ಸಮಂತಾ ನಾಗಚೈತನ್ಯರಿಂದ ವಿಚ್ಛೇದನ ಪಡೆದ ಬಳಿಕ ಸಿನಿಮಾ ರಂಗದ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ. ಆದರೆ ವ್ಯಕ್ತಿಯೊರ್ವ ಅವರ ವೈಯಕ್ತಿಕ ಜೀವನ ಬಗ್ಗೆ ಬಹಳ ಕೆಟ್ಟಾದಾಗಿ ಕಮೆಂಟ್ ಮಾಡಿದ್ದು, ಅವನಿಗೆ ಸಮಂತಾ ತಮ್ಮ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಚಿತ್ರದಲ್ಲಿ ಸಮಂತಾ ಹೆಜ್ಜೆ ಹಾಕಿದ ಸ್ಪೆಷಲ್ ಸಾಂಗ್ ‘ಊ ಅಂಟಾವಾ.. ಊ ಊ ಅಂಟಾವಾ’ ಹಾಡು ಸಖತ್ ಹಿಟ್ ಆಗಿದೆ. ಯೂಟ್ಯೂಬ್ನಲ್ಲಿ 100 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿ ನಂ-1 ಟ್ರೆಂಡಿಂಗ್ನಲ್ಲಿದೆ. ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಮರೆತ್ತು ತನ್ನ ವೃತಿ ಜೀವನದತ್ತ ಸಮಂತಾ ಹೆಚ್ಚು ಪೋಕಸ್ ಮಾಡುತ್ತಿದ್ದಾರೆ. ಆದರೆ ಇದನ್ನು ಸಹಿಸಿಕೊಳ್ಳಲಾಗದ ಕಮರಾಲಿ ದುಕಂದರ್ ಎಂಬ ವ್ಯಕ್ತಿಯೊಬ್ಬ ಟ್ವಿಟರ್ನಲ್ಲಿ ಸಮಂತಾ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ್ದಾನೆ.
ಟ್ಟಿಟರ್ನಲ್ಲಿ ಸಮಂತಾರನ್ನು ಟ್ಯಾಗ್ ಮಾಡಿ ‘ಸಮಂತಾ ವಿಚ್ಛೇದಿತ ಪಾಳುಬಿದ್ದ ಸೆಕೆಂಡ್ ಹ್ಯಾಂಡ್ ವಸ್ತುವಾಗಿದ್ದು, ಸಂಭಾವಿತ ವ್ಯಕ್ತಿಯಿಂದ 50 ಕೋಟಿ ತೆರಿಗೆ ಮುಕ್ತ ಹಣವನ್ನು ದೋಚಿದ್ದಾರೆ!’ ಎಂದು ಕಮೆಂಟ್ ಮಾಡಿದ್ದಾನೆ. ಈ ಕಮೆಂಟ್ಗೆ ಪ್ರತಿಕ್ರಿಯಿಸಿದ ಸಮಂತಾ ಅವನನ್ನು ಟ್ಯಾಗ್ ಮಾಡಿ ‘ಕಮರಾಲಿ ದುಕಂದರ್ ದೇವರು ನಿಮ್ಮ ಆತ್ಮಕ್ಕೆ ಆಶೀರ್ವದಿಸಲಿ’ ಎಂದು ಪೋಸ್ಟ್ ಮಾಡಿದ್ದಾರೆ.