Categories: ಮನರಂಜನೆ

ಲತಾಜಿ ಹಾಡಿನಿಂದಲೇ ನಾನು ಬಾಲಿವುಡ್‌ಗೆ ಕಾಲಿಟ್ಟೆ: ಶ್ರೇಯಾ ಭಾವನಾತ್ಮಕ ಪೋಸ್ಟ್

ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಇಹಲೋಕ ತ್ಯಜಿಸಿದ್ದಾರೆ. ಇಡೀ ದೇಶವೇ ದುಃಖದಲ್ಲಿದ್ದು, ಗಾಯಕಿ ಶ್ರೇಯಾ ಘೋಷಾಲ್ ಕೂಡ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ದಿನದಿಂದ ನನ್ನ ಕಣ್ಣೀರು ನಿಲ್ಲುತ್ತಲೇ ಇಲ್ಲ. ನಿಮ್ಮ ಹಾಡುಗಳನ್ನು ಕೇಳಿದಷ್ಟು ದುಃಖವಾಗುತ್ತಿದೆ. ನಿಮ್ಮ ಧ್ವನಿ ನನಗೆ ತುಂಬಾ ಆತ್ಮೀಯ ಲತಾ ಜಿ.

ನನ್ನ ಬಾಲ್ಯದಲ್ಲಿ, ಖುಷಿಯಾದಾಗ, ದುಃಖ ಆದಾಗ, ಸಿಟ್ಟು ಬಂದಾಗ, ಗೆದ್ದಾಗ, ಸೋತಾಗ ನಿಮ್ಮ ಹಾಡುಗಳನ್ನು ಕೇಳುತ್ತಿದ್ದೆ. ನಿಮ್ಮ ಹಾಡುಗಳನ್ನು ಕಲಿಯಲು ನಾನು ಪಟ್ಟ ಪ್ರಯತ್ನಗಳು ಅಷ್ಟಿಷ್ಟಲ್ಲ.

ನಿಮ್ಮ ಹಾಡಿನಿಂದಲೇ ನಾನು ಮೊದಲ ಕಾಂಪಿಟೇಶನ್ ಗೆದ್ದಿದ್ದು, ನಿಮ್ಮ ಹಾಡಿನಿಂದಲೇ ನಾನು ಮೊದಲು ಆಡಿಶನ್ ನೀಡಿದ್ದು, ನಿಮ್ಮ ಹಾಡಿನಿಂದಲೇ ನಾನು ಬಾಲಿವುಡ್‌ಗೆ ಎಂಟ್ರಿ ನೀಡಿದ್ದು. ನಿಮ್ಮ ಅಗಲಿಕೆಯ ನೋವು ವೈಯಕ್ತಿಕ ಆಗಿಬಿಟ್ಟಿದೆ. ನೀವು ಎಂದಿಗೂ ನನ್ನ ಗುರು.

ನನ್ನನ್ನು ಪ್ರೀತಿಯಿಂದ ಸಾಕಷ್ಟು ಬಾರಿ ಆಶೀರ್ವದಿಸಿದ್ದೀರಿ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ. ನಿಮ್ಮನ್ನು ಕಳೆದುಕೊಂಡ ದುಃಖ ನನ್ನ ಮನಸ್ಸಿನ ಆಳದಲ್ಲಿ ಬೇರೂರಿದೆ, ನನ್ನ ಜೀವನದ ಒಂದು ಅಂಶ ನಿಮ್ಮ ಜೊತೆ ತೆರಳಿದೆ ಎಂದಿದ್ದಾರೆ.

Sneha Gowda

Recent Posts

ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ

ನಗರದ ಮಂಗಲಪೇಟ್‌ ಸಮೀಪದ ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ ಸಂಭ್ರಮದಿಂದ ನಡೆಯಿತು.

20 mins ago

ಆಧಾರ್‌ ದುರುಪಯೋಗ: ಕರ್ನಾಟಕದಿಂದ 2.95 ಲಕ್ಷ ದೂರು ದಾಖಲು

ಜನರು ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಸೈಬರ್ ವಂಚಕರು, ಒಂದೇ ಸಂಖ್ಯೆ ಸಿಮ್‌ಗಳನ್ನು ಖರೀದಿಸಿರುವ ಸಂಬಂಧ ಟೆಲಿಕಾಂ ಅನಾಲಿಟಿಕಲ್‌ ಫಾರ್ ಫ್ರಾಡ್‌…

33 mins ago

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ: ಆರೆಂಜ್, ಯೆಲ್ಲೋ ಅಲರ್ಟ್‌ ಘೋಷಣೆ

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಪ್ರತ್ಯೇಕ ಕಡೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಗುಡುಗು ಸಹಿತ ಮಿಂಚು ಮತ್ತು…

50 mins ago

ಆರೋಗ್ಯದ ವೃದ್ಧಿಗೆ ಕಾಮಕಸ್ತೂರಿ ಬೀಜದ ಪಾನಕ

ಮನುಷ್ಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಅದೇ ರೀತಿ ಖಾಲಿ ಹೊಟ್ಟೆಯಲ್ಲಿ ಕಾಮಕಸ್ತೂರಿ ಬೀಜಗಳನ್ನು ಕುಡಿಯುವುದು ಬಹಳಷ್ಟು…

58 mins ago

ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ ಹೀಗಿದೆ!

ಚಿನ್ನ ಮತ್ತು ಬೆಳ್ಳಿ ಬೆಲೆ ಈ ವಾರವೂ ಏರಿಳಿತಗಳನ್ನು ಕಂಡಿದ್ದು, ಬೆಳ್ಳಿ ಬೆಲೆ ಕಳೆದ 10 ದಿನದಲ್ಲಿ ಗ್ರಾಮ್​ಗೆ 4…

1 hour ago

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗೆದ್ದು ಬೀಗಿದ ಆರ್​​​ಸಿಬಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್​ ಪಂದ್ಯದಲ್ಲಿ ವಿರಾಟ್…

2 hours ago