ತಮಿಳು

ನಟ ದಳಪತಿ ವಿಜಯ್ ಜಾತಿ ತಮಿಳು ಎಂದ ತಂದೆ ಚಂದ್ರಶೇಖರ್

ತಮಿಳು ಚಿತ್ರರಂಗದಲ್ಲಿ ನಟ ದಳಪತಿ ವಿಜಯ್ ಅವರಿಗೆ ಭಾರೀ ಬೇಡಿಕೆಯಿದೆ. ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ತಮಿಳು ನಟರಲ್ಲಿ ವಿಜಯ್ ಮೇಲುಗೈ ಸಾಧಿಸಿದ್ದಾರೆ. ಕೊರೊನಾ, ಲಾಕ್‌ಡೌನ್ ಮಧ್ಯೆ ರಿಲೀಸ್ ಆಗಿದ್ದ ದುನಿಯಾ ವಿಜಯ್ ಅವರ ‘ಮಾಸ್ಟರ್’ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗಿ ಒಳ್ಳೆಯ ಮೆಚ್ಚುಗೆ ಪಡೆದಿತ್ತು. ವಿಜಯ್ ನಟನೆಗೆ ಪ್ರೇಕ್ಷಕರು ಚಪ್ಪಾಳೆ ಹೊಡೆದಿದ್ದರು.ನಟ ದಳಪತಿ ವಿಜಯ್ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು ಎಂಬ ಬಗ್ಗೆ ಆಗಾಗ ಚರ್ಚೆಯಾಗುತ್ತಲಿರುತ್ತದೆ. ಇತ್ತೀಚೆಗೆ ‘ಸಾಯಮ್’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ದಳಪತಿ ವಿಜಯ್ ತಂದೆ ಎಸ್‌ಎ ಚಂದ್ರಶೇಖರ್ ಅವರು ನನ್ನ ಮಗನ ಜಾತಿ ತಮಿಳು ಎಂದು ಹೇಳಿದ್ದಾರೆ.

“ಶಾಲೆಯಲ್ಲಿ ಮಕ್ಕಳ ಮೇಲೆ ಜಾತಿ ಅನ್ನೋದು ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಮೇಲೆ ಈ ಸಿನಿಮಾ ನಿಂತಿದೆ. ಸಮಾಜಕ್ಕೆ ಪ್ರಯೋಜನಕ್ಕೆ ಬರುವ ಸಿನಿಮಾ ನೀಡುವ ನಿರ್ದೇಶಕರನ್ನು ಕಂಡರೆ ನನಗೆ ತುಂಬ ಇಷ್ಟ. ಜಾತಿ ವ್ಯವಸ್ಥೆಯಿಂದ ಹೊರಬರಲು ಏನು ಮಾಡಬೇಕು? ನನ್ನ ಮಗನನ್ನು ಶಾಲೆಗೆ ಸೇರಿಸುವಾಗ ಅಪ್ಲಿಕೇಶನ್‌ನಲ್ಲಿ ಜಾತಿ, ಧರ್ಮ ಕಾಲಂನಲ್ಲಿ ತಮಿಳು ಅಂತ ಹಾಕಿದ್ದೆ. ಆರಂಭದಲ್ಲಿ ನಮ್ಮ ಅಪ್ಲಿಕೇಶನ್‌ನ್ನು ಶಾಲೆಯವರು ಒಪ್ಪಲಿಲ್ಲ. ಆಗ ನಾನು ನೀವು ಅಪ್ಲಿಕೇಶನ್ ಒಪ್ಪಿಕೊಳ್ಳದಿದ್ದರೆ ನಾನು ನಿಮ್ಮ ಶಾಲೆ ಮುಚ್ಚಿಸಲು ಹೋರಾಟ ಮಾಡುವೆ ಎಂದು ಬೆದರಿಕೆ ಹಾಕಿದೆ. ಆಗ ಅವರು ಅಪ್ಲಿಕೇಶನ್ ಸ್ವೀಕರಿಸಿದರು” ಎಂದು ಎಸ್‌ಎ ಚಂದ್ರಶೇಖರ್ ಹೇಳಿದ್ದಾರೆ.

“ನೀವು ವಿಜಯ್‌ಗೆ ಸಂಬಂಧಪಟ್ಟ ಯಾವುದೇ ಸೆರ್ಟಿಫಿಕೇಟ್ ನೋಡಿದರೂ ಅಲ್ಲಿ ಜಾತಿ ಕಾಲಂನಲ್ಲಿ ತಮಿಳು ಎಂದು ನಮೂದಾಗಿರುತ್ತದೆ. ನಾವು ಜಾತಿಗೆ ಮಹತ್ವ ಕೊಡುತ್ತಿರುವುದು ಈ ರೀತಿಯಲ್ಲಿ. ಶಾಲೆಯಲ್ಲಿ ಮಕ್ಕಳಿಗೆ ನಾವು ಅವರ ತಲೆಯಲ್ಲಿ ಏನು ತುಂಬುತ್ತೇವೆ ಎನ್ನೋದು ಮುಖ್ಯವಾಗುತ್ತದೆ. ಈ ಮೂಲಕ ಮುಂಬರುವ 20 ವರ್ಷಗಳಲ್ಲಿ ಜಾತಿ ಪದ್ಧತಿಯನ್ನು ತೊಡೆದುಹಾಕಬಹುದು” ಎಂದು ಎಸ್‌ಎ ಚಂದ್ರಶೇಖರ್ ಹೇಳಿದ್ದಾರೆ.

Swathi MG

Recent Posts

ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಮಹಿಳೆಯ ತಲೆ ಸಿಕ್ಕಿಕೊಂಡು ಪರದಾಟ

ಕೆಎಸ್‌ಆರ್‌ಟಿಸಿ ಬಸ್‌ ನ ಕಿಟಕಿಯಿಂದ ಉಗುಳಲು ಹೋಗಿ ಮಹಿಳೆಯೊಬ್ಬರ ತಲೆ ಸಿಕ್ಕಿಕೊಂಡಿರುವ ಘಟನೆ ನಡೆದಿದೆ.

1 min ago

92ನೇ ಜನ್ಮದಿನ ಆಚರಿಸಿಕೊಳ್ಳದಿರಲು ಎಚ್‌.ಡಿ. ದೇವೇಗೌಡರ ನಿರ್ಧಾರ!

ಇದೇ ತಿಂಗಳ 18 ರಂದು 92ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಈ ಬಾರಿ ಹುಟ್ಟುಹಬ್ಬ…

3 mins ago

ಬಂಡೀಪುರ ರಸ್ತೆಯಲ್ಲಿ ಜೋಡಿ ಜಿಂಕೆಗಳ ಕುಸ್ತಿ

ವಾಹನಗಳ ಸಂಚಾರವಿದ್ದರೂ ರಸ್ತೆಬದಿಯಲ್ಲಿ ಜೋಡಿ ಜಿಂಕೆಗಳು ನಾನಾ-ನೀನಾ ಎಂದು ಕುಸ್ತಿ ಮಾಡಿದ ಘಟನೆ ಮೈಸೂರು-ಉಟಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಬಂಡೀಪುರದ…

20 mins ago

‘ಜೀವನಕ್ಕೆ ಹೊಸಬರು ಬರಲಿದ್ದಾರೆ’: ಕುತೂಹಲ ಮೂಡಿಸಿದ ಪ್ರಭಾಸ್ ಪೋಸ್ಟ್ ವೈರಲ್‌

ಪ್ರಭಾಸ್ ಮದುವೆ ಬಗ್ಗೆ ಆಗಾಗ್ಗೆ ಸುದ್ದಿ ಹರಡುತ್ತಲೇ ಇರುತ್ತದೆ. ದರಲ್ಲಿಯೂ ನಟಿ ಅನುಷ್ಕಾ ಶೆಟ್ಟಿ ಜೊತೆಗಂತೂ ಪ್ರಭಾಸ್ ಮದುವೆಯೇ ಆಗಬಿಟ್ಟಿದ್ದಾರೆ…

26 mins ago

ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಅನುಮಾನಾಸ್ಪದ ರೀತಿಯಲ್ಲಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ಮೃತಪಟ್ಟ ಘಟನೆ ಆನೇಕಲ್ ತಾಲೂಕಿನ ಚಂದಾಪುರ ಸಮೀಪ ನಡೆದಿದೆ.

34 mins ago

ಮಂತ್ರಿಮಾಲ್​ನ ಬೀಗ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ

ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆ ಕಳೆದ ಶುಕ್ರವಾರ ಪ್ರತಿಷ್ಠಿತ ಮಂತ್ರಿಮಾಲ್ ನನ್ನು ಬಂದ್ ಮಾಡಲಾಗಿತ್ತು, ಮಾಲ್‌ ನ ಬೀಗ ತೆರೆಯುವಂತೆ ಬಿಬಿಎಂಪಿಗೆ…

51 mins ago