ವಿಜಯವಾಡ: ಎನ್ಟಿಆರ್ ಅವರ ಶತಮಾನೋತ್ಸವ ಸಮಾರಂಭದಲ್ಲಿ ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಪಾಲ್ಗೊಂಡಿದ್ದು, ಹಲವು ಆಸಕ್ತಿಕರ ವಿಚಾರ ಹಂಚಿಕೊಂಡಿದ್ದಾರೆ.
ಈ ಜನಸಂದಣಿಯನ್ನು ನೋಡಿದರೇ ನನಗೆ ರಾಜಕೀಯದ ಬಗ್ಗೆ ಮಾತನಾಡಬೇಕು ಎಂದು ಭಾವನೆಯಾಗುತ್ತದೆ. ಆದರೆ ಈ ಹಿಂದಿನ ಕೆಲ ಅನುಭವ ನನ್ನನ್ನು ತಡೆಯುತ್ತದೆ ಎಂದು ಹೇಳಿದ್ದಾರೆ.
ಅನಾರೋಗ್ಯ ಕಾರಣದಿಂದ 2021ರಲ್ಲಿ ರಾಜಕೀಯ ಪ್ರವೇಶಿಸುವ ತಮ್ಮ ಯೋಜನೆ ಕೈಬಿಟ್ಟಿರುವ ರಜನಿ ತಮ್ಮ ಆಲೋಚನೆ ಹಂಚಿಕೊಂಡಿದ್ದಾರೆ.
ಎನ್ಟಿಆರ್ ಅವರಿಂದ ನಾನು ಪ್ರೇರಿಪಿತನಾಗಿದ್ದೆ ಎಂಬುದನ್ನು ನೆನಪಿಸಿಕೊಂಡು. ಅವರ ಪುತ್ರ ಪ್ರಮುಖ ಟಾಲಿವುಡ್ ನಟ ಬಾಲಕೃಷ್ಣ ಬಾಲಕೃಷ್ಣ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ಟಿಡಿಪಿ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರ ದೃಷ್ಟಿಯನ್ನು ಈ ಸಂದರ್ಭ ಶ್ಲಾಘಿಸಿದರು. ತಾನು ಪೋಷಕ ನಟ ಮತ್ತು ಖಳನಾಯಕನಾಗಿ ಕೆಲಸ ಮಾಡುತ್ತಿದ್ದಾಗ ನಿರ್ದೇಶಕರೊಬ್ಬರು ತಮ್ಮ ಬಳಿಗೆ ಬಂದು, ಹೀರೋ ಆಗಿ ಚಿತ್ರದಲ್ಲಿ ನಟಿಸುತ್ತೀಯಾ ಎಂದು ಕೇಳಿದರು. ಮೊದಲು ನನಗೆ ಈ ಬಗ್ಗೆ ಇಷ್ಟವಿರಲಿಲ್ಲ. ಚಿತ್ರದ ಹೆಸರು ಭೈರವಿ ಎಂದು ಕೇಳಿದಾಕ್ಷಣ ಒಪ್ಪಿಕೊಂಡೆ ಎಂದು ನೆನಪು ಮಾಡಿಕೊಂಡಿದ್ದಾರೆ. ಶ್ರೀಕೃಷ್ಣ ಪಾಂಡವೀಯಂ’ ಚಿತ್ರದಲ್ಲಿ ಎನ್ಟಿಆರ್ ನಿರ್ವಹಿಸಿದ ದುರ್ಯೋಧನನ ಪಾತ್ರದಿಂದ ಪ್ರಭಾವಿತನಾಗಿದ್ದೆ ಎಂದು ಸ್ಮರಿಸಿದರು.
“ನಾನು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಗ, ನಾಟಕವೊಂದರಲ್ಲಿ ಎನ್ಟಿಆರ್ ನಿರ್ವಹಿಸಿದ ದುರ್ಯೋಧನನ ಪಾತ್ರವನ್ನು ನಿರ್ವಹಿಸಿದ್ದೆ. ಅದುವೇ ನನಗೆ ನಟನೆಯಲ್ಲಿ ಆಸಕ್ತಿ ಮೂಡಲು ಕಾರಣವಾಯಿತು ಎಂದರು.