ನನ್ನ ಮಕ್ಕಳು ಜೆಂಟಲ್ ಮೆನ್ಸ್ ಆಗಬೇಕು ಎನ್ನುವುದು ನನ್ನ ಆಸೆ ಎಂದ ಕರೀನಾ ಕಪೂರ

ಮುಂಬೈ : ಬಾಲಿವುಡ್ ನ ಖ್ಯಾತ ನಟಿ ಕರೀನಾ ಕಪೂರ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.ಮೊನ್ನೆ ತಾನೆ ಅವರ ಎರಡೆನೇಯ ಮಗನ ಜೊತೆ ಕಂಡ ಕರೀನಾ ದಂಪತಿ ಇದೀಗ ತಮ್ಮ ಇಬ್ಬರು ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಹೇಳಿಕೊಂಡಿದ್ದಾರೆ.ನಿಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತೀರ ಎಂಬ ಅಭಿಮಾನಿಗಳ ಪ್ರಶ್ನೆಗೆ ಕರೀನಾ ನೀಡಿರುವ ಹೇಳಿಕೆ ಈಗ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ನಮ್ಮಂತೆ ನನ್ನಿಬ್ಬರ ಮಕ್ಕಳು ಬಾಲಿವುಡ್ ಗೆ ಬರುವುದು, ನಟರಾಗೋದು ನನಗೆ ಇಷ್ಟವಿಲ್ಲ ಎಂದಿದ್ದಾರೆ.

ಸಿನಿಮಾ ಸ್ಟಾರ್ಸ್ ಕುಟುಂಬದಿAದ ಬಂದ ಮಕ್ಕಳು ಸಹಜವಾಗೇ ಸಿನಿ ಜಗತ್ತಿಗೆ ಬರುತ್ತಾರೆ ಎಂದು ಭಾವಿಸುತ್ತಾರೆ. ಆದರೆ ಕರೀನಾಗೆ ಅದು ಇಷ್ಟವಿಲ್ಲಂತೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕರೀನಾ, ತಮ್ಮಂತೆ ಮಕ್ಕಳು ಬಾಲಿವುಡ್ ನೇ ಆಯ್ಕೆ ಮಾಡಬೇಕೆಂದು ಇಲ್ಲ. ಸಿನಿಮಾ ನಟರಾಗಿ ಎಂದು ನಾನು ಅವರಿಗೆ ಹೇಳುವುದೂ ಇಲ್ಲ. ನಾನು, ಸೈಫ್ ಸ್ಟಾರ್ಸ್ ಆದ ಮಾತ್ರಕ್ಕೆ ಅವರು ಬಾಲಿವುಡ್ ನಲ್ಲೇ ತಮ್ಮ ಕೆರಿಯರ್ ಕಂಡುಕೊಳ್ಳಬೇಕಿಲ್ಲ. ಅವರಿಗೆ ತುಂಬಾ ಆಯ್ಕೆಗಳಿವೆ. ಬೇರೆ ಏನನ್ನಾದರೂ ಆಯ್ಕೆ ಮಾಡಬಹುದು. ನಾನು ನನ್ನ ಇಬ್ಬರು ಗಂಡು ಮಕ್ಕಳನ್ನು ಚನ್ನಾಗಿ ಬೆಳೆಸಿದ್ದೀನಿ. ಅವರಿಬ್ಬರು ಜೆಂಟಲ್ ಮ್ಯಾನ್ಸ್ ಅಂತ ಕೇಳಲು ಇಷ್ಟಪಡ್ತಿನಿ.

ನನ್ನ ಮಗ ಟಿಮ್ ಬಂದು ಬೇರೆ ಏನಾದರೂ ಮಾಡಬೇಕೆಂದು ಹೇಳಿದರೆ ನನಗೆ ಸಂತೋಷವಾಗುತ್ತದೆ. ಅವನು ಮೌಂಟ್ ಎವರೆಸ್ಟ್ ಏರಬಹುದು, ಅದು ಅವನ ಆಯ್ಕೆ. ಏನೇ ಆಗಲು ಬಯಸಿದರೂ ನಾನು ನನ್ನ ಹುಡುಗರನ್ನು ಬೆಂಬಲಿಸ್ತೇನೆ ಎಂದಿದ್ದಾರೆ. ನಾನು ಹೆಲಿಕಾಪ್ಟರ್ ಅಮ್ಮನಂತೆ ಇರಲು ಬಯಸುವುದಿಲ್ಲ. ಸ್ವಲ್ಪ ತೊಂದರೆ ಆದ ಕೂಡಲೇ ನಾನು ಬಂದು ಅವರನ್ನು ಮೇಲಕ್ಕೆ ಎತ್ತಲ್ಲ. ಅವರೇ ಬಿದ್ದು ಏಳುವುದನ್ನು ಕಲಿಯಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ಅದು ನನ್ನ ತಾಯಿ ನನಗೆ ಕಲಿಸಿದ ಪಾಠ. ನಿಮಗೆ ಬೇಕಾದುದನ್ನು ಮಾಡಿ,ತಪ್ಪುಗಳನ್ನು ಮಾಡಿ ನಂತರ ಅವುಗಳನ್ನು ಸರಿಪಡಿಸಲು ಕಲಿಯಿರಿ ಎಂದು ನನ್ನ ತಾಯಿ ನನಗೆ ಹೇಳಿಕೊಟ್ಟಿದ್ದರು.

Raksha Deshpande

Recent Posts

ಇಂದು ಎಚ್‌ ಡಿ ರೇವಣ್ಣ ಬೇಲ್​ ಅರ್ಜಿ ವಿಚಾರಣೆ

ಕಿಡ್ನಾಪ್‌ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ ಅವರು ಇಂದು ಮತ್ತೆ ಜಾಮೀನು ಅರ್ಜಿ ವಿಚಾರಣೆ…

51 mins ago

ಚುನಾವಣೆಗೂ ಮುನ್ನ ಸ್ಫೋಟ : ಮೂವರು ಅಪ್ರಾಪ್ತರು ಸೇರಿ ನಾಲ್ವರು ಸಾವು!

ಚುನಾವಣೆಗೂ ಮುನ್ನ ದಿನವೇ ಜಾರ್ಖಂಡ್‌ನ ಪಲಮುವಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಅಪ್ರಾಪ್ತರು ಸೇರಿದಂತೆ ಕನಿಷ್ಠ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು…

1 hour ago

ಚುನಾವಣೆ ಹೊತ್ತಲ್ಲೆ ಶಂಕಿತ ಪಾಕ್ ಡ್ರೋನ್ ಹಾರಾಟ : ಸೇನೆಯಿಂದ ಗುಂಡಿನ ದಾಳಿ

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಎಲ್‌ಒಸಿ ಬಳಿ ಶನಿವಾರ ತಡರಾತ್ರಿ ಶಂಕಿತ ಪಾಕಿಸ್ತಾನಿ ಡ್ರೋನ್ ಮೇಲೆ ಭಾರತೀಯ ಸೇನಾ…

2 hours ago

ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಹೆಚ್ಚು ಮಳೆಯಾಗುವ ನಿರೀಕ್ಷೆ: ಯೆಲ್ಲೋ ಅಲರ್ಟ್

ಇಂದು ರಾಜ್ಯದ 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ದಕ್ಷಿಣ ಕನ್ನಡ, ಉಡುಪಿ,…

2 hours ago

ಮ್ಯಾಗ್ನಸ್ ಕಾರ್ಲ್‌ಸನ್‌ ವಿರುದ್ಧ ಆರ್.ಪ್ರಜ್ಞಾನಂದಗೆ ಮತ್ತೊಂದು ಗೆಲುವು

ಸೂಪರ್‌ಬಿಟ್‌ ರ್‍ಯಾಪಿಡ್ ಮತ್ತು ಬ್ಲಿಟ್ಜ್‌ ಚೆಸ್‌ ಟೂರ್ನಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್‌ ವಿರುದ್ಧ ಭಾರತದ ಗ್ರ್ಯಾಂಡ್…

2 hours ago

ನಟ ಚೇತನ್​ ಚಂದ್ರ ಮೇಲೆ 20 ಜನರಿಂದ ಹಲ್ಲೆ : ದೂರು ದಾಖಲು

ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಯುವ ನಟ ಚೇತನ್ ಚಂದ್ರ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆದಿದೆ. ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ…

2 hours ago