19-ಜಿ-1023 ನೊಂದಣೆ ಸಂಖ್ಯೆಯ ಹೆದ್ದಾರಿ ಗಸ್ತು…

26 mins ago

ಹೊಸ ರುಚಿ: ಅವಲಕ್ಕಿ ಹುಳಿ ಮಾಡುವುದು ಹೇಗೆ?

ಗಡಿಬಿಡಿಯ ಜೀವನದಲ್ಲಿ ಬೆಳಗ್ಗಿನ ಉಪಹಾರ ಮಾಡಿಕೊಂಡು ಆಫೀಸಿಗೆ ಹೋಗುವುದೇ ಸವಾಲ್. ಇಂತಹ  ಸಂದರ್ಭದಲ್ಲಿ ಅವಲಕ್ಕಿ ಇದ್ದರೆ ಅದರಿಂದ ಹುಳಿ ತಯಾರಿಸಿ…

33 mins ago

ಬಾವಿಗೆ ಬಿದ್ದ ಮಗುವನ್ನು ರಕ್ಷಿಸಿದ ಯುವಕನಿಗೆ ಮೆಚ್ಚುಗೆಯ ಸುರಿಮಳೆ

ಸರಪಾಡಿಯ ಹಂಚಿಕಟ್ಟೆಯಲ್ಲಿ ಬಾವಿಗೆ ಬಿದ್ದ ಮಗುವೊಂದನ್ನು ತನ್ನ ಪ್ರಾಣದ ಹಂಗನ್ನು ತೊರೆದು ತುಂಡಾಗುವ ಸ್ಥಿತಿಯಲ್ಲಿದ್ದ ಹಳೆಯ ಹಗ್ಗವನ್ನು ಬಳಸಿ ಮೇಲಕ್ಕೆತ್ತಿದ…

43 mins ago

ಶ್ರೀರಾಮ ಸೇನೆ ರಾಜ್ಯಾಧ್ಯಕ್ಷರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲು

ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ, ಶ್ರೀರಾಮ ಸೇನೆಯ ಅಧ್ಯಕ್ಷ ಸಿದ್ದಲಿಂಗ ಶ್ರೀಗಳ ವಿರುದ್ಧ ಕಲಬುಗಿಯಲ್ಲಿ ಜಾತಿ…

47 mins ago