News Karnataka Kannada
Monday, April 29 2024
ತಮಿಳುನಾಡು

ನಿರ್ದೇಶಕ ನನ್ನ ಮೇಲೆ ಹಲ್ಲೆ ಮಾಡಿದ್ರು: ನಟಿ ಮಮಿತ ಆರೋಪ

ಮೊದಲಂತು ಹಿರಿಯ ನಟ ನಟಿಯರಿಗೆ ಹಿರಿಯ ನಿರ್ದೇಶಕರು ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಹೊಡೆದು ತಿಳಿಸುವಂತೆ, ಹೊಡೆದು ನಟನೆ ಮಾಡಿಸುತ್ತಿದ್ದರು.ಅದನ್ನು ಅವರು ಪ್ರೇಕ್ಷಕರ ಮುಂದೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.ಆದರೆ ಈಗ ಹಾಗಿಲ್ಲ ಸಿನಿಮಾ ಸೆಟ್​ನಲ್ಲಿ ನಟ-ನಟಿಯರ ಮೇಲೆ ಮಾತ್ರವಲ್ಲ ಯಾರ ಮೇಲೆಯೂ ಹಲ್ಲೆ ಮಾಡುವಂತಿಲ್ಲ ಅಂಥಹಾ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಹೀಗಿರುವಾಗ ಇಲ್ಲಿ ಮಲಯಾಳಂ ಸಿನಿಮಾ ನಟಿ ಮೇಲೆ ನಿರ್ದೇಶಕ ಹಲ್ಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
Photo Credit : News Kannada

ಚೆನ್ನೈ:  ಮೊದಲಂತು ಹಿರಿಯ ನಟ ನಟಿಯರಿಗೆ ಹಿರಿಯ ನಿರ್ದೇಶಕರು ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಹೊಡೆದು ತಿಳಿಸುವಂತೆ, ಹೊಡೆದು ನಟನೆ ಮಾಡಿಸುತ್ತಿದ್ದರು.ಅದನ್ನು ಅವರು ಪ್ರೇಕ್ಷಕರ ಮುಂದೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.ಆದರೆ ಈಗ ಹಾಗಿಲ್ಲ ಸಿನಿಮಾ ಸೆಟ್​ನಲ್ಲಿ ನಟ-ನಟಿಯರ ಮೇಲೆ ಮಾತ್ರವಲ್ಲ ಯಾರ ಮೇಲೆಯೂ ಹಲ್ಲೆ ಮಾಡುವಂತಿಲ್ಲ ಅಂಥಹಾ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಹೀಗಿರುವಾಗ ಇಲ್ಲಿ ಮಲಯಾಳಂ ಸಿನಿಮಾ ನಟಿ ಮೇಲೆ ನಿರ್ದೇಶಕ ಹಲ್ಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ಸೂಪರ್ ಹಿಟ್ ತಮಿಳು ಸಿನಿಮಾಗಳಾದ ‘ಸೇತು’ (ಕನ್ನಡದಲ್ಲಿ ಹುಚ್ಚ) , ‘ಪಿತಾಮಗನ್’, ‘ನಾನ್ ಕಡವುಲ್’, ‘ಪರದೇಸಿ’, ‘ನಂದ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಕ ಬಾಲಾ ತಮ್ಮ ಹೊಸ ಸಿನಿಮಾದ ಚಿತ್ರೀಕರಣದ ವೇಳೆ ನಟಿಯೊಬ್ಬರನ್ನು ನಿಂದಿಸಿ ಹಲ್ಲೆ ಸಹ ಮಾಡಿದ್ದಾರಂತೆ. ಈ ಬಗ್ಗೆ ನಟಿ ಸ್ವತಃ ತಮ್ಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಬಾಲಾ ನಿರ್ದೇಶನ ಮಾಡುತ್ತಿರುವ ‘ವಾನಂಗನ್’ ಸಿನಿಮಾದಲ್ಲಿ ಮಲಯಾಳಂ ನಟಿ ಮಮಿತಾ ಬಿಜು ನಟಿಸಿದ್ದರು. ಸಿನಿಮಾದ ಚಿತ್ರೀಕರಣ ಪ್ರಾರಂಭವಾದಾಗ ಹಾಡೊಂದರ ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕ ಬಾಲಾ ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿಯೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿಯೂ ಸಂದರ್ಶನವೊಂದರಲ್ಲಿ ನಟಿ ಹೇಳಿಕೊಂಡಿದ್ದಾರೆ.

ʻವಿಲ್ಲಡಿಚ್ಚಾಂಪಾಟನ್’ ಹೆಸರಿನ ಜನಪದ ನೃತ್ಯ ಪ್ರಕಾರ ಒಳಗೊಂಡ ಹಾಡಿನ ಚಿತ್ರೀಕರಣ ಮಾಡಲಾಗುತ್ತಿತ್ತು, ಅದರಲ್ಲಿ ಜನಪದ ನೃತ್ಯವೂ ಇತ್ತು. ಈ ಪಾತ್ರದಲ್ಲಿ ಈ ರೀತಿಯ ಡ್ಯಾನ್ಸ್‌ ನನ್ನಿಂದ ಸಾಧ್ಯವೂ ಇಲ್ಲವೋ ಎಂಬ ಗೊಂದಲ ನನ್ನಲ್ಲಿ ಇತ್ತು.ಅದರಲ್ಲೂ ವಾದ್ಯವೊಂದನ್ನು ನುಡಿಸುತ್ತಾ ಹಾಡುತ್ತಾ ಕುಣಿಯಬೇಕಿತ್ತು. ನಾನು ಆ ವಾದ್ಯ ನುಡಿಸುವುದು ಕಲಿಯಲು ಯತ್ನಿಸುತ್ತಿದ್ದೆ’ ಎಂದಿದ್ದಾರೆ ನಟಿ ಮಮಿತಾ.

‘ಬಳಿಕ ನಿರ್ದೇಶಕ ಬಾಲ, ಸೆಟ್​ನಲ್ಲಿದ್ದ ಒಬ್ಬ ಮಹಿಳೆಯನ್ನು (‘ವಿಲ್ಲಡಿಚ್ಚಾಂಪಾಟನ್’ ಕಲಾವಿದೆ) ತೋರಿಸಿ ಆಕೆ ನುಡಿಸುತ್ತಿರುವುದು ನೋಡಿ ಅದನ್ನು ಅನುಕರಿಸುವಂತೆ ಹೇಳಿದರು. ನಾನು ಪ್ರಯತ್ನಿಸಿದೆ ನನ್ನಿಂದ ಮೊದಲ ಬಾರಿಗೆ ಅದು ಸಾಧ್ಯವಾಗಲಿಲ್ಲ. ಮೂರು ಟೇಕ್​ಗಳಲ್ಲಿ ನಾನು ಓಕೆ ಮಾಡಿದೆ. ಆದರೆ ಆ ನಡುವೆ ಬಾಲಾ ಸರ್ ನನ್ನನ್ನು ಬೈಯ್ಯುತ್ತಲೇ ಇದ್ದರು. ಒಮ್ಮೆಯಂತೂ ನನಗೆ ಹೊಡೆದುಬಿಟ್ಟರು’ ಎಂದಿದ್ದಾರೆ ಮಮಿಯಾ.

ಸಿನಿಮಾ ಸೆಟ್‌ನಲ್ಲಿ ನಾನು ಬೈಯ್ಯುತ್ತಿರುತ್ತೇನೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದು ಮೊದಲೆ ಬಾಲಾ ಸರ್‌ ಹೇಳಿದ್ದರು ಅದಕ್ಕೆ ನಾನು ಕೂಡ ಮಾನಸಿಕವಾಗಿ ಸಿದ್ಧಇದ್ದೆ ಆದರೂ ಸಹ ನನಗೆ ಅವರು ಬೈದಾಗ ಆ ಕ್ಷಣಕ್ಕೆ ಬಹಳ ಬೇಜಾರಾಯ್ತು’ ಎಂದಿದ್ದಾರೆ. ಸೆಟ್​ನಲ್ಲಿ ಸೂರ್ಯ ಇರುತ್ತಿದ್ದರಲ್ಲ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬ ಪ್ರಶ್ನೆಗೆ, ‘ಸೂರ್ಯ ಅವರಿಗೆ ಬಾಲಾ ಅವರ ವ್ಯಕ್ತಿತ್ವ ಮೊದಲೇ ಗೊತ್ತು, ಅವರು ಈ ಮೊದಲೂ ಸಹ ಅವರೊಟ್ಟಿಗೆ ಕೆಲಸ ಮಾಡಿದ್ದಾರೆ ಹಾಗಾಗಿ ಅವರು ಆ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ನನಗೆ ಅದೆಲ್ಲ ಮೊದಲು ಹಾಗಾಗಿ ಬಹಳ ಬೇಸರವಾಗಿತ್ತು’ ಎಂದಿದ್ದಾರೆ.

ಹಾಗಾಗಿ ವಾನಂಗನ್’ ಸಿನಿಮಾದಿಂದ ಸೂರ್ಯ ಹೊರ ನಡೆದರು. ನಟಿ ಮಮಿತಾ ಬಿಜು ಸಹ ಆ ಸಿನಿಮಾದಿಂದ ಹೊರ ನಡೆದರು.ಸೂರ್ಯ ಬದಲು ಅರುಣ್ ವಿಜಯ್, ‘ವಾನಂಗನ್’ ಸಿನಿಮಾದ ನಾಯಕರಾಗಿ ಚಿತ್ರೀಕರಣ ಪೂರ್ತಿಗೊಳಿಸಿದ್ದಾರೆ. ಸಿನಿಮಾ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು