Categories: ಮನರಂಜನೆ

ರಾಜಕೀಯ ಮೈಲೇಜ್‌ಗಾಗಿ ಸ್ವಾತಂತ್ರ್ಯ ಹೋರಾಟ: ವಿವಾದಿತ “ವೀರ್‌ ಸಾವರ್ಕರ್‌” ಟೀಸರ್‌ ಬಿಡುಗಡೆ

ಮುಂಬೈ: ವೀರ್‌ ಸಾವರ್ಕರ್‌ ಅವರ ಜೀವನಾಧಾರಿತ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರದ ಟೀಸರ್ ಅನ್ನು ಅವರ (ಸಾವರ್ಕರ್‌) ಅವರ 140ನೇ ಜನ್ಮದಿನವಾದ ಮೇ 28ರಂದು ಬಿಡುಗಡೆಗೊಳಿಸಲಾಯಿತು.

ಬಿಡುಗಡೆಗೆ ಮೊದಲೇ ಈಗಾಗಲೇ ವಿವಾದಕ್ಕೆ ಈಡಾಗಿರುವ ಈ ಚಿತ್ರವನ್ನು ನಟ ರಣದೀಪ್ ಹೂಡಾ ನಿರ್ದೇಶಿಸಿದ್ದಾರೆ. ಉತ್ಕರ್ಷ್ ನೈತಾನಿ ಕಥೆ ಬರೆದಿದ್ದಾರೆ.

ರಣ್‌ದೀಪ್‌ ಅವರ ಹಿನ್ನಲೆ ಧ್ವನಿಯ ಟೀಸ್‌ರನಲ್ಲಿ ಹೀಗಿದೆ. ಜನರು ಶಸ್ತ್ರಸಜ್ಜಿತ ಹೋರಾಟ ನಡೆಸಿದ್ದರೇ 90 ವರ್ಷಗಳ ಸ್ವಾತಂತ್ರ್ಯ ಹೋರಾಟ ಅತಿ ಬೇಗನೆ ಮುಗಿಯುತ್ತಿತ್ತು ಎಂದು ಹೇಳಲಾಗಿದೆ.

ಅಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಕೆಲವರು ರಾಜಕೀಯ ಮೈಲೇಜ್‌ ಪಡೆಯಲು ಬಯಸಿದ್ದರು ಎಂಬುದನ್ನು ಟೀಸರ್‌ನಲ್ಲಿ ಹೇಳಲಾಗಿದೆ.

ಚಿತ್ರದ ಟೀಸರ್‌ ಬಿಡುಗಡೆ ವೇಳೆ ಮಾತನಾಡಿದ ಹೂಡಾ ಹೀಗೆ ಹೇಳಿದ್ದಾರೆ. ಸಾವರ್ಕರ್‌ ಅವರ ಚಿತ್ರ ಮಾಡುವ ಮೊದಲು ಅವರ ಜೀವನ ಚರಿತ್ರೆಗಾಗಿ ಮಾಹಿತಿ ಕಲೆ ಹಾಕುವಾಗ ಹೋರಾಟದ ಹಾದಿ, ಬ್ರಿಟಿಷರ ವಿರುದ್ಧ ಕೆಚ್ಚು ಕಂಡು ರೋಮಾಂಚಿತನಾದೆ. ಅವರ ಜನ್ಮ ವಾರ್ಷಿಕೋತ್ಸವ ವೇಳೆ ಟೀಸರ್‌ ಹಂಚಿಕೊಳ್ಳುತ್ತಿರುವುದುಕ್ಕೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.

ಟೀಸರ್‌ನಲ್ಲಿ ಬ್ರಿಟಿಷರು ವೀರ್‌ ಸಾವರ್ಕರ್‌ ಅವರನ್ನು ಬ್ರಿಟಿಷರಿಗೆ ಮೋಸ್ಟ್ ವಾಂಟೆಡ್ ಇಂಡಿಯನ್” ಎಂದು ಕರೆಯುತ್ತಿರುವುದು ಉಲ್ಲೇಖವಾಗಿದೆ. ಅಲ್ಲದೆ “ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಅವರನ್ನು ಕ್ರಾಂತಿಕಾರಿಗಳಾಗಿ ಪರವರ್ತನೆಗಳೊಳ್ಳಲು ಪ್ರೇರೇಪಿಸಿದರು ಎಂಬ ಅಂಶ ಉಲ್ಲೇಖವಾಗಿದೆ. ಮಹಾತ್ಮ ಗಾಂಧೀಜಿ ಹಿಂಸೆ ತತ್ವಗಳನ್ನು ಆಧರಿಸಿ ಹಠಮಾರಿಯಾಗದೇ ಕ್ರಾಂತಿಕಾರಿಗಳಿಗೆ ಬೆಂಬಲ ನೀಡಿದ್ದರೆ 1947ಕ್ಕಿಂತ 35 ವರ್ಷಗಳ ಹಿಂದೆಯೇ ಭಾರತ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗುತ್ತಿತ್ತು ಎಂಬುದು ಚಿತ್ರದ ಟೀಸರ್‌ನ ಪ್ರಮುಖ ಅಂಶವಾಗಿದೆ.

Sneha Gowda

Recent Posts

ಮಲ್ಪೆ ಬೀಚ್ ನ‌ ಸೊಬಗನ್ನು ಕೆಡಿಸುತ್ತಿವೆ ಬಿಯರ್ ಬಾಟಲ್, ಪ್ಲಾಸ್ಟಿಕ್ ತ್ಯಾಜ್ಯ

ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣ ಮಲ್ಪೆ ಬೀಚ್ ಇದೀಗ ಕಸದ ಕೊಂಪೆಯಾಗಿ ಮಾರ್ಪಡುತ್ತಿದೆ. ಎಲ್ಲೆಂದರಲ್ಲಿ ಬಿಸಾಡಿರುವ ಪ್ಲಾಸ್ಟಿಕ್ ಬಾಟಲ್, ಬಿಯರ್…

6 mins ago

ಗಣೇಶನ ಮೂರ್ತಿ ಜೊತೆ 3ನೇ ಬಾರಿ ನಭಕ್ಕೆ ಹಾರಿದ ಸುನೀತಾ ವಿಲಿಯಮ್ಸ್‌

ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಇದೀಗ ಮತ್ತೆ ಬಾಹ್ಯಾಕಾಶಕ್ಕೆ ಹಾರಲು ಸಿದ್ದರಾಗಿದ್ದು, ಇಂದು ಅಂತಾರಾಷ್ಟ್ಪೀಯ ಬಾಹ್ಯಾಕಾಶ ನಿಲ್ದಾಣಕ್ಕೆ…

14 mins ago

ಲೋಕಸಭೆ ಚುನಾವಣೆ : ಕುಟುಂಬ ಸಮೇತ ಮತದಾನ ಮಾಡಿದ ರಮೇಶ್ ಜಿಗ್ಜಣಿಗಿ

ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಸದ ರಮೇಶ ಜಿಗಜಿಣಗಿ ಅವರು ಕುಟುಂಬ ಸಮೇತ ಮಂಗಳವಾರ ಬೆಳಿಗ್ಗೆ ಮತ ಚಲಾಯಿಸಿದರು

17 mins ago

317 ಕೆಜಿ ತೂಕದ ಬ್ರಿಟನ್‌ನ ಅತಿ ಭಾರದ ವ್ಯಕ್ತಿ ನಿಧನ

ಬ್ರಿಟನ್‌ನ ಅತಿ ಭಾರದ ವ್ಯಕ್ತಿ ಜೇಸನ್ ಹಾಲ್ಟನ್ ನಿಧನ ಹೊಂದಿದ್ದಾರೆ. ತಮ್ಮ 34ನೇ ಹುಟ್ಟುಹಬ್ಬದ ಒಂದು ವಾರ ಮೊದಲು ಅಂಗಾಂಗ…

29 mins ago

ದೇವರ’ ಸಿನಿಮಾ ತಂಡದ ಮೇಲೆ ಜೇನುಹುಳುಗಳ ದಾಳಿ : ಕೆಲವರಿಗೆ ಗಾಯ

 ದೇವರ’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಸಿನಿಮಾ ಶೂಟಿಂಗ್ ವೇಳೆ ತಂಡದ ಮೇಲೆ ಜೇನು ಹುಳುಗಳು ದಾಳಿ ನಡೆಸಿವೆ ಎಂದು…

49 mins ago

ಡ್ರೆಸ್ಸಿಂಗ್ ರೂಮ್​ನಲ್ಲಿ ಕಣ್ಣೀರಿಟ್ಟ ರೋಹಿತ್ ಶರ್ಮಾ; ಯಾಕೆ ಗೊತ್ತ ?

ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಸೋಮವಾರ ನಡೆದ 55ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ…

54 mins ago