ಮೈಸೂರು: ಮೈಸೂರಿನ ಉದ್ಯಮಿ ಆದಿಲ್ ಖಾನ್ ಅವರನ್ನು ವಿವಾಹವಾಗಿರುವ ಬಾಲಿವುಡ್ ಸೆಲೆಬ್ರಿಟಿ ರಾಖಿ ಸಾವಂತ್ ಇಂದು ಮೈಸೂರಿನ ಕೋರ್ಟ್ಗೆ ಹಾಜರಾದರು.
ಇತ್ತೀಚೆಗೆ ಸಾವಂತ್ ಸಂಸಾರದಲ್ಲಿ ಭಿನ್ನಾಭಿಪ್ರಾಯದ ಬಿರುಗಾಳಿ ಎದ್ದಿದ್ದು, ರಾಖಿ ಸಾವಂತ್ಗೆ ಹಲ್ಲೆ ನಡೆಸಿದ ಆರೋಪದಲ್ಲಿ ಮುಂಬೈ ಪೊಲೀಸರು ಆದಿಲ್ ಖಾನ್ ನನ್ನ ಬಂಧಿಸಿದ್ದರು. ಕೋರ್ಟ್ಗೆ ಹಾಜರಾದ ವೇಳೆ ಹೇಳಿಕೆ ನೀಡಿದ ರಾಖಿ, ಆದಿಲ್ಗೆ ಬೇಲ್ ನೀಡದಂತೆ ಕೋರ್ಟ್ಗೆ ಮನವಿ ಮಾಡಿದ್ದೇನೆ. ಕಾನೂನು ಪ್ರಕಾರವಾಗಿ ನಾವಿಬ್ಬರೂ ಈಗಲೂ ಪತಿ, ಪತ್ನಿಯರು.
ಆದಿಲ್ ಅವರ ತಂದೆ ನಾನು ಹಿಂದು ಆಗಿರುವ ಕಾರಣ ತಮ್ಮ ಕುಟುಂಬದ ಸದಸ್ಯೆ ಎಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಆದಿಲ್ ನನ್ನಿಂದ 1.65 ಕೋಟಿ ರೂ.ಗಳನ್ನು ಪಡೆದಿದ್ದು, ಹಿಂದಿರುಗಿಸಿಲ್ಲ. ನನಗೆ ಕೋರ್ಟ್ ಮೇಲೆ ಸಂಪೂರ್ಣ ಭರವಸೆ ಇದ್ದು, ನ್ಯಾಯ ಪಡೆಯುವ ವಿಶ್ವಾಸವಿದೆ. ಎಂದು ಕಟ್ಟೀರಿಟ್ಟರು. ಅಲ್ಲದೆ ಕುಸಿದು ಬಿದ್ದ ಘಟನೆಯೂ ನಡೆಯಿತು.