ಇತರೆ

ಸುದೀರ್ಘ 27 ದಿನ, ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಪ್ರಯಾಣ ಮಾಡಿ ಲಡಾಖ್ ತಲುಪಿದ ವ್ಯಕ್ತಿ

ಲಡಾಖ್‌ನ ಸೌಂದರ್ಯವನ್ನು ಬ್ಲಾಗರ್‌ಗಳು ಇಂಚಿಂಚಾಗಿ ಕಣ್ಣ ಮುಂದೆ ಇಡುತ್ತಿರುವಂತೆ ದೇಶಾದ್ಯಂತ ಅಲ್ಲಿಗೆ ಹೋಗಿ ಬರಬೇಕೆನ್ನುವ ಬಯಕೆ ಜನರಲ್ಲಿ ಹೆಚ್ಚಾಗುತ್ತಿದೆ.

ಉತ್ತರ ಭಾರತದ ಈ ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಲು ಹೈದರಾಬಾದ್‌ನ ದಿಲೀಪ್ ಕುಮಾರ್‌ ಎಂಬ ಈತ ಹುಡುಕಿಕೊಂಡ ಹಾದಿ ಮಾತ್ರ ಅದ್ಭುತವಾದದ್ದೇ ಸರಿ. ತಮ್ಮ ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಹೈದರಾಬಾದ್‌ನಿಂದ ಹಿಮಾಲಯದ ಪ್ರದೇಶಕ್ಕೆ ಹೊರಟ ದಿಲೀಪ್, 27 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಲಡಾಖ್ ತಲುಪಿದ್ದಾರೆ.

ಸೆಪ್ಟೆಂಬರ್‌ 8ರಂದು ತಮ್ಮ ಟ್ರಿಪ್ ಆರಂಭಿಸಿದ 30 ವರ್ಷದ ದಿಲೀಪ್‌, ಪ್ರತಿನಿತ್ಯ 8-10 ಗಂಟೆಗಳ ಕಾಲ ಸ್ಕೂಟರ್‌ ಓಡಿಸಿಕೊಂಡು ಹೋಗಿದ್ದಾರೆ. ಭಾರೀ ವಾಹನಗಳು ಓಡಾಡುವ ರಾಷ್ಟ್ರೀಯ ಹೆದ್ದಾರಿಗಳಲ್ಲೇ ದಿಲೀಪ್‌ರ ಬಹುತೇಕ ಪಯಣ ಸಾಗಿದೆ. ನಾಗ್ಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಟ್ಟದೊಂದು ಅಪಘಾತಕ್ಕೆ ತುತ್ತಾದ ದಿಲೀಪ್‌ಗೆ ಅದರಿಂದ ಹೆಚ್ಚೇನೂ ಗಾಯವಾಗಿರಲಿಲ್ಲವಂತೆ. ಆದರೆ ಅವರ ಸ್ಕೂಟರ್‌ ಅನೇಕ ರಿಪೇರಿಗಳಿಗೆ ಒಳಗಾಗಬೇಕಾಗಿ ಬಂದಿದೆ.

ಪ್ರಯಾಣವೆಂದರೆ ಬಹಳ ಇಷ್ಟ ಪಡುವ ದಿಲೀಪ್ ಇದಕ್ಕಾಗಿ ಸಮಯ ಹೊಂದಿಸಿಕೊಳ್ಳಲೆಂದೇ ಪೂರ್ಣಾವಧಿ ಕೆಲಸಕ್ಕೆ ಸೇರಿಯೇ ಇಲ್ಲವಂತೆ.
ತ್ಸೋ ಮೊರಿರಿ ಕೆರೆಯ ಬಳಿ 60ಕಿಮೀ ಹಾದಿಯನ್ನು ರಸ್ತೆಯಿಂದ ಹೊರಗೆ ಕ್ರಮಿಸಬೇಕಾಗಿ ಬಂದಿದ್ದು, ಈ ವೇಳೆ ತಮ್ಮ ಗಾಡಿಯಲ್ಲಿ ಗರಿಷ್ಠ 10 ಕಿಮೀನಷ್ಟು ವೇಗದಲ್ಲಿ ಮಾತ್ರವೇ ಸಂಚರಿಸಬೇಕಾಗಿ ಬಂದಿತ್ತಂತೆ. ಹಿಮಾಲಯದ ಪ್ರದೇಶದಲ್ಲಿ ಪ್ರತಿನಿತ್ಯ 200-250ಕಿಮೀ ಕ್ರಮಿಸುತ್ತಿದ್ದರಂತೆ.

ರಾತ್ರಿಗಳಲ್ಲಿ ಟೋಲ್ ಪ್ಲಾಜ಼ಾ, ಹಳ್ಳಿಗಳು ಅಥವಾ ಪೆಟ್ರೋಲ್ ಪಂಪ್‌ಗಳ ಬಳಿ ಮಲಗುತ್ತಿದ್ದ ದಿಲೀಪ್, ಯಾವತ್ತೂ ನಿರ್ಜನ ಪ್ರದೇಶಗಳಲ್ಲಿ ಮಲಗುತ್ತಿರಲಿಲ್ಲವಂತೆ. ತಮ್ಮ ಪ್ರಯಾಣದುದ್ದಕ್ಕೂ ಸಂಚಾರಿಗಳ ಸಮೂಹದೊಂದಿಗೆ ಬೆರೆಯುತ್ತಿದ್ದರಂತೆ ದಿಲೀಪ್.

ದೇಶದ ಈಶಾನ್ಯ ಪ್ರದೇಶದತ್ತ ಕುಮಾರ್‌ ತಮ್ಮ ಮುಂದಿನ ಪಯಣವನ್ನು ಪ್ಲಾನ್ ಮಾಡಿದ್ದಾರಂತೆ.

Gayathri SG

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

8 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

9 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

9 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

9 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

10 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

10 hours ago