Categories: ಮನರಂಜನೆ

50ನೇ ವಯಸ್ಸಿನಲ್ಲಿ ಪದವಿ ಪಡೆದ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ

ಮುಂಬೈ: ನಟ ಅಕ್ಷಯ್ ಕುಮಾರ್  ಅವರ ಪತ್ನಿ ಟ್ವಿಂಕಲ್ ಖನ್ನಾ ತಮ್ಮ 50ನೇ ವಯಸ್ಸಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಅಕ್ಷಯ್ ಕುಮಾರ್ ತಮ್ಮ ಪತ್ನಿ ಜೊತೆಗಿರುವ ಫೋಟೋ ಪೋಸ್ಟ್ ಮಾಡಿ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಪತ್ನಿ ಓದುತ್ತೇನೆ ಎಂದಾಗ ಅಕ್ಷಯ್ ಕುಮಾರ್ ಬೆಂಬಲ ನೀಡಿದರು. ಈ ಬೆಂಬಲದಿಂದ ಟ್ವಿಂಕಲ್ ಅವರು ಪದವಿ ಪೂರ್ಣಗೊಳಿಸಿದ್ದಾರೆ. ಈ ಸಂತೋಷದ ಕ್ಷಣವನ್ನು ಅಕ್ಷಯ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

‘ಎರಡು ವರ್ಷಗಳ ಹಿಂದೆ ನೀನು ಮತ್ತೆ ಓದಬೇಕು ಎಂದು ಹೇಳಿದಾಗ ನನಗೆ ತುಂಬಾ ಆಶ್ಚರ್ಯವಾಯಿತು. ಆದರೆ ನೀನು ಅದಕ್ಕಾಗಿ ಶ್ರಮಿಸುತ್ತಿರುವುದನ್ನು ನೋಡಿದಾಗ ನಾನು ಸೂಪರ್ ವುಮನ್ ಮದುವೆಯಾಗಿದ್ದೇನೆ ಎಂಬುದು ಗೊತ್ತಾಯಿತು. ಮನೆ, ವೃತ್ತಿ ಬದುಕು, ಮಕ್ಕಳ ಪಾಲನೆ ಜೊತೆ ವಿದ್ಯಾರ್ಥಿ ಜೀವನವನ್ನು ನೀನು ಚೆನ್ನಾಗಿ ನಿರ್ವಹಿಸಿದ್ದೀಯ. ನಾನು ಸ್ವಲ್ಪ ಹೆಚ್ಚು ಅಧ್ಯಯನ ಮಾಡಿದ್ದರೆ ನಿನ್ನ ಬಗ್ಗೆ ಎಷ್ಟು ಹೆಮ್ಮೆಪಡುತ್ತೇನೆ ಎಂದು ಹೇಳಲು ಸಾಕಷ್ಟು ಪದಗಳು ಸಿಗುತ್ತಿದ್ದವು ಎಂದು ನನಗೆ ಅನಿಸುತ್ತಿದೆ. ಟೀನಾ.. ಆಲ್ ದಿ ಬೆಸ್ಟ್ ಮತ್ತು ಐ ಲವ್ ಯೂ’ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಈ ಪೋಸ್ಟ್‌ಗೆ ಟ್ವಿಂಕಲ್ ಕೂಡ ಕಾಮೆಂಟ್ ಮಾಡಿದ್ದು. ‘ನನಗೆ ಎತ್ತರಕ್ಕೆ ಹಾರಲು ಪ್ರೋತ್ಸಾಹಿಸುವ ನಿನ್ನಂತ ಸಂಗಾತಿ ಸಿಕ್ಕಿರುವುದು ನನ್ನ ಅದೃಷ್ಟ. ನಾನು ಬಿದ್ದಾಗ ನನ್ನನ್ನು ಎತ್ತಿಕೊಳ್ಳಲು ನೀನು ಯಾವಾಗಲೂ ಸಿದ್ಧನಾಗಿರುತ್ತೀಯಾ. ನಮ್ಮ ದಾಂಪತ್ಯಕ್ಕೆ 23 ವರ್ಷಗಳು’ ಎಂದು ಬರೆದುಕೊಂಡಿದ್ದಾರೆ.

ನಟಿಯಾಗಿ ಈ ಮೊದಲು ಗುರುತಿಸಿಕೊಂಡರು. ನಂತರ ಅವರು ನಟನೆ ತೊರೆದರು. ಆ ಬಳಿಕ ಅಂಕಣಕಾರ್ತಿಯಾಗಿ, ಇಂಟೀರಿಯರ್ ಡಿಸೈನರ್ ಆಗಿ ಗುರುತಿಸಿಕೊಂಡು  ಈಗ ಟ್ವಿಂಕಲ್ ಪದವಿ ಕ್ಯಾಪ್ ಧರಿಸಿ ಮಿಂಚಿದ್ದಾರೆ.

ಟ್ವಿಂಕಲ್ ಲಂಡನ್ ವಿಶ್ವವಿದ್ಯಾಲಯದ ಗೋಲ್ಡ್ ಸ್ಮಿತ್ಸ್‌ನಲ್ಲಿ ಫಿಕ್ಷನ್ ಬರವಣಿಗೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

Ashika S

Recent Posts

“ಕಾರು ಅಪಘಾತದಲ್ಲಿ ಮೃತಪಟ್ಟಿಲ್ಲ ಕಿರುತೆರೆ ನಟಿ ಪವಿತ್ರಾ”

ಕಿರುತೆರೆ ಪವಿತ್ರಾ ಕಾರು ಅಪಘಾತದಲ್ಲಿ ಮೃತಪಟ್ಟೇ ಇಲ್ಲ ಎಂದು ಗೆಳೆಯ ಚಂದು ಅವರು ಹೇಳಿದ್ದಾರೆ. ಅಲ್ಲಿ ನಡೆದಿದ್ದು ಏನು ಎಂಬುದನ್ನು…

16 mins ago

ಥಾಯ್ಲೆಂಡ್‌ ಓಪನ್‌ ಟೂರ್ನಿ : ಗೆಲುವಿನ ಭರವಸೆಯಲ್ಲಿ ಸಾತ್ವಿಕ್-ಚಿರಾಗ್ ಜೋಡಿ

ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಪಂದ್ಯಾವಳಿ ಇಂದು(ಮಂಗಳವಾರ) ಆರಂಭಗೊಳ್ಳಲಿದ್ದು ಲಕ್ಷ್ಯ ಸೇನ್‌ ಮತ್ತು ಪಿ.ವಿ. ಸಿಂಧು ಟೂರ್ನಿಯಿಂದ ಹಿಂದೆ…

21 mins ago

12 ರಾಜ್ಯದ ಸಿಎಂಗಳ ಸಮ್ಮುಖದಲ್ಲಿ ಇಂದು ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ಇಂದು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ ನಡೆಯಲಿದ್ದು, ಈ ವೇಳೆ…

38 mins ago

ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನ

ಮುಂದಿನ ತಿಂಗಳು ಅಮೆರಿಕ ಮತ್ತು ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನೊಂದಿಗೆ ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ರಾಹುಲ್ ದ್ರಾವಿಡ್…

1 hour ago

ಕೋಲ್ಕತ್ತಾ-ಗುಜರಾತ್‌ ಪಂದ್ಯ ರದ್ದು : ಟೂರ್ನಿಯಿಂದ ಹೊರಬಿದ್ದ​ ಟೈಟಾನ್ಸ್​ ಪಡೆ

: ಕೆಕೆಆರ್​ ವಿರುದ್ಧದ ಸೋಮವಾರದ ಐಪಿಎಲ್​ ಪಂದ್ಯ ರದ್ದು ಗೊಂಡ ಕಾರಣ ಶುಭಮನ್​ ಗಿಲ್​ ಸಾರಥ್ಯದ ಗುಜರಾತ್​ ಟೈಟಾನ್ಸ್​ ತಂಡ…

1 hour ago

ಕೋವಿಡ್ ಹೊಸ ರೂಪಾಂತರಿ ಪತ್ತೆ : 91 ಪ್ರಕರಣ ದಾಖಲು

ಈಗಾಗಲೇ ಒಂದು ಬಾರಿ ಜನ ಜೀವನವನ್ನು ಅಲ್ಲೋಲಾ ಕಲ್ಲೊಲಾ ಮಾಡಿದ್ದ ಕೊರೊನಾ ಮಾರಿ ಇದೀಗ ಮತ್ತೆ ಒಂದು ಹೊಸ ರೂಪದಲ್ಲಿ…

2 hours ago