Bengaluru 27°C

ಖ್ಯಾತ ನಿರ್ಮಾಪಕ ಜಾಕ್ ಮಂಜು ವಿರುದ್ಧ ಎಫ್ಐಆರ್ ದಾಖಲು!

ವಿಕ್ರಾಂತ್ ರೋಣ, ಡೆಡ್ಲಿ ಸೋಮ ಸಿನಿಮಾ ನಿರ್ಮಾಪಕನ ಮೇಲೆ ಎಫ್ಐಆರ್ ದಾಖಲಾಗಿದೆ. ನಟ ಸುದೀಪ್ ಅವರ ಆಪ್ತರಾಗಿರುವ ನಿರ್ಮಾಪಕ ಜಾಕ್ ಮಂಜು ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಕ್ರಾಂತ್ ರೋಣ, ಡೆಡ್ಲಿ ಸೋಮ ಸಿನಿಮಾ ನಿರ್ಮಾಪಕನ ಮೇಲೆ ಎಫ್ಐಆರ್ ದಾಖಲಾಗಿದೆ. ನಟ ಸುದೀಪ್ ಅವರ ಆಪ್ತರಾಗಿರುವ ನಿರ್ಮಾಪಕ ಜಾಕ್ ಮಂಜು ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


‘ಮಾಯಾನಗರಿ’ ಸಿನಿಮಾ ನಿರ್ಮಾಪಕ ಶಿವಶಂಕರ್ ಅಲಿಯಾಸ್ ಶಶಾಂಕ್ ಆರಾಧ್ಯ ಅವರು ಜಾಕ್ ಮಂಜು ಹಾಗೂ ಸ್ಯಾಂಡಲ್​ವುಡ್ ಪಿಕ್ಚರ್ಸ್​ನ ಶಿವಕುಮಾರ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ನಟ ಅನೀಶ್ ನಟಿಸಿದ್ದ ಮಾಯಾನಗರಿ ಚಿತ್ರ ಸಂಬಂಧ ದೂರು ದಾಖಲಾಗಿದೆ.


ಮಾಯಾನಗರಿ ಚಿತ್ರಕ್ಕೆ ಸಿದ್ದೇಶ್ ಎಂಬಾತನನ್ನ ಎಕ್ಸಿ​ಕ್ಯೂಟಿವ್ ಪ್ರೊಡ್ಯೂಸರ್ ಆಗಿ ನೇಮಕ ಮಾಡಲಾಗಿತ್ತು. ಚಿತ್ರಕ್ಕೆ ಸಿದ್ದೇಶ್ ಕೂಡ 8 ಲಕ್ಷದವರೆಗೂ ಬಂಡವಾಳ ಹಾಕಿದ್ದರು. ಆ ನಂತರದ ಚಿತ್ರೀಕರಣಕ್ಕೆ ಹಣ ಒದಗಿಸಿಕೊಡು ಎಂದು ದೂರುದಾರ ಶಶಾಂಕ್ ಸಿದ್ದೇಶ್​​ಗೆ ಕೇಳಿಕೊಂಡಿದ್ದರಂತೆ.


ಹೀಗಾಗಿ ಸಿದ್ದೇಶ್, ಮುರಳಿ ಅನ್ನೋರ ಮೂಲಕ ಶಾಲಿನಿ ಆರ್ಟ್ ಮಾಲೀಕ ಜಾಕ್ ಮಂಜು ಅವರನ್ನು ಪರಿಚಯ ಮಾಡಿಸಿದ್ದರು. ಈ ವೇಳೆ ಇಬ್ಬರ ಮಧ್ಯೆ ಅಗ್ರಿಮೆಂಟ್ ನಡೆದಿತ್ತು ಅನ್ನೋದು ಶಶಾಂಕ್ ಅವರ ಆರೋಪವಾಗಿದೆ. ಎರಡು ಬ್ಲ್ಯಾಂಕ್ ಚೆಕ್​ಗೆ ಸೈನ್ ಮಾಡಿ ನಂತರ ಖಾಲಿ ಲೆಟರ್ ಹೆಡ್​ನಲ್ಲಿ ಸಹಿ ಮಾಡಿಸಿಕೊಂಡಿದ್ದರು. ಮೂರ್ನಾಲ್ಕು ದಿನಗಳ ಬಳಿಕ ಹಣ ಕೊಡೋದಾಗಿ ಹೇಳಿ ಹಣ ಕೊಡದೆ ವಂಚನೆ ಮಾಡಿದ್ದಾರೆ ಎಂದು ಶಶಾಂಕ್ ಆರೋಪಿಸಿದ್ದಾರೆ.


ಹಣ ಕೊಡದೇ ಚಿತ್ರ ಮಾರಾಟದ ಅಗ್ರಿಮೆಂಟ್​ಗೆ ಸಹಿ ಹಾಕಲು ಒತ್ತಾಯ ಮಾಡಿದ್ದಾರೆ. ಸಹಿ ಮಾಡದಿದ್ರೆ ಸಿನಿಮಾ ಬಿಡುಗಡೆಗೆ ತೊಂದರೆ ಮಾಡುತ್ತೇವೆ ಎಂದು ಬೆದರಿಕೆ ಕೂಡ ಹಾಕಿದ್ದಾರಂತೆ. ಅಲ್ಲದೇ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಹೀಗಾಗಿ ದಾಖಲಾತಿಗಳನ್ನ ಮಿಸ್​ ಯೂಸ್ ಮಾಡಿ ವಂಚನೆ ಮಾಡಿದ್ದಾರೆ ಎಂದು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Nk Channel Final 21 09 2023